ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ
ವಿವೇಕ ವೀರಯ್ಯ ಅವರಿಗೆ ಪಿಎಚ್ಡಿ ಪದವಿ
ತುಮಕೂರು: ನಗರದ ಶ್ರೀ ಸಿದ್ದಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಜನ್ (ಸಾಹೇ) ವಿಶ್ವವಿದ್ಯಾಲಯದ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ ಅವರು ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿoಗ್ ವಿಭಾಗದಲ್ಲಿ ವಿವೇಕ್ ವೀರಯ್ಯ ಸಂಶೋಧನೆ ಕೈಗೊಂಡಿದ್ದರು.
ಬೆoಗಳೂರಿನ ಬಿಜಿಎಸ್ ಕಾಲೇಜ್ ಆಫ್ ಇಂಜಿನಿಯರಿoಗ್ ಮತ್ತು ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ರವಿಕುಮಾರ್ ಜಿ ಕೆ ಅವರ ಸಂಶೋಧನಾ ಮಾರ್ಗದರ್ಶನದಲ್ಲಿ “ಭವಿಷ್ಯದ ಪೀಳಿಗೆಗಾಗಿ ಇಂಟರ್ನೆಟ್-ಆಫ್-ಥಿoಗ್ಸ್ ಆಧಾರಿತ ಸಾಮಾಜಿಕ ಉದ್ಯಮಶೀಲತೆ: ಅಭಿವೃದ್ಧಿಶೀಲ ರಾಷ್ಟ್ರ ಗಳಿಗಾಗಿನ ಕಾರ್ಯತಂತ್ರದ ಪರಿಹಾರಗಳು” ಕುರಿತ ವಿಮರ್ಶಾತ್ಮಕ ಅಧ್ಯಯನಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಡಾ. ವಿವೇಕ್ ಅವರು ಮೂಲತ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದವರಾಗಿದ್ದು, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಂಡಿದ್ದಾರೆ. ಶ್ರೀ ಸಿದ್ಧಾರ್ಥ ಇಂಜಿನಿಯರಿoಗ್ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಕೂಡ. ಇವರ ತಂದೇ ಡಾ. ವೀರಯ್ಯ ಅವರು ಇದೇ ಸಂಸ್ಥೆಯಲ್ಲಿ 4 ದಶಕಗಳ ಸೇವೆ ಸಲ್ಲಿಸಿ, ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ.
ಈಗ ವಿವೇಕ್ ವೀರಯ್ಯ ಅವರು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ. ಜಿ. ಪರಮೇಶ್ವರ ಅವರ ಸಲಹೆಗಾರರಾಗಿ ಮತ್ತು ಎಸ್ಎಸ್ಐಟಿಯಲ್ಲಿನ ಕಂಪ್ಯೂಟರ್ ಸೈನ್ಸ್ನ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿನಂದನೆಗಳು:
ಉನ್ನತ ವ್ಯಾಸಂಗದ ಜೊತೆಗೆ ಪಿಎಚ್ಡಿ ಪದವಿ ಗಳಿಸಿದ ಡಾ. ವಿವೇಕ ವೀರಯ್ಯ ಅವರನ್ನು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ. ಜಿ. ಪರಮೇಶ್ವರ ಮತ್ತು ವೈದ್ಯಕೀಯ, ಇಂಜಿನಿಯರಿoಗ್ ಕಾಲೇಜು ಸೇರಿದಂತೆ ಅಂಗ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.
P
ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದವಿವೇಕ ವೀರಯ್ಯ ಅವರಿಗೆ ಪಿಎಚ್ಡಿ ಪದವಿ

Leave a comment
Leave a comment