ಆಳಂದ ತಾಲೂಕಿನ ದಂಡಾಧಿಕಾರಿಗಳಾದ ಯಲ್ಲಪ್ಪ ಬಿ ಸುಬೇದಾರ್ ಅವರಿಗೆ ರಾಷ್ಟ್ರೀಯ ಮತದಾರರ ದಿನ ಅಂಗವಾಗಿ 2024ರ ವಿವಿಧ ಭಾಗಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ಬೆಂಗಳೂರಿನ ಪುಟ್ಟಣ ಚೆಟ್ಟಿ ಟೌನ್ ಹಾಲನಲ್ಲಿ ನಡೆದ ಜನವರಿ 25 ರಂದು ಕಲಬುರ್ಗಿ ಜಿಲ್ಲೆಯಿಂದ ಅತ್ಯುತ್ತಮ ಸಹಾಯಕ ಮತದಾರ ನೋಂದಣಿ ಅಧಿಕಾರಿ ಎಂದು ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರಿಂದ ಪ್ರಶಸ್ತಿ ನೀಡಲಾಗಿತ್ತು .ಅದರ ಪ್ರಯುಕ್ತ ಇಂದು ಅವರ ಸ್ವಗೃಹದಲ್ಲಿ ಶ್ರೀ ಗಂಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಮಹಾಂತೇಶ್ ಹಾಲ್ಗಡಲಿ, ಸಹ ಶಿಕ್ಷಕರಾದ ಬಸವರಾಜ್ ಪುಲಾರಿ, ಶಿವಶರಣ ವಾಲೆ, ರಾಜಶೇಖರ್ ಧೂಳಬಾ ಅವರಿಂದ ಸುಬೇದಾರ್ ದಂಪತಿಗಳಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ತದನಂತರ ಸುಬೇದಾರ್ ಅವರಿಗೆ ಸನ್ಮಾನಿಸಿದ ಎಲ್ಲರೂ ಅವರ ಕಾರ್ಯವೈಖರಿಗಳ ಬಗ್ಗೆ ,ಅವರ ಸರಳ ವ್ಯಕ್ತಿತ್ವದ ಬಗ್ಗೆ, ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಸುಬೇದಾರ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಿಮಗೆ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ವರಿಂದ ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ತಂದಿದೆ ನನ್ನ ಖುಷಿಯಲ್ಲಿ ನನ್ನ ಗೆಳೆಯರ ಬಳಗ ನನ್ನ ಬಂಧು ಮಿತ್ರರು ಭಾಗಿಯಾಗುತ್ತಾ ಇದ್ದಾರೆ ಎಂದರು.
ಈ ಸಂದರ್ಭದಲ್ಲಿ ಗಂಗಾಪರಮೇಶ್ವರಿ ಶಾಲೆಯ ಮುಖ್ಯ ಗುರುಗಳಾದ ಮಹಾಂತೇಶ್ ಹಾಲಗಡಲಿ, ಸಹ ಶಿಕ್ಷಕರಾದ ಬಸವರಾಜ ಪುಲಾರಿ ,ಶಿವಶರಣ ವಾಲೆ, ರಾಜಕುಮಾರ್ ಧೂಳಬಾ, ಮತ್ತು ರಂಗರಾವ್ ಖೇಡಗಿಕರ ಬಸವರಾಜ್ ಹಡಪದ್ ,ಅನಿಲ್ ಹೂಗಾರ್, ಕೃಷ್ಣ ಜಾಗಿರ್ದಾರ್, ಮಾಳಪ್ಪ ಪೂಜಾರಿ, ಮಲ್ಲಿಕಾರ್ಜುನ್ ಪಾಟೀಲ್, ಸೇರಿದಂತೆ ದಯಾನಂದ್ ಹಾಸು ಹಿರೋಳ್ಳಿಯ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಈ ಸಂದರ್ಭದಲ್ಲಿ ಇವರು ಕೂಡ ಸನ್ಮಾನಿಸಿದರು.