ತುಮಕೂರು ಭಾರತಿ ನಗರದಲ್ಲಿ ಮಹಾನ್ ಮಾನವತಾವಾದಿ ಭಾರತ ರತ್ನ ಸಂವಿಧಾನಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ 133ನೇ ದಿನಾಚರಣೆಯ ಅಂಗವಾಗಿ ಸ್ಲಂ ಜನರ ಮತ ಸಂವಿಧಾನ ಮತ್ತು ದೇಶ ರಕ್ಷಣೆಗಾಗಿ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ 140 ಕೋಟಿ ಜನಸಂಖ್ಯೆ ಇರುವ ನಮ್ಮ ಭಾರತ ದೇಶದಲ್ಲಿ ಅಸಮಾನತೆ, ಬಡತನ,ನಿರುದ್ಯೋಗ ಸಮಸ್ಯೆಗಳು 21ನೇ ಶತಮಾನದಲ್ಲೂ ಜೀವಂತವಾಗಿವೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಂದಿನ ಅಸಮಾನತೆಯ ವ್ಯವಸ್ಥೆಯನ್ನು ಹೋಗಲಾಡಿಸಿ ದೇಶದ ಸಂಪತ್ತಿನಲ್ಲಿ ಎಲ್ಲಾ ಬಡವರಿಗೂ ಪಾಲು ಸಿಗಬೇಕು ಸಮಪಾಲು ಸಮಬಾಳು ಎಂಬ ಆಶಯಹೊತ್ತು ಸಂವಿಧಾನವನ್ನು ದೇಶಕ್ಕೆ ನೀಡಿದರು, ಇಂತಹ ಆಲೋಚನೆಗಳನ್ನು 10 ವರ್ಷಗಳಿಂದ ಬಿಜೆಪಿ ಗಾಳಿಗೆ ತೂರಿ ದೇಶದ ಸಂಪತ್ತನ್ನು ಕೇವಲ ಬೆರಳೇಣಿಕೆಯ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿರುವುದು ದೇಶ ವಿರೋಧಿ ನಡೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂಬಾನಿ ಮತ್ತು ಆದಾನೀಕರಣಕ್ಕೆ ಒಪ್ಪಿಸಿ ದೇಶದ ಜನರನ್ನು ಗ್ರಾಹಕರನ್ನಾಗಿ ಮಾಡುವ ರಾಜಕೀಯ ಮೋದಿಕರಣವನ್ನು ನಾವೆಲ್ಲರು ಒಗ್ಗಟ್ಟಾಗಿ ದೂರವಿಡಬೇಕು ಮತ್ತು ಸಂವಿಧಾನ ಉಳಿಯಬೇಕೆಂದರೆ ಬಿಜೆಪಿ ಸೋಲಬೇಕು ತುಮಕೂರಿನಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಮತ ಚಲಾಯಿಸುವ ಸಂಕಲ್ಪವನ್ನು ಸ್ಲಂನಲ್ಲಿರುವ ಮಹಿಳೆಯರು ಮಾಡಬೇಕೆಂದರು.
ನಂತರ ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್ ಮಾತನಾಡಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ 133ನೇ ಜಯಂತಿಯನ್ನು ಇಡೀ ದೇಶ ವಿಜೃಂಭಣೆಯಿoದ ಆಚರಿಸುತ್ತಿದೆ ಈ ದಿನ ವಿಶ್ವ ಜ್ಞಾನದ ದಿನವವೆಂದು ಕರೆಯಲಾಗುತ್ತದೆ. ಅಂಬೇಡ್ಕರ್ ರವರ ಜಯಂತಿ ಕೇವಲ ವ್ಯಕ್ತಿಯಾಗಿ ವೈಬವೀಕರಿಸದೇ ಅವರ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೋಬ್ಬ ಪ್ರಜೆಯ ಕರ್ತವ್ಯವಾಗಬೇಕಿದೆ. ದೇಶದ ಜನ ಸಮೃದ್ದಿ ಮತ್ತು ಸಮಾನತೆಯಿಂದ ಜೀವಿಸಬೇಕು ಘನತೆಯ ಜೀವನ ಸಾಧಿಸಬೇಕು ಎಂದು ಕನಸ್ಸು ಹೊತ್ತವರಲ್ಲಿ ಮೊದಲಿಗರು ಬಾಬಾ ಸಾಹೇಬರು ಅಂತಹ ಕನಸ್ಸನ್ನು ನನಸಾಗಿಸಲು ನಾವೆಲ್ಲರು ಸಂಕಲ್ಪ ಮಾಡಬೇಕಿದೆ ಶಿಕ್ಷಣ ಸಂಘಟನೆ ಹೋರಾಟ ನಮ್ಮ ಬದುಕಿನ ಗುರಿಯಾಗಬೇಕು, ನಮ್ಮ ದೇಶ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವಿಟ್ಟು ನಡೆಯುವ ದೇಶ, ಇಲ್ಲಿ ಕೆಲವು ದುಷ್ಟ ಶಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಿ ಸರ್ವಾಧಿಕಾರಿ ಆಡಳಿತವನ್ನು ಜಾರಿಗೊಳಿಸಲು ಮುಂದಾಗಿವೆ ಅಂತಹ ದುಷ್ಟ ಶಕ್ತಿಗಳ ಬಗ್ಗೆ ಎಚ್ಚರವಹಿಸಬೇಕಿದೆ ಬಿಜೆಪಿ ಜೆಡಿಎಸ್ ಮೈತ್ರಿ ನಾಯಕ ಕುಮಾರ್ ಸ್ವಾಮಿ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿಗಳಿoದ ಮಹಿಳೆಯರು ದಾರಿತಪ್ಪಿದ್ದಾರೆ ಎಂಬ ಹೇಳಿಕೆ ಖಂಡನೀಯವಾಗಿದೆ ಜಾತ್ಯಾತೀತ ಮಹಿಳೆಯರು ಇಂತಹ ದಾರಿ ತಪ್ಪಿದ ರಾಜಕೀಯ ಅಮಲಿನ ನಾಯಕರಿಗೆ ಮಹಿಳೆಯರು ಬುದ್ದಿ ಕಲಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಭಾರತಿ ನಗರದ ನಿವಾಸಿಗಳಾದ ಶಾಬುದ್ದೀನ್, ಕೆಂಪಣ್ಣ, ಮಧು, ಲತಾ, ಮಾಣಿಕ್ಯಮ್ಮ, ಗಂಗಾಧರಯ್ಯ, ಮಂಗಳಮ್ಮ, ಶಾರದಮ್ಮ, ಗಂಗಮ್ಮ, ತಿರುಮಲಯ್ಯ, ಕೃಷ್ಣಮೂತಿ ಮುಂತಾದವರು ಪಾಲ್ಗೊಂಡಿದ್ದರು.