ಗಾಣಗಾಪುರ ಅಭಿವೃದ್ಧಿಗೆ ಬದ್ದ ಶಾಸಕ ಪಾಟೀಲ್ ನಾಟಿಕಾರ18 ದಿನಗಳ ದಿಟ್ಟ ಹೋರಾಟಕ್ಕೆ ಬಿತ್ತು ಅಧಿಕೃತ ತೆರೆ.

ಅಫಜಲಪೂರ : ಶಾಸಕ ಎಂ ವಾಯ ಪಾಟೀಲ್ ಅವರ ಭರವಸೆ ಮೇರೆಗೆ ಶಿವಕುಮಾರ್ ನಾಟಿಕಾರ ಅವರ ಕಾಶಿ ಮಾದರಿಯ ಗಾಣಗಾಪುರ ಅಭಿವೃದ್ಧಿಯ ಹೋರಾಟಕ್ಕೆ ಇಂದು ಅಧಿಕೃತವಾಗಿ ಅಂತ್ಯ ಹಾಡಲಾಯಿತು. ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ನಾಟಿಕಾರ ಸುಮಾರು 18 ದಿನಗಳ ಸುದೀರ್ಘ ಹೋರಾಟ ಇಂದು ಅಂತ್ಯವಾಗಿದ್ದು, ಗಾಣಗಾಪುರ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಪಾಟೀಲರು ಭರವಸೆ ನೀಡಿದ್ದು ಹಾಗಾಗಿ ಆದಷ್ಟು ಬೇಗ ಭರವಸೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಅದಕ್ಕೆ ನಾವು ಕೂಡ ಕೈಜೋಡಿಸುತ್ತೇವೆ ಎಂದರು. ನಂತರ ಮಾತನಾಡಿದ ಶಾಸಕ ಎಂ ವಾಯ ಪಾಟೀಲ್, ಶಿವಕುಮಾರ್ ನಾಟಿಕಾರ ಅವರ ಹೋರಾಟ ಹಗ್ಗ ಹಿಡುದು ಹರಿಯೋತನಕ ಬಿಡೋದಿಲ್ಲ ಎನ್ನುವ ಹಾಗೆ ಇರುತ್ತದೆ ಎಂದು ನಾಟಿಕಾರ ಹೋರಾಟದ ಬಗ್ಗೆ ಪ್ರಶಂಸನೀಯ ಮಾತುಗಳು ಆಡಿದರು.ಹಾಗಾಗಿ ಅವರ ಹೋರಾಟಕ್ಕೆ ನನ್ನ ಬೆಂಬಲ ಯಾವತ್ತೂ ಇದೆ ಗಾಣಗಾಪುರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ನೂರು ಎಕರೆ ಜಾಗ ತೋರಿಸಿ ಎಂದು ಈಗಾಗಲೇ ಸರ್ಕಾರ ಹೇಳಿದೆ, ಆದರೆ ಇಲ್ಲಿ ಸ್ಥಳವಕಾಶ ಕೊರತೆ ಇದೆ ಹಾಗಾಗಿ ಗ್ರಾಮಸ್ಥರೊಂದಿಗೆ ಚರ್ಚಿಸುವೆ ಎಂದಿದ್ದೇನೆ ಅಷ್ಟೇ ಅಲ್ಲದೆ ಕಲ್ಯಾಣ್ ಕರ್ನಾಟಕ ಪ್ರದೇಶಾಭಿವೃದ್ಧಿಯಿಂದ ಇದಕ್ಕೆ ಅನುದಾನ ಬರೋದಿಲ್ಲ ಅದು ಕೇವಲ ಅಭಿವೃದ್ಧಿಗೆ ಅಷ್ಟೇ ಸೀಮಿತವಾಗಿರುತ್ತದೆ ಆದರೂ ಕೂಡ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಅದರಲ್ಲಿ 50 ಕೋಟಿ ರೂಪಾಯಿ ಕೊಡಲು ಚರ್ಚಿಸುವೆ ಎಂದರು. ಗಾಣಗಾಪೂರ ಅಭಿವೃದ್ಧಿಗೆ 200 ಕೋಟಿ ಸಾಕಾಗುವದಿಲ್ಲ ಸರಿ ಸುಮಾರು ಅಂದಾಜು ವೆಚ್ಚ 500 ಕೋಟಿ ಬೇಕು ಅಂದಾಗ ಸಮಗ್ರ ಅಭಿವೃದ್ಧಿ ಮಾಡಲು ಸಾಧ್ಯ, ಈಗಾಗಲೇ ಕೇಂದ್ರ ಸರ್ಕಾರಕ್ಕೆ 200 ಕೋಟಿ ರೂಪಾಯಿಯ ಯೋಜನೆಯ ಪ್ರಸ್ತಾವನೆ ಜಿಲ್ಲಾಡಳಿತದಿಂದ ಕಳುಹಿಸಲಾಗಿದೇ ಎಂದರು, ನಾನು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ 30 ಕೋಟಿ ರೂಪಾಯಿ ಖರ್ಚು ಮಾಡಿ ಸಂಗಮ ಕ್ಷೇತ್ರವನ್ನು ಸೇರಿದಂತೆ ಇನ್ನಿತರ ಸ್ಥಳಗಳ ಅಭಿವೃದ್ಧಿ ಮಾಡಿದ್ದೇನೆ ಇನ್ನು ಅನೇಕ ಕೆಲಸಗಳು ಬಾಕಿ ಇವೆ ಅವುಗಳಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ದತ್ತ ಕ್ಷೇತ್ರಕ್ಕೆ ಪ್ರಾಧಿಕಾರ ರಚನೆಗೆ ಕೆಲವು ಗ್ರಾಮಸ್ಥರ ವಿರೋಧವಿದೆ ಆದರೆ ಬಹಳಷ್ಟು ಜನರ ಅಭಿಪ್ರಾಯ ಪ್ರಾಧಿಕಾರ ರಚನೆಗೆ ಒಪ್ಪಿಗೆ ಇದೆ ಹಾಗಾಗಿ ನಾನು ಪ್ರಾಧಿಕಾರ ರಚನೆ ಖಂಡಿತವಾಗಿ ಮಾಡುತ್ತೇನೆ ಎಂದರು, ಆದರೆ ಪ್ರಾಧಿಕಾರ ರಚನೆ ಮಾತು ಪ್ರಸ್ತಾಪವಾಗುತ್ತಿದ್ದಂತೆ ಎದ್ದು ನಿಂತ ಅರ್ಚಕ ಪ್ರಿಯಾಂಕ್ ಪೂಜಾರಿ ಪ್ರಾಧಿಕಾರ ರಚನೆಗೆ ನಮ್ಮದು ಯಾರದು ಅಭ್ಯಂತರವಿಲ್ಲ ಆದರೆ ರಚನೆ ಸಮಯದಲ್ಲಿ ನಮ್ಮ ಎಲ್ಲ ಅರ್ಚಕರ ಗಮನಕ್ಕೆ ತರಬೇಕು ಎಂದು ಹೇಳಿದರು ಇದಕ್ಕೆ ಶಾಸಕರು ಸಮ್ಮತಿಸಿದರು. ಸರ್ಕಾರದ ಮಟ್ಟದಲ್ಲಿ ಸೂಕ್ತ ಚರ್ಚೆ ಮಾಡಿ ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ನಾನು ಬದ್ದನಿದ್ದೇನೆ ಹಾಗಾಗಿ ಕೂಡಲೇ ಶಿವಕುಮಾರ ನಾಟಿಕಾರ್ ತಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸಬೇಕು ಎಂದರು.ಶಾಸಕರ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹ ಕೈಬಿಡಲಾಯಿತು.18 ದಿನಗಳ ಧರಣಿ ಸತ್ಯಾಗ್ರಹಕ್ಕೆ ಗ್ರಾಮಸ್ಥರು ಎಲ್ಲರೂ ಕೈಜೋಡಿಸಿದ್ದಕ್ಕೆ ನಾಟಿಕಾರ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದರು.ನಂತರ ಹೋರಾಟಗಾರ ಶಿವಕುಮಾರ್ ನಾಟಿಕಾರ್ ಹಾಗೂ ರಾಜು ಉಕ್ಕಲಿ ಯವರಿಗೆ ಗ್ರಾಮಸ್ಥರು ಮೈಸೂರು ಪೆಟ್ ಹಾಗೂ ಶಾಲು ಹೊದಿಸಿ ದತ್ತಾತ್ರೇಯರ ಭಾವಚಿತ್ರದ ಸ್ಮರಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ,ತಹಸೀಲ್ದಾ ಸಂಜೀವಕುಮಾರ ದಾಸರ, ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಜೇ ಎಂ ಕೊರಬು, ಸಿದ್ದಾರ್ಥ ಬಸರೀಗಿಡ,ಮಾರುತಿ ಮೂರನೇತ್ತಿ, ಅರ್ಚಕ ಪ್ರಿಯಾಂಕ್ ಪೂಜಾರಿ, ಕರುಣಾಕರ ಭಟ್ ಪೂಜಾರಿ, ದತ್ತು ಬೆಂಗಳೂರು,ದಿಗಂಬರ ಕರ್ಜಗಿ, ಗುಂಡಪ್ಪ ಹೊಸಮನಿ, ಚಿಚೋಲ್ ಅರ್ಜುಣಗಿ, ರಾಜು ಉಕ್ಕಲಿ, ಯಲ್ಲಪ್ಪ ರಾಮಗಾ, ರಾಜೇಂದ್ರ ಸರ್ದಾರ, ಅವದೂತ ಬಂದ್ರವಾಡ,ವಿಜಯ ವಡಗೇರಿ, ಚಂದ್ರಕಾಂತ್ ಮಾವುರ, ಪಿಂಟು ಘತ್ತರಗಿ, ಶ್ರೀಪಾದ ಸೆಂಡಗೆ, ನರಹರಿ ಪಟೇದ,ಸೇರಿದಂತೆ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.