ಆಧುನಿಕ ವೀರ ಕವಿ ರಾಮಧರಿ ಸಿಂಘ್ ದಿನಕರ್
ಹಿಂದಿ ಭಾಷೆಯಲ್ಲಿ ಹಲವಾರು ಕವಿತೆಗಳನ್ನು ರಚಿಸಿ ‘ಆಧುನಿಕ ವೀರ ಕವಿ’ ಎಂದು ರಾಮಧರಿ ಸಿಂಘ್ ದಿನಕರ್ ಖ್ಯಾತಿ ಪಡಿದ್ದಾರೆ ಎಂದು ಹಿಂದಿ ತುಮಕೂರು ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ. ಶೋಭ ಟಿ.ಎನ್ ತಿಳಿಸಿದ್ದಾರೆ.
ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗ ಮತ್ತು ವಿದ್ಯಾರ್ಥಿ ಮಂಡಳಿ ವತಿಯಿಂದ ಇತ್ತೀಚೆಗ ಹಮ್ಮಿಕೊಂಡಿದ್ದ ರಾಷ್ಟ್ರಕವಿಯಾದ ರಾಮಧರಿ ಸಿಂಘ್ ದಿನಕರ್ ರವರ ಬಗ್ಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಮಧರಿ ಸಿಂಘ್ ದಿನಕರ್ ಪತ್ರಕರ್ತರಾಗಿ, ನಿಬಂಧಕರಾಗಿ ಹಾಗೂ ಸ್ವಾತಂತ್ರ್ಯ ಸೇನಾನಿ ಯು ಸಹ ಆಗಿದ್ದರು. ದಿನಕರ್ ಅವರ ಜೀವನ ಕಥೆ, ಅವರ ಕವಿತೆಗಳ ಸಾರಾಂಶವನ್ನು ವಿದ್ಯಾರ್ಥಿಗಳಿಗೆ ಡಾ. ಶೋಭ ಆವರು ಹೇಳಿದರು.
ಇದೇ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ತಿಪಟೂರು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್. ಬಿ. ಕುಮಾರಸ್ವಾಮಿ ಆವರು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಹಿಂದಿ ಉಪನ್ಯಾಸದ ಡಾ. ಸುಧಾ, ಡಾ. ಜ್ಯೋತಿ ಎಂ.ಜಿ, ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.