ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಅಫಜಲಪೂರ ವತಿಯಿಂದ ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ತಾಲೂಕಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲಾ ರೈತ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಅಮೃತ್ ರಾವ್ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಫಜಪೂರ ತಾಲ್ಲೂಕು ಸಂಪೂರ್ಣ ಬರಗಾಲಕ್ಕೆ ತುತ್ತಾಗಿದೆ. ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದ್ದು ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ ಇನ್ನು ಆರು ತಿಂಗಳ ಕಾಲ ಧನ ಕರು ಮನುಷ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ ಕೃಷ್ಣ ಕಾಲುವೆ ಮುಖಾಂತರ ಭೀಮಾನದಿಗೆ ನೀರು ಹರಿಸಿ ಮತ್ತು ಕಬ್ಬಿಗೆ ಬೆಳಗಾವಿ ಮಾದರಿಯಲ್ಲಿ ಬೆಲೆ ಕೊಡಿಸಿ ಇವತ್ತು ಬೆಳಗಾವಿಯಲ್ಲಿ 3400 ಎಫ್ ಆರ್ ಪಿ ಇದ್ದು ಸಾಗಾಣಿಕೆ ಕಟಾವು ವೆಚ್ಚ ಕಡಿತ ಮಾಡಿ ಕಬ್ಬಿಗೆ 3000 ಬೆಲೆಯನ್ನು ಕೊಡುತ್ತಿದ್ದಾರೆ ಮತ್ತು ಹಿಂದಿನ ಬಾಕಿ 112 ಇದೆ . ಅಫಜಪೂರ ತಾಲೂಕಿನ ಈ ವರ್ಷ ಎಫ್ ಆರ್ ಪಿ 3350 ರೂಪಾಯಿ ಇದೆ ಸಾಗಾಣಿಕೆ ಕಟಾವು ವೆಚ್ಚ ಕಡಿತ ಮಾಡಿ ನಮಗೆ 3000 ಬೆಲೆ ಕೊಡಿಸಬೇಕು ಮತ್ತು ಬರಗಾಲಕ್ಕೆ ಪ್ರತಿ ಎಕರೆಗೆ 25000 ಪರಿಹಾರ ಕೊಡಬೇಕೆಂದು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಅಳಲನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಸಿದ್ದು ದನ್ನೂರ್,ಅಮೃತ ರಾವ್ ಪಾಟೀಲ್, ಗುರು ಚಾಂದಕೋಟೆ, ನಾಗಯ್ಯ ಆಕಾಶಮಠ, ಅಣ್ಣರೈಗೌಡ್ ಪಾಟೀಲ್ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.