ಗಾಂಧೀಜಿ ಶಾಂತಿ ಸಂದೇಶ, ಶಾಸ್ತಿçಯವರ ದೃಢ ಸಂಕಲ್ಪ ವಿಶ್ವಕ್ಕೆ ಮಾದರಿ- ಕಸಾಪ ಅಧ್ಯಕ್ಷ
ತುಮಕೂರು(ಕ.ವಾ.)ಅ.೨: ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಅಸ್ತçಗಳನ್ನು ಕೊಟ್ಟಂತಹವರು ಮಹಾತ್ಮ ಗಾಂಧೀಜಿ, ಸರಳತೆಯನ್ನು ತಿಳಿಸಿಕೊಟ್ಟವರು ಲಾಲ್ ಬಹದ್ದೂರ್ ಶಾಸ್ತಿçಜೀ. ಇಂತಹ ಮಹನೀಯರು ಹಾಕಿ ಕೊಟ್ಟಂತಹ ಆದರ್ಶಗಳನ್ನು ಅನುಕರಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ೧೫೪ನೇ ಮಹಾತ್ಮ ಗಾಂಧಿ ದಿನಾಚರಣೆ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆ ಹಾಗೂ ಪ್ರಬಂಧ ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರö್ಯ ಪೂರ್ವ ಚಳುವಳಿ ಸಂಬAಧ ಜಾಗೃತಿ ಮೂಡಿಸಲು ೧೯೨೭ರ ಆಗಸ್ಟ್ ತಿಂಗಳಿನಲ್ಲಿ ಕಸ್ತೂರಬಾರವರೊಂದಿಗೆ ಆಗಮಿಸಿದ್ದರು ಎಂದು ಸ್ಮರಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿದ್ದ ಮಹಾತ್ಮ ಗಾಂಧೀಜಿಯವರು ಬಹಿರಂಗ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು. ಮರುದಿನ ಬೆಳಿಗ್ಗೆಯೇ ಕೋತಿತೋಪು ಬಳಿಯ ಹರಿಜನರ ಕೇರಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಅದೇ ದಿನ ಸಂಜೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಸ್ಟೇಲ್ಗೆ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
ಭಾರತದ ಜನತೆಗೆ ಗಾಂಧೀಜಿಯವರು ನೀಡಿದ ಕೊಡುಗೆ ಎಂದರೆ ಅದು ಸತ್ಯಕ್ಕೆ ಆಗ್ರಹ ಅಂದರೇ ಸತ್ಯಾಗ್ರಹ, ಬ್ರಿಟೀಷರ ವಿರುದ್ದ ಹೋರಾಡಲು ಅವರು ಬಳಸಿದ ಅಸ್ತçವೆಂದರೆ ಶಾಂತಿ, ಅಹಿಂಸೆ ಹಾಗೂ ಧರ್ಮ. ಈ ಮೂರು ಅಸ್ತçಗಳೊಂದಿಗೆ ಬ್ರಿಟೀಷರ ಪಾರುಪತ್ಯವನ್ನು ಮಾಹಾತ್ಮ ಗಾಂಧಿಜಿಯವರು ಕೊನೆಗಾಣಿಸಿದರು ಎಂದು ತಿಳಿಸಿದರು.
ಗಾಂಧೀಜಿ ಶಾಂತಿ ಸಂದೇಶ,

Leave a comment
Leave a comment