ಮಾಧ್ಯಮ ಹಬ್ಬದ ಪೋಸ್ಟರ್ ಬಿಡುಗಡೆ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸುತ್ತಿರುವ ‘ಇಂಪ್ರೆಶನ್-೨೦೨೩’ ಮಾಧ್ಯಮ ಹಬ್ಬ ಹಾಗೂ ರಾಷ್ಟಿçÃಯ ಸಮ್ಮೇಳನದ ಪೋಸ್ಟರ್ ಅನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಗುರುವಾರ ಬಿಡುಗಡೆ ಮಾಡಿದರು.
ಇದೇ ಜುಲೈ ೨೦ ಹಾಗೂ ೨೧ರಂದು ನಡೆಯಲಿರುವ ಮಾಧ್ಯಮ ಹಬ್ಬದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಜುಲೈ ೨೧ರಂದು ‘ಡಿಜಿಟಲ್ ಯುಗದಲ್ಲಿ ಮಾಧ್ಯಮ ಸಾಕ್ಷರತೆ’ ವಿಷಯದ ಕುರಿತ ರಾಷ್ಟಿçÃಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಮ್ಮ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸುತ್ತಿರುವ ‘ಇಂಪ್ರೆಶನ್-೨೦೨೩’ರ ತಯಾರಿ ಸಂತಸ ತಂದಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ವಿಕಾಸಕ್ಕೆ ಇದು ವೇದಿಕೆಯಾಗಲಿ ಎಂದು ಹಾರೈಸಿದರು.
ಮಾಧ್ಯಮ ಹಬ್ಬದ ಅಂಗವಾಗಿ ವರದಿಗಾರಿಕೆ, ಸುದ್ದಿ ಪ್ರಸ್ತುತಿ, ರೇಡಿಯೋ ಜಾಕಿ, ಛಾಯಾಗ್ರಾಹಣ, ನುಡಿಚಿತ್ರ ಬರೆವಣಿಗೆ, ಪೋಸ್ಟರ್ ವಿನ್ಯಾಸ, ಪೀಸ್-ಟು-ಕ್ಯಾಮೆರಾ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಜಾಹೀರಾತು ನಿರ್ಮಾಣ, ಕಿರುಚಿತ್ರ ಸ್ಪರ್ಧೆಗಳು ನಡೆಯಲಿವೆ. ಪ್ರತಿ ಸ್ಪರ್ಧೆಗೆ ಮೂರು ಬಹುಮಾನಗಳನ್ನು ನೀಡಲಾಗುವುದು. ಅತಿಹೆಚ್ಚು ಅಂಕ ಗಳಿಸುವ ತಂಡಕ್ಕೆ ಸಮಗ್ರ ಛಾಂಪಿಯನ್ಶಿಪ್ ನೀಡಲಾಗುವುದು. ಸ್ಪರ್ಧೆಗಳು ಎಲ್ಲ ವಿಷಯಗಳನ್ನು ವ್ಯಾಸಂಗ ಮಾಡುವ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಮಾಹಿತಿಗಾಗಿ ೮೧೨೩೪೧೦೨೬೮ ಸಂಖ್ಯೆಯನ್ನು ಸಂಪರ್ಕಿಸಬಹುದು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನÀ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕೆ. ವಿ., ಉಪನ್ಯಾಸಕರಾದ ಡಾ. ಪೃಥ್ವಿರಾಜ ಟಿ., ಅನನ್ಯ ಎಂ., ವಿನಯ್ ಕುಮಾರ್ ಎಸ್. ಎಸ್., ಕೋಕಿಲ ಎಂ. ಎಸ್. ಹಾಗೂ ತಾಂತ್ರಿಕ ಸಹಾಯಕ ಅಭಿಷೇಕ್ ಎಂ. ವಿ., ವಿವಿ ಸಂಶೋಧನಾ ನಿರ್ದೇಶಕ ಡಾ. ರಮೇಶ್ ಸಾಲಿಯಾನ್ ಉಪಸ್ಥಿತರಿದ್ದರು.
ಮಾಧ್ಯಮ ಹಬ್ಬದ ಪೋಸ್ಟರ್ ಬಿಡುಗಡೆ

Leave a comment
Leave a comment