ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಜಿ.ಜಿ.ವಿ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ(ರಿ) ಸಂಯುಕ್ತಾಶ್ರಯದಲ್ಲಿ ಐಇಸಿ ಕಾರ್ಯಕ್ರಮದಡಿ ಆರೋಗ್ಯ ಶಿಭಿರವನ್ನು ನಗರದ ಭಾರತಿ ನಗರದಲ್ಲಿ ಹಮ್ಮಿಕೊಳ್ಳಲಾಯಿತು.
ಶಿಭಿರದ ಉದ್ಘಾನೆಯನ್ನು ನೆರವೇರಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಇಡೀ ದೇಶಕ್ಕೆ ಅಹಿಂಸಾ ಮಾರ್ಗದ ಸಿದ್ಧಾಂತವನ್ನು ತಂದುಕೊಟ್ಟವರು ಮಹಾತ್ಮಗಾಂಧಿಜಿ ಅಂತಹ ಮಹಾತ್ಮ ಬಾಬಾಜಿರವರಿಗೆ ೧೫೪ನೇ ಹುಟ್ಟು ಹಬ್ಬದ ಸಂಭ್ರಮವನ್ನು ದೇಶದ ಜನ ನೆನಪಿಸಿಕೊಳ್ಳುವ ದಿನವಾಗಿದೆ, ದೇಶದ ಜನ ಗುಲಾಮಗಿರಿಯಿಂದ ಹೊರಬಂದು ಪ್ರಜಾಪ್ರಭುತ್ವ ದೇಶವಾಗಬೇಕು, ಸ್ವಾವಲಂಬನೆಯ ಜೀವನ ಸಾಧಿಸಬೇಕು ಎಂದು ಹಾಕಿಕೊಟ್ಟ ಸ್ವಚ್ಛತೆ ಸಹಿಷ್ಣತೆ, ಅನ್ಯ ಧರ್ಮಗಳನ್ನು ಅನುಸರಿಸುವ ಸೌಹಾರ್ಧತೆಯಿಂದ ಬದುಕುವುದನ್ನು ತಿಳಿಸಿಕೊಟ್ಟಿದ್ದಾರೆ. ಅವರ ಆಶಯದಂತೆ ಬ್ರಿಟಿಷರೊಂದಿಗೆÀ ಹಿಂಸಾ ಮಾರ್ಗವನ್ನು ಪ್ರತಿಪಾಧಿಸದೇ ಅಹಿಂಸಾ ಮಾರ್ಗವನ್ನು ಹಿಡಿದು ತಮ್ಮ ಜೀವನದುದಕ್ಕೆ ಸಮಾಜದ ಒಳಿತಿಗಾಗಿ ಶ್ರಮಿಸಿದವರು ಮಹಾತ್ಮ ಗಾಂಧಿ, ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು” ಎಂಬ ಮಹಾತ್ಮ ಗಾಂಧಿ ರವರ ಘೋಷಣೆಯನ್ನು ನಾಗರೀಕ ಸಮಾಜ ಅಳವಡಿಸಿಕೊಳ್ಳಬೇಕಿದೆ ಎಂದರು.

ನಂತರ ಕಾರ್ಯಕ್ರಮದ ಮಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಸ್ಲಂ ಬೋರ್ಡ್ ಎಇ ಚೇತನ್ ಕುಮಾರ್ ಕರ್ನಾಟಕ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಲು ಜನರಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಬೇಕು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಐಹೆಚ್ಎಸ್ಡಿಪಿ-ಐಇಸಿ ಕಾರ್ಯಕ್ರಮದಡಿ ತುಮಕೂರು ನಗರದ ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಶಿಭಿರ ಹಾಗೂ ಕೌಶಲ್ಯಾಧಾರಿತ ತರಬೇತಿಗಳು ಅಂದರೆ ೧೮ ವರ್ಷ ಮೇಲ್ಪಟ್ಟ ೩೫ ವರ್ಷದ ಒಳಗಿನ ಯುವಕ ಮತ್ತು ಯುವತಿರಿಗೆ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಕಂಪ್ಯೂಟರ್,ಡ್ರೆöÊವಿAಗ್, ಟೈಲರಿಂಗ್ ತರಬೇತಿಗಳನ್ನು ಕೊಟ್ಟು ಅವರ ಮುಂದಿನ ಉದ್ಯೂಗಕ್ಕೂ ಅನುಕೂಲ ಮಾಡಲು ಮಂಡಳಿ ಶ್ರಮಿಸುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.