ತುಮಕೂರು:ಜನರು ಸರಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ,ಸರಕಾರದ ಅಧಿಕಾರಿಗಳೆ ಜನರ ಮನೆಬಾಗಿಲಿಗೆ ಹೋಗಿ,ಸರಕಾರದ ಸವಲತ್ತುಗಳನ್ನು ನೀಡಲು ಅನುಕೂಲವಾಗುವಂತೆ ಕಂದಾಯ ಅದಾಲತ್ಗಳನ್ನು ಆಯೋಜಿಸುತ್ತಿದ್ದು,ಜನರು ಇದರ ಲಾಭ ಪಡೆದುಕೊಳ್ಳುವಂತೆ ತುಮಕೂರು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ತಾಲೂಕಿನ ಉರ್ಡಿಗೆರೆ ಗ್ರಾಮದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಉರ್ಡಿಗೆರೆ ಹೋಬಳಿ ಮಟ್ಟದ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡುತಿದ್ದ ಅವರು,ಸರಕಾರದ ಆಶಯದಂತೆ ಅಧಿಕಾರಿಗಳೇ ಜನರ ಬಳಿ ಹೋಗಿ, ಅವರ ಜಮೀನಿನ ದಾಖಲೆಗಳಲ್ಲಿ ಆಗಿರುವ ಲೋಪದೋಷ ಸರಿಪಡಿಸುವುದರ ಜೊತೆಗೆ,ಸರಕಾರದ ವಿವಿಧ ಯೋಜನೆಗಳಡಿ ಆರ್ಹರಿಗೆ ಮಾಸಾಶನ ನೀಡುವ ಕೆಲಸ ಮಾಡುತ್ತಿದೆ.ಇದು ಒಂದು ಕ್ರಾಂತಿಕಾರಕ ಬದಲಾವಣೆ.ಈಗಾಗಲೇ ತಾಲೂಕಿನ ಕೋರ, ಹೆಬ್ಬೂರು, ಊರುಕೆರೆ ಹೋಬಳಿಗಳಲ್ಲಿ ಈ ಅದಾಲತ್ ನಡೆಸಿ ನೂರಾರು ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡಲಾಗಿದೆ ಎಂದರು.
ಜನರಿಗೆ ತಿಳುವಳಿಕೆ ಕೊರತೆಯಿಂದ ತಾತ, ಮುತ್ತಾತ, ತಂದೆಯ ಹೆಸರಿನಲ್ಲಿರುವ ಇರುವ ಜಮೀನಿನ ದಾಖಲೆಗಳು, ಅವರ ಕಾಲಾ ನಂತರವೂ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿರುವುದಿಲ್ಲ. ಇದರಿಂದ ಸರಕಾರದ ಸವಲತ್ತುಗಳಾದ ಕಿಸಾನ್ ಸನ್ಮಾನ್,ಬೆಳೆವಿಮೆ, ಬೆಳೆ ಪರಿಹಾರ,ಬೆಂಬಲ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ.ಜೊತೆಗೆ ಪ್ರೂಟ್ ಐಡಿ ಮಾಡಲು ಸಹ ತೊಂದರೆಯಾಗುತ್ತಿದೆ.ಆದ್ದರಿoದ ಜನರು ಈ ಆಂದೋಲನದ ಲಾಭ ಪಡೆದು ತಮ್ಮ ಜಮೀನಿನ ದಾಖಲೆಗಳಲ್ಲಿ ಆಗಿರುವ ತೊಂದರೆ ಸರಿಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಉಪವಿಭಾಗಾಧಿಕಾರಿ ಗೌರವಕುಮಾರ್ ಶೆಟ್ಟಿ ಸಲಹೆ ನೀಡಿದರು.
ಕಂದಾಯ ಅದಾಲತ್ತಿನ ನೋಡಲ್ ಅಧಿಕಾರಿ ಹಾಗೂ ಕೃಷಿ ಇಲಾಖೆಯ ಉಪನಿರ್ದೇಶಕ ಅಶೋಕ್ ಮಾತನಾಡಿ,ಕೃಷಿ ಮತ್ತು ಕಂದಾಯ ಇಲಾಖೆ ಎರಡ ನಡುವೆ ಅವಿನಾಭಾವ ಸಂಬoಧವಿದೆ. ಕಂದಾಯ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಕೃಷಿ ಇಲಾಖೆಯ ಬೆಳೆ ಪರಿಹಾರ, ಬೆಂಬಲ ಬೆಲೆ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರವೇ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕಳುಹಿಸಿದೆ.ಹಾಗಾಗಿ ಲೋಪದೋಷವಿರುವ ಪಹಣಿ ತಿದ್ದುಪಡಿ,ಪಹಣಿ ಕಲಂ 3-9 ಟ್ಯಾಲಿ, ಪೌತಿ ಖಾತೆ ಸೇರಿದಂತೆ ಹಲವು ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥವಾಗಲಿವೆ. ಅಲ್ಲದೆ ಪಿಂಚಿಣಿ ಪಡೆಯುವಲ್ಲಿ ಆಗುತ್ತಿರುವ ತೊಂದರೆ, ಆಧಾರ್-ಪಹಣಿ ಲಿಂಕ್,ಇಕೆವೈಸಿ ಪ್ರೂಟ್ ಐಟಿ ಯಂತಹ ಸಮಸ್ಯೆಗಳಿಗೂ ಸ್ಥಳದಲ್ಲಿಯೇ ಪರಿಹಾರ ದೊರೆಯಲಿದೆ ಎಂದರು.
ಜನರು ಸರಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ, ಅಧಿಕಾರಿಗಳೆ ಜನರ ಮನೆಬಾಗಿಲಿಗೆ ಹೋಗಿ

Leave a comment
Leave a comment