ಸಕಲ ಜೀವಿಗೂ ಆಶ್ರಯದಾತ ಭೂಮಿ – ಡಾ.ದೇವರಾಜ ರೆಡ್ಡಿ
ವಿಶ್ವ ಭೂ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಭಿಮತ
ತುಮಕೂರು: ಕೈಗಾರಿಕೀಕರಣ, ಜನಸಂಖ್ಯೆ ಸ್ಫೋಟ, ಅರಣ್ಯನಾಶ, ಪಳೆಯುಳಿಕೆ ಇಂಧನಗಳನ್ನು ಸುಡುವುದು ಮತ್ತು ಹೆಚ್ಚಿನ ಸಾರಿಗೆಯಂತಹ ಮಾನವ ಚಟುವಟಿಕೆಗಳಿಂದ ಹಾಳಾಗಿರುವ ಇಂದಿನ ಪರಿಸರ ವ್ಯವಸ್ಥೆಯನು ಪುನಃಸ್ಥಾಪಿಸುವ ಅವಶ್ಯಕತೆಯಿದೆ. ಸಕಲ ಜೀವಿಯ ಬದುಕಿಗೆ ಅವಶ್ಯವಿರುವ ಅನ್ನ, ನೀರು, ಗಾಳಿ ಒದಗಿಸುವುದು ಇದೇ ಭೂಮಿ ಎಂದು ಚಿತ್ರದುರ್ಗದ ಜಲವಿಜ್ಞಾನಿ ಡಾ.ದೇವರಾಜ್ ರೆಡ್ಡಿ ಎನ್.ಜೆ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿAಗ್ ವಿಭಾಗದಿಂದ ವಿಶ್ವ ಭೂ ದಿನಾಚರಣೆಯನ್ನು ಸಸಿಗೆ ನೀರು ಊಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿಯವರೆಗೆ ಸುಮಾರು ೨೦ ಸಾವಿರಕ್ಕಿಂತ ಹೆಚ್ಚು ಬೋರವೆಲ್ಗಳನ್ನು ಕೊರೆಸಲು ಸಲಹೆ ನೀಡಿದ್ದೇನೆ. ಸಂಪ್ರದಾಯವನ್ನು ಬದಿಗಿಟ್ಟು ವೈಜ್ಞಾನಿಕವಾಗಿ ಬೋರವೆಲ್ ಕೊರೆಸುವುದು ಸೂಕ್ತ ಮಾರ್ಗ ಎಂದು ತಿಳಿಸಿದರು.
ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡ ಮಾತನಾಡಿ, ಭೂಮಿಗೂ ಸಿವಿಲ್ ಅಭಿಯಂತರರಿಗೂ ಒಂದು ರೀತಿಯ ಅಭಿನಾಭವ ಸಂಬAಧವಿದೆ. ಸರ್ ಎಂ ವಿಶ್ವೇಶ್ವರಯ್ಯನವರು ಕೂಡ ಸಿವಿಲ್ ಅಭಿಯಂತರರಾಗಿದ್ದರು, ಅವರು ಹಾಕಿ ಕೊಟ್ಟ ಆದರ್ಶಗಳನ್ನು ಅನುಸರಿಸಿ ನಿಮಗೆ ಸಿಗುವ ಒಳ್ಳೆಯ ಅವಕಾಶಗಳನ್ನು ಬಳಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆಯತ್ತ ಸಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ ಎಸ್ ರವಿಪ್ರಕಾಶ್ ಮಾತನಾಡಿ, ಭೂಮಿಯನ್ನು ತಾಯಿಯ ಸ್ವರೂಪದಲ್ಲಿ ಕಾಣುವ ಏಕೈಕ ದೇಶ ಭಾರತ. ಭೂಮಿಯು ನಮಗೆ ಸಕಲವನ್ನೂ ನೀಡಿದೆ. ಅಂತಹ ಭೂಮಿಗೆ ನಾವೂ ಏನಾದರೂ ಒಂದು ಚಿಕ್ಕ ಕೊಡುಗೆ ನೀಡಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಲವಿಜ್ಞಾನಿ ಡಾ. ದೇವರಾಜ ರೆಡ್ಡಿ ಅವರು ಮಳೆ ನೀರು ಕೊಯ್ಲು ಮತ್ತು ಬೋರವೆಲ್ ರೀಚಾರ್ಜ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.