ಜನಪರ ಪ್ರಣಾಳಿಕೆ ನೀಡಲು ಕೊರಟಗೆರೆಯ ಮತದಾರರೇ ಕಾರಣ:ಡಾ.ಜಿ.ಪರಮೇಶ್ವರ್
ಕೊರಟಗೆರೆ: ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಗುರುವಾರದಂದು ಕೊಳಾಲ, ಚಿನ್ನಹಳ್ಳಿ, ಮಾವತ್ತೂರು ಮತ್ತು ವಜ್ಜನ ಕುಡಿಕೆ ಗ್ರಾಮ ಪಂಚಾಯ್ತಿ ಕೇಂದ್ರಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಬಡವರ್ಗದವರಿಗೆ ಅಗತ್ಯವಾದ ೧೦ ಕೆ.ಜಿ. ಪಡಿತರ ಅಹಾರಧಾನ್ಯ ವಿತರಣೆ, ಏರಿಕೆಯಾಗುತ್ತಿರುವ ಗ್ಯಾಸ್ ಬೆಲೆ ಇಳಿಕೆ ಕ್ರಮ, ಅಭಿವೃದ್ಧಿಗೆ ಒತ್ತು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವುದಕ್ಕಾಗಿ ಆದ್ಯತೆ ನೀಡುವಂತೆ ಮತದಾರರಲ್ಲಿ ಡಾ.ಜಿ.ಪರಮೇಶ್ವರ್ ಅವರು ಮನವಿ ಮಾಡಿದರು. ಕೊಳಾಲ ಮತ್ತು ಚಿನ್ನಹಳ್ಳಿ ಪಂಚಾಯ್ತಿಗಳಲ್ಲಿ ಮತಯಾಚನೆ ಮಾಡುವಾಗ ಹಿರಿಯ ಮಹಿಳೆಯರು ಆರ್ಶೀವದಿಸಿದ್ದು ವಿಶೇಷವಾಗಿತ್ತು. ಪ್ರೀತಿ-ಆದರದಿಂದ ಮನೆಗೆ ಬರಮಾಡಿಕೊಂಡು, ತಮ್ಮದೇಯಾದ ರೀತಿಯಲ್ಲಿ ಫಲಾಫಲಗಳನ್ನು ನೀಡಿ, ಬೆಂಬೆಲ ವ್ಯಕ್ತಪಡಿಸಿದರು.
ಕರೋನದಂತ ಸಂಕಷ್ಟದ ಸಮಯ ಸೇರಿದಂತೆ ೫ ವರ್ಷಗಳಲ್ಲಿ ಕ್ಷೇತ್ರದ ಮೂಲಮೂಲೆಯಲ್ಲಿ ಸುತ್ತಾಡಿ,ಜನರ ನೋವಿಗೆ, ಕೂಗಿಗೆ ಸ್ವಂದಿಸಿದ್ದೇನೆ. ನಾನು ಯಾವುದೇ ತಮ್ಮ ವಯಕ್ತಿಕ ಹಿಸಾಸಕ್ತಿಗೆ ಜನರನ್ನು ಬಳಸಿಕೊಳ್ಳದೆ ಕಾಯಕ ಮಾಡಿದ್ದೇನೆ. ಅದಕ್ಕೆ ಕೂಲಿ ರೂಪದಲ್ಲಿ ತಮ್ಮ ಮತಗಳನ್ನು ನೀಡಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.
ಜನಪರ ಪ್ರಣಾಳಿಕೆ ಕೊಡಲು ಕೊರಟಗೆರೆಯ ಮತದಾರರೇ ಕಾರಣ:
ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರ ಡಾ.ಜಿ.ಪರಮೇಶ್ವರ್ ಅವರು, ಜನರಲ್ಲಿ ನನ್ನ ಬಗ್ಗೆ ನಂಬಿಕೆ-ವಿಶ್ವಾಸ ಇರುವುದನ್ನು ಕ್ಷೇತ್ರದಲ್ಲಿ ಸಂಚಾರ ಮಾಡಿದಾಗ ಕಂಡುಕೊAಡಿದ್ದೇನೆ. ಕ್ಷೇತ್ರದ ಜನರ ಸಾಮಾಜಿಕ ಸಮಸ್ಯೆಗಳು, ಅವರ ಕೂಗಿನ ಆಧಾರದ ವೇಳೆ ಉತ್ತಮವಾದ ಪ್ರಣಾಳಿಕೆಯನ್ನು ಸಿದ್ದಗೊಳಿಸಲು ಸಾಧ್ಯವಾಯಿತು. ಇದು ರಾಜ್ಯಕ್ಕೆ ಕೊರಟಗೆರೆಯ ಮತದಾರರು ಕೊಟ್ಟ ಕೊಡುಗೆ. ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರು ಅಂಶಗಳು ರಾಜ್ಯಕ್ಕೆ ಅಲ್ಲದೆ ಕೊರಟಗೆರೆಯ ಧ್ವನಿಗೂ ಆದ್ಯತೆ ನೀಡಿದಂತೆಯೆ ಆಗಿದೆ ಎಂದರು.
ಮೆಟ್ರೋ ಯೋಜನೆ ಪ್ರಸ್ತಾಪ:
ನಿರಾವರಿ, ಎತ್ತಿಹೊಳೆ ಯೋಜನೆ ನಮ್ಮ ತಾಲ್ಲೂಕಿನ ಮೂಲಕವೆ ಹಾದು ಹೊಗುತ್ತದೆ. ಈ ಯೋಜನೆಯಿಂದ ೧೦೯ ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗಲಿದೆ. ತಮಕೂರು ನಗರಕ್ಕೆ ಹೊಂದಿಕೊAಡಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇನ್ನೂ ಪ್ರಗತಿ ತರಲು ಮೆಟ್ರೋ ಸೇವೆಯನ್ನು ಈ ಪ್ರದೇಶಕ್ಕೆ ವಿಸ್ತರಣೆ ಮಾಡುವ ಅಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ತಂದಿರುವುದು ಕ್ಷೇತ್ರದ ಅಭಿವೃದ್ಧಿಯ ಪುರಕವಲ್ಲವೇ ಎಂದು ವಿರೋಧ ಪಕ್ಷಗಳ ಊಹಾಪೂಹ ಹೇಳಿಕೆಗಳಿಗೆ ತಿರುಗೇಟು ನೀಡಿದರು.