ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) 20ವಸಂತಗಳನ್ನು ಪೂರೈಸಿರುವ ಅಂಗವಾಗಿ ಸ್ಲಂ ಜನರ ನಡಿಗೆ ಸಂವಿಧಾನದೆಡೆಗೆ ಹಾಗೂ ಸಂಸ್ಕೃತಿ ಸಂಭ್ರಮ ವಿಶ್ವಮಾನವ ಹಕ್ಕುಗಳ ದಿನದ ಅಂಗವಾಗಿ ನಗರ ವಂಚಿತ ಸಮುದಾಯಗಳ ಮಾನವ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸಿರುವವರಿಗೆ ವಿಶ್ವಮಾನವ ಪ್ರಶಸ್ತಿ ಸಮಾರಂಭವನ್ನು ಡಿಸೆಂಬರ್ 10ರಂದು ತುಮಕೂರು ಎಂ.ಜಿ ರಸ್ತೆಯ ಬಾಲಭವನದಲ್ಲಿ ಹಮ್ಮಿಕೊಳ್ಳಲು ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ನಗರದಲ್ಲಿ ಕಳೆದ 20 ವರ್ಷಗಳಿಂದ ಸ್ಲಂ ಜನರ ಸಂವಿಧಾನಬದ್ದ ಬದುಕುವ ಹಕ್ಕಿನ ರಕ್ಷಣೆ ಜೊತೆಗೆ ನಗರಗಳಲ್ಲಿರುವ ಅಸಮಾನತೆ ಮತ್ತು ಅಭಿವೃದ್ಧಿ ತಾರತಮ್ಯಗಳನ್ನು ಹೋಗಲಾಡಿಸಿ ಸಂವಿಧಾನದ ಆಶಯ ಹಾಗೂ ಬುದ್ಧ, ಬಸವ ಅಂಬೇಡ್ಕರ್ ಕಂಡ ಸಮಸಮಾಜದ ಕನಸ್ಸು ಸಾಧಿಸುವ ನಿಟ್ಟಿನಲ್ಲಿ ಕೊಳಗೇರಿಗಳಲ್ಲಿರುವ ಅಸ್ಪೃಷ್ಯ ಸಮುದಾಯಗಳು ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ನ್ಯಾಯವನ್ನು ಪ್ರತಿಪಾಧಿಸುವ ಜೊತೆಗೆ ಮಹಿಳೆಯರು ಮಕ್ಕಳು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಲೆಮಾರಿಗಳನ್ನು ಸಂಘಟಿಸಿ ಧ್ವನಿಯಾಗಿ ತುಮಕೂರು ಸ್ಲಂ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು 2003ರಲ್ಲಿ ಪ್ರಾರಂಭಗೊAಡು ಹಲವಾರು ಸಾಧನೆಗಳನ್ನು ಮತ್ತು ಸವಾಲುಗಳನ್ನು ಎದುರಿಸಿದೆ, ಕೊಳಗೇರಿ ಜನರ ಹಾಗೂ ನಗರವಂಚಿತ ಸಮುದಾಯಗಳು ಒಗ್ಗೂಡಲು ಕಾರಣೀಭೂತರಾದ ಮಾನವ ಹಕ್ಕುಗಳ ಹೋರಾಟಗಾರರಾದ ಪ್ರೋ.ವೈ.ಜೆ ರಾಜೇಂದ್ರರವರಿಗೆ ಬಸವ ಮಾರ್ಗಿ ಮತ್ತು ಪ್ರೊ.ಕೆ.ದೊರೈರಾಜ್ ಬುದ್ಧ ಮಾರ್ಗಿ ಪ್ರಶಸ್ತಿ ಹಾಗೂ ತೃತೀಯ ಲಿಂಗಿಗಳ ಘನತೆಯ ಬದುಕಿಗಾಗಿ ಹೋರಾಡುತ್ತಿರುವ ದೀಪಿಕಾ ರವರಿಗೆ ವಿಶೇಷವಾಗಿ ಶ್ರಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲು ಇಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ ಎಂದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕ್ರಮವನ್ನು ಟೌನ್ಹಾಲ್ ನಿಂದ ಬಾಲಭವನದವರೆಗೆ ಸಂವಿಧಾನದ ನಡಿಗೆ ಜಾಥ ನಡೆಸುವ ಮೂಲಕ ಸಂಸ್ಕೃತಿ ಸಂಭ್ರಮವನ್ನು ಭೂಮಿ ತಾಯಿ ಬಳಗದೊಂದಿಗೆ ಆಚರಿಸಿ ಕಾರ್ಯಕ್ರಮದ ಉದ್ಘಾಟನೆಗೆ ಗೃಹ ಸಚಿವರು, ಸಹಕಾರಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರನ್ನು ಹಾಗೂ ಇನ್ನಿತರೇ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳಾದ ಕಣ್ಣನ್, ಶಂಕ್ರಯ್ಯ, ಜಾಬೀರ್ಖಾನ್,ಶಾರದಮ್ಮ, ದೀಪಿಕಾ, ಅರುಣ್, ತಿರುಮಲಯ್ಯ,ಅನುಪಮಾ, ಮಂಗಳಮ್ಮ, ಗಂಗಾ, ಲಕ್ಷಿö್ಮÃಪತಿ,ಧನಂಜಯ್, ಮೋಹನ್ ಟಿ.ಆರ್, ಕೃಷ್ಣಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.
ತುಮಕೂರು ಕೊಳಗೇರಿ ಸಮಿತಿ 20ವರ್ಷ ಮತ್ತು ವಿಶ್ವಮಾನವ ಹಕ್ಕುಗಳ ದಿನ

Leave a comment
Leave a comment