Á್ಯರಂಟಿ ಮತ್ತು ಉದ್ಯೋಗ ಖಾತ್ರಿ ಪಕ್ಷಗಳ ಪ್ರಣಾಳಿಕೆಯಲ್ಲಿ ಆಧ್ಯತೆ ಆಗಲಿ
- ಪ್ರೊ.ರವಿವರ್ಮಕುಮಾರ್
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ೨೦೨೩ರ ವಿಧಾನಸಭಾ ಚುನಾವಣೆಗೆ ಪೂರಕವಾಗಿ ಸಂವಿಧಾನ ಉಳಿಸಿ ಬಹುತ್ವ ಕರ್ನಾಟಕ ರಕ್ಷಿಸಿ, ನಮ್ಮ ಮತ ವಸತಿ ಹಕ್ಕಿಗಾಗಿ ಎಂಬ ಘೋಷಣೆಯೊಂದಿಗೆ ಸ್ಲಂ ಜನರ ೧೨ ಪ್ರಮುಖ ಅಂಶಗಳ ಮೇಲೆ ಸ್ಲಂ ಜನರ ಪ್ರಣಾಳಿಕೆಯನ್ನು ಸಿದ್ದಗೊಳಿಸಲಾಗಿದೆ, ಇಂದು ಸ್ವರಾಜ್ ಅಭಿಯಾನದ ಮುಖಂಡರಾದ ಯೋಗೆಂದ್ರ ಯಾದವ್ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರ್ ಇಂದು ತುಮಕೂರಿನ ರವಿಂದ್ರಕಲಾ ನಿಕೇತನ ಆವರಣದಲ್ಲಿ ಬಿಡುಗಡೆಗೊಳಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಆಡಳಿತದಿಂದ ನಿರ್ಮಾಣವಾಗಿರುವ ದ್ವೇಷ ಅಸೂಯೇ, ಜಾತಿ, ಧರ್ಮ, ಅಸಮಾನತೆಯೂ ಬಡವ ಮತ್ತು ಶ್ರೀಮಂತರ ಅಂತರವನ್ನು ದ್ವಿಗುಣಗೊಳಿಸುತ್ತಿದೆ. ಬಸವಣ್ಣನವರ ನೆಲದಲ್ಲಿ ಮತ್ತು ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕವನ್ನು ಬಿಜೆಪಿ ಪ್ರಯೋಗ ಶಾಲೆ ಮಾಡಲು ಹೊರಟಿದೆ, ಇದಕ್ಕಾಗಿ ೭೦೦ ಜನÀ ಪ್ರಚಾರಕರನ್ನು ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಪರ ಮತ ಸೆಳೆಯಲು ನೇಮಕ ಮಾಡಲಾಗಿದೆ, ಇದರ ಅರ್ಥ ಸಂವಿಧಾನ ವಿರೋಧಿ ಸೈನಿಕರನ್ನು ನೇಮಕ ಮಾಡಿದ್ದು ಆತಂಕಕಾರಿಯಾಗಿದೆ. ಆದ್ದರಿಂದ ಸಂವಿಧಾನದ ಉಳಿವಿಗೆ ಮತ ಚಲಾಯಿಸಲು ಕೈಗೊಂಡಿರುವ ಸ್ಲಂ ಜನಾಂದೋಲನದ ಪ್ರಣಾಳಿಕೆಯನ್ನು ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷಗಳು ಆಧ್ಯತೆ ಮೇರೆಗೆ ಸ್ವೀಕರಿಸಿ ಕೊಳಗೇರಿ ಜನರ ಬಹುದಿನದ ಬೇಡಿಕೆಯಾದ ವಸತಿ ಹಕ್ಕು ಗ್ಯಾರಂಟಿಯನ್ನು ಖಾತ್ರಿಗೊಳಿಸಿ, ಸ್ಲಂ ಜನರ ಅಭಿವೃದ್ಧಿ ನಿಗಮ, ಸ್ಲಂ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಆಧ್ಯತೆ ನೀಡಬೇಕೆಂದರು.
ಸಂವಿಧಾನದ ಮೌಲ್ಯ ಕಾಪಾಡಲು ಎರಡನೇ ಗಣತಂತ್ರಕ್ಕಾಗಿ ಜನರ ಹೋರಾಟ ಅಗತ್ಯ
ದೇಶದ ನಾಗರೀಕರು ಸೇರಿದಂತೆ ಸಾಮಾನ್ಯ ಜನರು ಬಿಜೆಪಿ ಸೋಲಿಸಬೇಕು- ಯೋಗೆಂದ್ರ ಯಾದವ್.
ಸ್ಲಂ ಜನಾಂದೋಲನ ಕರ್ನಾಟಕ ಎದ್ದೇಳು ಕರ್ನಾಟಕದಿಂದÀ ಎಲ್ಲಾ ಸಾಮಾಜಿಕ ಮತ್ತು ನಾಗರೀಕ ಸಂಘಟನೆಗಳನ್ನು ಒಗ್ಗೂಡಿಸಿ ಧ್ವೇಷ ರಾಜಕಾರಣ ಸೋಲಿಸಿ, ಸಂವಿಧಾನವನ್ನು ಉಳಿಸಿ ಜನರನ್ನು ಸುಲಿಗೆ ಮಾಡುವ ಬೆಲೆ ಏರಿಕೆ, ಮತ್ತು ಕರ್ನಾಟಕವನ್ನು ಎರಡನೇ ದರ್ಜೆ ರಾಜ್ಯವನ್ನಾಗಿಸುವ ಅಭಿಯಾನದೊಂದಿಗೆ ಸ್ಲಂ ಜನಾಂದೋಲನ ಕರ್ನಾಟಕ ಜೊತೆಯಾಗಿ ಈ ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನವನ್ನು ಉಳಿಸುವ ಹಾಗೂ ಸ್ಲಂ ಜನರ ಸ್ವಾಧಿಕಾರ ಮತ್ತು ಘನತೆಗಾಗಿ ಕೈಗೊಂಡಿರುವ ಸ್ಲಂ ಜನರ ಪ್ರಣಾಳಿಕೆ ಅಭಿಯಾನ ಕರ್ನಾಟಕದ ಸ್ಲಂ ನಿವಾಸಿಗಳಲ್ಲಿ ಸಂವಿಧಾನ ರಕ್ಷಿಸುವ ಜಾಗೃತಿಯನ್ನು ನೀಡುತ್ತಿರುವುದು ಒಂದು ಸಂಚಲನವಾಗಿದೆ. ಸಂವಿಧಾನ ಮೌಲ್ಯ ಕಾಪಾಡಲು ಎರಡನೇ ಗಣತಂತ್ರಕ್ಕಾಗಿ ದೇಶ ಪ್ರಜ್ಞಾವಂತ ನಾಗರೀಕರು, ಸಾಮಾನ್ಯ ಜನರು ಸೇರಿದಂತೆ ಸ್ಲಂ ಜನರು ಬಿಜೆಪಿಯನ್ನು ಸೋಲಿಸಬೇಕಿದೆ. ಏಕೆಂದರೆ ಪ್ರಜಾಪ್ರಭುತ್ವ ಮತ್ತು ನಾಗರೀಕ ಹಕ್ಕುಗಳು ಪ್ರಶ್ನಾರ್ಥಕವಾಗಿವೆ, ಸನಾತನ ಮನುಧರ್ಮವನ್ನು ಜಾರಿಗೊಳಿಸಲು ಬಿಜೆಪಿ ೧೯೭೦ ರಲ್ಲಿ ಜರ್ಮನಿಯಲ್ಲಿ ನಿರ್ಮಾಣವಾದ ನಾಜಿ ಸಿದ್ದಾಂತದ ಮೇಲೆ ಭಾರತದಲ್ಲಿ ಹೊರಟಿದೆ ನಾವು ಇಲ್ಲಿನ ನೆಲದಲ್ಲಿರುವ ಸಿದ್ದಾಂತದ ಮೇಲೆ ದೇಶ ಕಟ್ಟಬೇಕು, ಅದುವೇ ಸಂವಿಧಾನ. ಹಾಗಾಗಿ ಕರ್ನಾಟಕದ ನೆಲ ರೈತ, ದಲಿತ, ಕಾರ್ಮಿಕರ ಹೋರಾಟಕ್ಕೆ ಹೆಸರುವಾಸಿಯಾಗಿದ್ದು ಜನಚಳುವಳಿಯ ಹೊಸ ಶಕ್ತಿಯನ್ನು ರೂಪಿಸುವಲ್ಲಿ ಪ್ರೇರಕವಾಗಿದೆ. ಆದರೆ ಇತ್ತೀಚೆಗೆ ಕರ್ನಾಟಕದ ಪರಿಸ್ಥಿತಿ ಗಂಭೀರವಾಗಿದ್ದು, ಲಿಂಚಿAಗ್, ಹಾಜಾನ್, ಹಿಜಾಬ್, ಧರ್ಮರಾಜಕಾರಣದಿಂದ ದ್ವೇಷ ಕೋಮು ಸಂಘರ್ಷಗಳನ್ನು ಜಾತಿ ಜಾತಿಗಳ ಎತ್ತಿಕಟ್ಟಲಾಗುತ್ತಿದೆ. ದಕ್ಷಿಣ ಭಾರತಕ್ಕೆ ಕರ್ನಾಟಕದ ಮೂಲಕ ಬಿಜೆಪಿ ಪ್ರವೇಶ ಮಾಡಿದ್ದು ಇಲ್ಲಿಂದಲೇ ಬಿಜೆಪಿ ತೊಲಗಿಸಿದರೆ ೨೦೨೪ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬದಲಾವಣೆ ಕಾಣಲು ಸಾಧ್ಯ, ಸಂವಿಧಾನ ಉಳಿಸಲು ಬಿಜೆಪಿಯನ್ನು ದೇಶದಲ್ಲಿ ಸೋಲಿಸಬೇಕು, ಇದು ನನ್ನ ಮನವಿ ಭಾರತ್ ಜೋಡೊ ಕಾಂಗ್ರೇಸ್ನ ಯಾತ್ರೆ ಯಾದರು ಹಲವಾರು ನಾಗರೀಕ ಸಂಘಟನೆಗಳು ಭಾಗವಹಿಸಿ ಮುಂದಿನ ೧ ವರ್ಷದಲ್ಲಿ ಬೀದಿಗಿಳಿದು ಜನರಿಗೆ ಜಾಗೃತಿ ನೀಡಿ ಮೈಕ್ರೋ ಸಿಗ್ಮೆಂಟ್ಗಳ ಮೂಲಕ ಮತಗಳನ್ನು ಪರಿವರ್ತಿಸುವ ಭಾರತ್ ಜೋಡೊ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಪ್ರಮುಖವಾಗಿ ಬಿಜೆಪಿ, ಕಾಂಗ್ರೇಸ್ ಮತ್ತು ಇತರೆ ಪಕ್ಷದವರೆಂದು ಗುರುತಿಸಿಕೊಂಡಿರುವ ಜನರನ್ನು ಬಿಟ್ಟು ತಟಸ್ಥತೆಯಿಂದಿರುವ ನಿರ್ಧಾರಿತ ಮತದಾರರನ್ನು ತಲುಪಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಮಾಡಲಾಗುತ್ತದೆ. ಏಕೆಂದರೆ ಸಂವಿಧಾನಕ್ಕೆ ಇಡೀ ವ್ಯವಸ್ಥೆಯೇ ವಿರುದ್ಧವಾಗುವಂತೆ ಬಿಜೆಪಿ ಮಾಡಿದ್ದು ಯಾವ ಸಂವಿಧಾನ ಸಮಾನತೆ, ಸಾಮಾಜಿಕ ನ್ಯಾಯ, ದೇಶದ ಸಾರ್ವಭೌಮತೆ, ಧರ್ಮಗಳ ಆಯ್ಕೆ ಮತ್ತು ನಾಗರೀಕ ಹಕ್ಕುಗಳನ್ನು ನೀಡಿದೆಯೇ ಅದಕ್ಕೆ ಸನಾತನ ನಾಜೀ ಸಿದ್ದಾಂತದಿAದ ಅಂದರೆ ಬಿಜೆಪಿಯಿಂದ ಅಪಾಯವಿದೆ ಹಾಗಾಗಿ ನಾವು ಜನರ ಹೋರಾಟದ ಮೂಲಕ ಎರಡನೇ ಗಣತಂತ್ರವನ್ನು ಸಾಧಿಸಬೇಕು ಇದು ಭವಿಷ್ಯದ ಭಾರತದ ಯುವಪೀಳಿಗೆ ಮತ್ತು ಭಾರತವನ್ನು ಉಳಿಸುವ ಮಾರ್ಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಜೈ ಕಿಸಾನ್ ಆಂದೋಲನದ ದೀಪಕ್ಲಾಂಬಾ, ಡಾ.ಹೆಚ್ವಿ ರಂಗಸ್ವಾಮಿ, ರೈತ ಸಂಘದ ನಟರಾಜಪ್ಪ, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮತ್ತು ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಅರುಣ್, ಶಾಬುದ್ದೀನ್, ಕೃಷ್ಣಮೂರ್ತಿ, ಅರವಿಂದ್, ಮುಬಾರಕ್, ಮುಂತಾದವರು ಹಾಜರಿದ್ದರು.
