ತುಮಕೂರು : ನಗರದ ದಿಬ್ಬೂರಿನಲ್ಲಿರುವ ಕೊಳಚೆ ನಿವಾಸಿಗಳಿಗಾಗಿ ಇದೇ ಪ್ರಫ್ರಥಮ ಬಾರಿಗೆ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ನಡೆಸಿ, ಚಿಕಿತ್ಸೆ ಮತ್ತು ಔಷಧಿಗಳನ್ನು ವಿತರಿಸಲಾಯಿತು.ಚಿಂದಿ ಆಯುವವರ ಶ್ರೇಯೋಭಿವೃದ್ದಿ, ಸಾಮಾಜಿಕ ಭದ್ರತೆ, ಆರೋಗ್ಯ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಹಸಿರು ದಳ ಸಂಸ್ಥೆ’ಯ ನೇತೃತ್ವದಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 30 ಕ್ಕೂ ಹೆಚ್ಚು ವೈದ್ಯರ ತಂಡ, ದಿಬ್ಬೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿತು. ಚಿಂದಿ ಹಾಯುತ್ತಾ ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿಕೊಂಡಿದ್ದ ತಳ ಸಮುದಾಯದ ಜನರನ್ನು ಗುರುತಿಸಿ, ಶಿಬಿರದಲ್ಲಿ ಕಣ್ಣು ಕಿವಿ ಚರ್ಮ, ಸಕ್ಕರೆ, ರಕ್ತದೊತ್ತಡ ಹಾಗೂ ಇತರೆ ಪರೀಕ್ಷೆಗಳೊಂದಿಗೆ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಯಿತು.
ಸುಮಾರು 260 ಕ್ಕೂ ಹೆಚ್ಚು ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.ಶಿಬಿರದಲ್ಲಿ ಹಸಿರು ದಳ ಸಂಸ್ಥೆಯ ಮೋಹನ್, ಚಂದನ್, ನಾರಾಯಣ ಹಾಗೂ ಸ್ವಯಂ ಸೇವಕರಾದ ನಮ್ರತ ಜೊತೆಗೆ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರ ತಂಡ ಮತ್ತು ದಿಬ್ಬೂರು ಸ್ಲಂ ನಿವಾಸಿಗಳ ಮುಖಂಡರುಗಳು ಭಾಗವಹಿಸಿದ್ದರು.
ತುಮಕೂರು : ನಗರದ ದಿಬ್ಬೂರಿನಲ್ಲಿರುವ ಕೊಳಚೆ ನಿವಾಸಿಗಳಿಗಾಗಿ ಇದೇ ಪ್ರಫ್ರಥಮ ಬಾರಿಗೆ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರವನ್ನು ನಡೆಸಿ, ಚಿಕಿತ್ಸೆ ಮತ್ತು ಔಷಧಿಗಳನ್ನು ವಿತರಿಸಲಾಯಿತು.
ಚಿಂದಿ ಆಯುವವರ ಶ್ರೇಯೋಭಿವೃದ್ದಿ, ಸಾಮಾಜಿಕ ಭದ್ರತೆ, ಆರೋಗ್ಯ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಹಸಿರು ದಳ ಸಂಸ್ಥೆ’ಯ ನೇತೃತ್ವದಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 30 ಕ್ಕೂ ಹೆಚ್ಚು ವೈದ್ಯರ ತಂಡ, ದಿಬ್ಬೂರಿನಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಿತು. ಚಿಂದಿ ಹಾಯುತ್ತಾ ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿಕೊಂಡಿದ್ದ ತಳ ಸಮುದಾಯದ ಜನರನ್ನು ಗುರುತಿಸಿ, ಶಿಬಿರದಲ್ಲಿ ಕಣ್ಣು ಕಿವಿ ಚರ್ಮ, ಸಕ್ಕರೆ, ರಕ್ತದೊತ್ತಡ ಹಾಗೂ ಇತರೆ ಪರೀಕ್ಷೆಗಳೊಂದಿಗೆ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಯಿತು. ಸುಮಾರು 260 ಕ್ಕೂ ಹೆಚ್ಚು ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
ಶಿಬಿರದಲ್ಲಿ ಹಸಿರು ದಳ ಸಂಸ್ಥೆಯ ಮೋಹನ್, ಚಂದನ್, ನಾರಾಯಣ ಹಾಗೂ ಸ್ವಯಂ ಸೇವಕರಾದ ನಮ್ರತ ಜೊತೆಗೆ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರ ತಂಡ ಮತ್ತು ದಿಬ್ಬೂರು ಸ್ಲಂ ನಿವಾಸಿಗಳ ಮುಖಂಡರುಗಳು ಭಾಗವಹಿಸಿದ್ದರು.
- Advertisement -
ಸಿದ್ದಾರ್ಥ ಆಸ್ಪತ್ರೆಯಿಂದ ದಿಬ್ಬೂರಿನ ಕೊಳಚೆ ನಿವಾಸಿಗಳಿಗೆ ಆರೋಗ್ಯ ಸೇವೆ