2,568ನೇ ಬುದ್ಧಪೂರ್ಣಿಮೆ ಆಚರಣೆಯ ಪೂರ್ವಭಾವಿ ಸಭೆ
ಜಗತ್ತಿಗೆ ಪ್ರೀತಿ ಕರುಣೆ ಮತ್ತು ಮಮತೆಯನ್ನು ಪರಿಚಯಿಸಿದ 2,568ನೇ ಬುದ್ಧನ ಜನ್ಮ ದಿನವನ್ನು ಸ್ಲಂ ಭವನದಲ್ಲಿ ಆಚರಿಸಲು ಇಂದು ನಡೆದ ತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಂದು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಸಂಚಾಲಕರಾದ ಎ.ನರಸಿಂಹಮೂರ್ತಿ ಕಪಿಲ ವಸ್ತುವಿನಲ್ಲಿ ಹುಣ್ಣಿಮೆ ದಿನದಂದು ಮಾಯದೇವಿಯ ಗರ್ಭದಲ್ಲಿ ಜನಿಸಿದ ಸಿದ್ದಾರ್ಥ ಮನುಷ್ಯನ ದುಖಃಕಕ್ಕೆ ಮತ್ತು ಸಾವಿಗೆ ಉತ್ತರ ಹುಡುಕಲು ರಾಜನಾದ ಸಿದ್ದಾರ್ಥನು ಸನ್ಯಾಸಿಯಾಗಿ ವೈರಾಗ್ಯವನ್ನು ಸ್ವೀಕರಿಸಿ ಮನುಷ್ಯ ಜೀವನದ ಅವಸ್ಥೆಗಳನ್ನೆಲ್ಲಾ ತಿಳಿದು ಸಂಕಟಗಳಿಗೆ ಕಾರಣಗಳು ಮತ್ತು ಇದರಿಂದ ಹೊರಬರುವ ದಾರಿಗೆ ಜ್ಞಾನವನ್ನು ಪಡೆದ ದಿನವನ್ನು ಬುದ್ಧಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ಪ್ರಪಂಚದಲ್ಲಿ ದುಖಃದಿಂದ ಹೊರಬರಲು ಪ್ರೀತಿಯನ್ನು ವಾಸ್ತವ ಜೀವನಕ್ಕೆ ತ್ಯಾಗವನ್ನು ಹೇಳಿದ ಪ್ರಪಂಚದ ಮೊದಲಿಗರು ಗೌತಮ ಬುದ್ಧನ ಸತ್ಯವನ್ನು ಕಾಣಲು ಜೀವನದಲ್ಲಿ ಶಾಂತಿಯ ಮಾರ್ಗವನ್ನು ಬೋಧಿಸಿ ಗುರುವಿಲ್ಲದೆ ಜ್ಞಾನ ದೊರೆಯದೆಂದು ಪ್ರತಿಪಾದಿಸಿದನೂ. ಬುದ್ಧನೂ ಮನುಷ್ಯನನ್ನು ಲೋಕಕಲ್ಯಾಣಕ್ಕಾಗಿ ಅಷ್ಟಾಂಗ ಮಾರ್ಗಗಳನ್ನು ಪ್ರತಿಪಾದಿಸಿ, ತಾಳ್ಮೆಯಿಂದ ಸಿಟ್ಟನ್ನು ಗೆಲ್ಲುವ ವಿಧಾನವನ್ನು ಪ್ರತಿಪಾದಿಸಿದ್ದಾರೆ. ಆಸೆಯಿಂದ ಮೌಡ್ಯವನ್ನು, ಮೌಡ್ಯದಿಂದ ದ್ವೇಷಕ್ಕೆ ಒಳಗಾಗಿ ಮಾನವೀಯತೆಯನ್ನು ಕಳೆದುಕೊಳ್ಳುವ ಮನುಷ್ಯ ಕುಲಕ್ಕೆ ಅಹಿಂಸೆಯನ್ನು ಪ್ರತಿಸಿದ ಭಾಗವಾನ್ ಬುದ್ಧ ಹಿಂದಿನ ಆಧುನಿಕ ಜಗತ್ತು ಅಹಿಂಸೆಯ ಸಮಾಜವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗಾಗಿ ಭಾರತದಲ್ಲಿ ಅಷ್ಟೇ ಅಲ್ಲದೆ, ವಿಶ್ವದ ಮೊದಲ ದಾರ್ಶನಿಕನಾಗಿ ಗೌತಮ ಬುದ್ಧ ನಿಲ್ಲುತ್ತಾರೆ. ಅವರ ಈ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ಬುದ್ಧಿಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ನರಸಿಂಹರಾಜು, ಸ್ಲಂ ಸಮಿತಿ ಪದಾಧಿಕಾರಿಗಳಾದ ಶಂಕ್ರಯ್ಯ, ಜಾಬೀರ್ಖಾನ್, ಕಣ್ಣನ್, ತಿರುಮಲಯ್ಯ, ಕೃಷ್ಣಮೂರ್ತಿ, ಶಾರದಮ್ಮ, ಚಕ್ರಪಾಣಿ, ಧನಂಜಯ, ಅನುಪಮ, ಪೂರ್ಣಿಮ, ಸಂಧ್ಯ, ವಸಂತಮ್ಮ, ರಂಗನಾಥ್, ಗುಬ್ಬಿಯ ಮಾರಣ್ಣ, ವೆಂಕಟೇಶ್ ಮುತ್ತುಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.
Tumkur 2,568ನೇ ಬುದ್ಧಪೂರ್ಣಿಮೆ ಆಚರಣೆಯ ಪೂರ್ವಭಾವಿ ಸಭೆ

Leave a comment
Leave a comment