ದಿನಾಂಕ-11.03.2024 ರಂದು ವಾಡಿ ಪಟ್ಟಣದಲ್ಲಿ ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭಕ್ಕೆ ಆಗಮಿಸಲಿರುವ ಸಾರ್ವಜನಿಕರಿಗೆ ತಮ್ಮ ವಾಹನಗಳ ನಿಲುಗಡೆಯ(ಪಾರ್ಕಿಂಗ) ಸ್ಥಳಗಳ ಮಾಹಿತಿ.
01.ನಾಲವಾರ,ಸನ್ನತಿ,ಕೊಲ್ಲೂರ,ಲಾಡ್ಲಾನೂರ, ಕಡೆಯಿಂದ ಬಲರಾಮ ಚೌಕ ಮಾರ್ಗವಾಗಿ ಬಂದಂತ ವಾಹನಗಳಿಗೆ ಎಸಿಸಿ ಕಾಲೋನಿಯಲ್ಲಿನ ಕ್ರೀಡಾಂಗಣದಲ್ಲಿ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.
02.ಚಿತ್ತಾಪೂರ,ಶಹಾಬಾದ, ಕಾಳಗಿ ಕಡೆಯಿಂದ ರಾವೂರ ಮಾರ್ಗವಾಗಿ ಬರುವ ವಾಹನಗಳಿಗೆ ಎಸಿಸಿ ಸುರಕ್ಷಾ ಕ್ಯಾಂಟೀನ್ ಹತ್ತಿರದಲ್ಲಿನ ಬಯಲು ಪ್ರದೇಶದಲ್ಲಿ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.
03.ಕಾರ್ಯಕ್ರಮಕ್ಕೆ ಬರುವ ಎಲ್ಲಾ ತರಹದ ಬಸ್ ಗಳಿಗೆ ಎ.ಸಿ.ಸಿ ಕಂಪನಿಯ ಎ.ಎಫ್.ಆರ್ ಗೇಟ್ (ರಾವೂರ- ಲಕ್ಷ್ಮೀಪೂರವಾಡಿ ರಸ್ತೆ ಮದ್ಯ) ಹತ್ತೀರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
04.ಎಲ್ಲಾ ಸರಕಾರಿ ಅಧಿಕಾರಿಗಳ ವಾಹನಗಳನ್ನು ಎ.ಸಿ.ಸಿ ಕಂಪನಿಯ ಕಾಲೋನಿಯ ಕ್ರೀಡಾಂಗಣದಲ್ಲಿ ನಿಲುಗಡೆ ಮಾಡಬೇಕು.
05.ಸಾರ್ವಜನಿಕರು ಯಾವದೇ ಕಾರಣಕ್ಕೂ ರಸ್ತೆ ಮೇಲೆ ವಾಹನಗಳನ್ನು ನಿಲ್ಲಿಸಬಾರದು,
06.ಸಾರ್ವಜನಿಕರು ತಮಗೆ ಸೂಚಿಸಿದ ಸ್ಥಳಗಳಲ್ಲೆ ವಾಹನಗಳ ನಿಲುಗಡೆ ಮಾಡತಕ್ಕದ್ದು.
07.ಸುಗಮ ಸಂಚಾರಕ್ಕೆ ಸಾರ್ವಜನಿಕರ ಸಹಕರ ಅಗತ್ಯವಾಗಿದ್ದು ಎಲ್ಲಾ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.