ಹೆಬ್ಬೂರು: ಅಪಾರ ಜನರ ನಡುವೆ ಮನೆ ಮನೆ ಪ್ರಚಾರ ನಡೆಸುವ ಜನಾರ್ಶೀವಾದ ಪ್ರಚಾರ ಯಾತ್ರೆಯನ್ನು ಮಾಜಿ ಶಾಸಕ ಬಿ.ಸುರೇಶಗೌಡರು ಶುಕ್ರವಾರ ಹೆಬ್ಬೂರು ಗ್ರಾಮದಲ್ಲಿ ಚಾಲನೆ ನೀಡಿದರು.
ಕಾರ್ಯಕರ್ತರು, ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಬ್ಬೂರು ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.
ಹೆಬ್ಬೂರು ಐತಿಹಾಸಿಕ ಊರು. ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾಡುವ ಸಲುವಾಗಿ ತಾವು ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಈಗಿನ ಶಾಸಕರು ಯಾವುದೇ ಕೆಲಸ ಮಾಡದೇ ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದರು.
ನಮ್ಮ ಕಾಲದಲ್ಲಿ ಹೆಬ್ಬೂರಿಗೆ ಬಸ್ ನಿಲ್ದಾಣ ಮಾಡಿದೆ. ಪದವಿ ಕಾಲೇಜ್ ಅಭಿವೃದ್ಧಿ,ಹೆಬ್ಬೂರು ಹೋಬಳಿಗೆ ಹೊಂದಿಕೊಳ್ಳುವ ಎಲ್ಲಾ ಗ್ರಾಮಗಳಿಗೆ ಸುಸಜ್ಜಿತವಾದ ರಸ್ತೆಗಳ ನಿರ್ಮಾಣ ಮಾಡಿರುತ್ತೇನೆ, ಹೆಬ್ಬೂರು ನಿಂದ.ಎಸ್ ಪುರ ರಸ್ತೆ, ಗುಬ್ಬಿಗೆ ಹೋಗುವ ಸಿರಿವರ ರಸ್ತೆ ಹೊನ್ನುಡಿಕೆ ರಸ್ತೆ ಇಂದಿಗೂ ಸಹ ಒಂದು ಪ್ಯಾಚ್ ಬಿದ್ದಿರುವುದ್ದಿಲ್ಲ, ನರಸಾಪುರ ಮತ್ತು ತಿಮ್ಮಸಂದ್ರ ಗ್ರಾಮದಲ್ಲಿ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಹೆಬ್ಬೂರು ಗ್ರಾಮದಲ್ಲಿ ಸರ್ಕಾರಿ ಹೈಸ್ಕೂಲ್, ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗೆ ನೆಲ್ಲಿ ನೀರು, ಓವರ್ ಹೆಡ್ ಟ್ಯಾಂಕ್,ಸಿಸಿ ರಸ್ತೆ ಚರಂಡಿ, ಪ್ರತಿ ಮನೆಗೆ ಶೌಚಾಲಯ,ಪ್ರತಿ ರೈತರಿಗೆ ಒಂದು ಟಿಸಿ, ದೇವಸ್ಥಾನ ಗಳ ಜೀರ್ಣೋದ್ಧಾರ, ನಮ್ಮ ಅವದಿಯಲ್ಲಿ ಸುಮಾರು 20,000 ಸಾವಿರ ಬಡವರಿಗೆ ಮನೆ ನೀಡಿರುವುದು,ವೃದ್ದರಿಗೆ ಮಾಸಶನ ಕೊಡಿಸಿರುವುದು, ಹೇಮಾವತಿ ಏತ ನೀರಾವರಿ ಯೋಜನೆಯನ್ನು ನೆನಪು ಮಾಡಿಕೊಂಡರು.

ಹೆಬ್ಬೂರು ನೂರೊಂದು ದೇವಸ್ಥಾನ ಕಲ್ಯಾಣಿ ಹೊಂದಿರುವ ಇತಿಹಾಸ ಪ್ರಸಿದ್ಧ ಊರು. ಇಲ್ಲಿನ ಶ್ರೀ ಬ್ಯಾಟರಾಯ ಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿದೆ. ಇಲ್ಲಿರುವ ದೇವಸ್ಥಾನಗಳು, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಪ್ರಚಾರದ ವೇಳೆ ಕಾರ್ಯಕರ್ತರು, ಹಾಲಿ ಮಾಜಿ ಅಧ್ಯಕ್ಷರು ಪಂಚಾಯಿತಿ ಸದಸ್ಯರು ಬಿಜೆಪಿ ಯುವ ಮುಖಂಡರು ಪ್ರಮುಖರು ಇದ್ದರು.