ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು, ತುಮಕೂರು: ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ ೨ ಬಿ, ಮೀಸಲಾತಿಯ ಪ್ರಮಾಣವನ್ನು ಶೇಕಡ ೮ಕ್ಕೆ ಏರಿಸಲು ಆಗ್ರಹಿಸಿ
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ನಗರದ ಜಿಲ್ಲಾಧಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಈ ವೇಳೆ ತುಮಕೂರು ಜಿಲ್ಲಾ ಎಸ್.ಡಿ.ಪಿ.ಐ ಜಿಲ್ಲಾ ಅಧ್ಯಕ್ಷರಾದ ಉಮ್ರೋದ್ದೀನ್ ಮಾತನಾಡಿ ಸರ್ಕಾರದ ಯೋಜನೆಯಲ್ಲಿ ಸಮರ್ಪಕ ಪಡೆಯಬೇಕಾದರೆ ಆಯಾ ಸಮುದಾಯಗಳ ವಸ್ತು ಸ್ಥಿತಿ ಅರಿಯುವುದು ಬಹಳ ಮುಖ್ಯ.
ಎಲ್ಲಾ ಸಮುದಾಯಗಳ ಜನಸಂಖ್ಯೆ , ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳನ್ನು ಅರಿಯದ ಹೊರತು ಅದು ಸಾಧ್ಯವಿಲ್ಲ. ಇದನ್ನು ಮನಗಂಡು ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ,೨೦೧೪ ರಲ್ಲಿ ಕಾಂತರಾಜ್ ಆಯೋಗವನ್ನು ನೇಮಿಸಿ, ಜಾತಿ ಗಣತಿಗೆ ಆದೇಶಿಸಿದ್ದೀರಿ. ಅದರಂತೆ ಆಯೋಗವು ೨೦೧೮ ರಲ್ಲಿ ತನ್ನ ವರದಿಯನ್ನು ಸಿದ್ಧಪಡಿಸಿತ್ತು ಕಾರಣಾಂತರಗಳಿAದ ಆ ವರದಿಯನ್ನು ಸಾರ್ವಜನಿಕ ಗೊಳಿಸಿರಲಿಲ್ಲ ನಂತರ ಬಂದ ಎರಡು ಸರ್ಕಾರಗಳು ಅದನ್ನು ಅಂಗೀಕರಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ, ಈಗ ವರದಿಸಿದ್ದವಿದೆ. ಬಿಹಾರ ಸರ್ಕಾರ ಜಾತಿಗಣತಿಯನ್ನು ೨ ವರ್ಷಗಳಲ್ಲಿ ಪೂರ್ಣಗೊಳಿಸಿ, ಅದನ್ನ ಅಂಗೀಕರಿಸಿ ಸಾರ್ವಜನಿಕ ಗೊಳಿಸಿದೆ, ಅದೇ ಮಾದರಿಯಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ಕಾಂತರಾಜ್ ಆಯೋಗದ ವರದಿಯನ್ನು ತಕ್ಷಣವೇ ಅಂಗೀಕರಿಸಿ ಸಾರ್ವಜನಿಕ ಗೊಳಿಸಬೇಕು ಎಂದರು. ೨ಬಿ ಮ Æಲಕ ಮುಸ್ಲಿಮರಿಗೆ ಒದಗಿಸಲಾಗಿದ್ದ ಮೀಸಲಾತಿಯನ್ನು ರದ್ದು ಮಾಡುವ ಕಾರ್ಯ ನಡೆಯುತ್ತಿದೆ. ಇದು ಕೋರ್ಟ್ ನಲ್ಲಿದೆ ಆದ್ದರಿಂದ ಸಚಿವ ಸಂಪುಟ ಸಭೆಯ ಮೂಲಕ ನಿರ್ಣಯ ಕೈಗೊಂಡು ಅಂದಿನ ಬಿಜೆಪಿ ಸರ್ಕಾರದ ನಿರ್ಣಯವನ್ನು ಹಿಂಪಡೆಯಬೇಕು ಎಂದರು. ಪ್ರತಿಭಟನಾ ಧರಣಿಯಲ್ಲಿ ಡಿ.ಎಸ್.ಎಸ್ ಅಧ್ಯಕ್ಷರು ಪಿ.ಎನ್ ರಾಮಯ್ಯ, ಅಂಬೇಡ್ಕರ್ ಸೇನೆಯ ಶ್ರೀಮತಿ ಸುಮಾ, ಬಿ.ಟಿ ರಾಮಸುಬ್ಬಯ್ಯ ಪಾವಗಡ, ಅಲ್ತಾಫ್ ಸಾಬ್, ಹೆಚ್ ಎಂ ಎಸ್ ಸಮಿತಿಯ ಸದಸ್ಯ ಅಫ್ಸರ್ ಖಾನ್, ಎಸ್.ಡಿ.ಪಿ.ಐ ಯ ಕಾರ್ಯದರ್ಶಿ ಶಫಿ ಉಲ್ಲಾ ಖಾನ್, ಉಪಾಧ್ಯಕ್ಷ ಅಲೀಮ್ ಉಲ್ಲಾ ಶರೀಫ, ಸದಸ್ಯಗಳು ಮಹಬೊಬ್ ಪಾಷಾ, ಮುಕ್ತಿಯಾರ್ ಅಹಮದ್ ಸೇರಿದಂತೆ ಮತ್ತಿತರರು ಇದ್ದರು.