ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಗರದ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ರಂಜಾನ್ ಪ್ರಯುಕ ಸೌಹಾರ್ಧ ಇಫ್ತಿಯಾರ್ ಕೂಟವನ್ನು ಕ್ಯಾತ್ಸಂದ್ರ ಎಳ್ಳರಬಂಡೆ ಜಾಬೀರ್ಖಾನ್,ಎಸ್.ಎನ್ ಪಾಳ್ಯದ ಗುಲ್ನಾಜ್, ಭಾರತಿ ನಗರದ ಶಾಬುದ್ದಿನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಇಫ್ತಿಯಾರ್ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಎ.ನಸಿಂಹಮೂರ್ತಿ ತುಮಕೂರು ಕೊಳಗೇರಿ ಹಿತರಕ್ಷಣಾ ಸಮಿತಿಯಿಂದ ಕಳೆದ 5 ವರ್ಷಗಳಿಂದ ಹಿಂದು ಮುಸ್ಲಿಂ ಭಾವೈಕ್ಯತೆಗಾಗಿ ರಂಜಾನ್ ಇಫ್ತಿಯಾರ್ ಕೂಟವನ್ನು ಮಾಡುತ್ತ ಬರುತ್ತಿದೆ, ಸ್ಲಂ ಎಂದರೇ ಕೇವಲ ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಸೀಮಿತವಲ್ಲ ಹಲವು ಜಾತಿಗಳು,ಧರ್ಮಗಳು ಸಮುದಾಯಗಳ ಜನ ವಾಸಿಸುತ್ತಾರೆ ಅವರ ಆಚಾರ ವಿಚಾರಗಳನ್ನು ಗೌರವಿಸುವುದಾಗಿದೆ, ಹಿಂದೂ ಮುಸ್ಲಿಂ ಬಾಂಧವರಲ್ಲಿ ಸೌಹಾರ್ಧತೆಯನ್ನು ಕಾಪಾಡುವುದಾಗಿದೆ, ಜಾತಿ, ಧರ್ಮಗಳ ನಡುವೆ ವೈಶಮ್ಯ ಬಿತ್ತುವ ಕೆಲವು ಕೋಮುವಾದಿಗಳಿಂದ ಮನಷ್ಯತ್ವ ಮತ್ತು ಮಾನವೀಯತೆ ಮೇಲೆ ದಕ್ಕೆ ಉಂಟಾಗುತ್ತಿದೆ ಅಂತಹ ಶಕ್ತಿಗಳಿಂದ ದೂರವಿರಬೇಕು, ದೇಶದ ಸಂವಿಧಾನ ಸರ್ವರೂ ಸಮಾನರು ಮೇಲು ಕೀಳು ಎಂಬ ತಾರತಮ್ಯ ಮಾಡಬಾರದು ಎಂದು ಸಮಾನತೆಯನ್ನು ಪ್ರತಿಪಾಧಿಸಿದೆ ಆದರೆ ಕೆಲವು ಜಾತಿವಾದಿಗಳು ಹಿಂದೂ ಮುಸ್ಲಿಂರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ನಾವೆಲ್ಲ ಒಂದೆ ಎನ್ನುವವರೇ ನಮ್ಮ ಮೇಲೆ ದೌರ್ಜನ್ಯವೆಸಗುವ ಹುನ್ನಾರಗಳನ್ನು ಹಿಂಬಾಗಲಿನಿಂದ ನಡೆಸುತ್ತಾರೆ, ಅಂತಹವರ ಬಗ್ಗೆ ಎಚ್ಚರವಿರಲಿ, ನಮ್ಮ ಆಯ್ಕೆ ಬಹುಸಂಸ್ಕೃತಿ ಮತ್ತು ಬಹುತ್ವದ ಆಶಯವನ್ನು ಗೌರವಿಸುವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕಿದೆ, ಕೋಮುದ್ವೇಷ ಹರಡುವ, ಕಾಂಗ್ರೇಸ್ ಸರ್ಕಾರ ಬಡಜನ ಪರವಾದ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯವೆಂದು ಹೀಯಾಳಿಸುವ ಮತ್ತು ಬಡವರ ಬಗ್ಗೆ ಅಸಡ್ಡೆ ತೋರುವ, ಆಥರ್ಿಕ ಗುಲಾಮಗಿರಿ ಎನ್ನುವ ಸಂವಿಧಾನ ವಿರೋಧಿ ಬಿಜೆಪಿಯನ್ನು ದೂರವಿರಿಸುವಂತೆ ನೋಡಿಕೊಳ್ಳಬೇಕಿದೆ.
ಪ್ರಜ್ಞಾವಂತ ಮತದಾರರಾಗಿ ಸಂವಿಧಾನ ಉಳಿವಿಗಾಗಿ ಮತದಾನ ಮಾಡಬೇಕು ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಮತ್ತು ಇತ್ತೀಚೆಗೆ ಎಐಸಿಸಿ 18ನೇ ಲೋಕಸಭಾ ಚುನಾವಣೆಗೆ ಜನರಿಂದ ಸಂಗ್ರಹಣೆ ಮಾಡಿದ ಅಭಿಪ್ರಾಯದ ಆದಾರದಲ್ಲಿ ಕಾಂಗ್ರೇಸ್ ಪಕ್ಷ ನನ್ನೆ ನ್ಯಾಯ ಪತ್ರವನ್ನು ಬಿಡುಗಡೆ ಮಾಡಿ 5 ನ್ಯಾಯಗಳಲ್ಲಿ 25 ಭರವಸೆಗಳನ್ನು ನೀಡಿದ್ದು ಇದರಲ್ಲಿ ಸ್ಲಂ ಜನಾಂದೋಲನ ನೀಡಿದ ಪ್ರಮುಖ ಹತ್ತು ಒತ್ತಾಯಗಳಲ್ಲಿ 5 ಒತ್ತಾಯಗಳನ್ನು ಅಳವಡಿಸಿಕೊಂಡು ಬಡತನ ನಿರ್ಮೂಲನೆಗೆ ಮಹಿಳೆಯರಿಗೆ 1 ಲಕ್ಷ ಆರೋಗ್ಯ ಹಕ್ಕು ಖಾತ್ರಿಗಾಗಿ 25 ಲಕ್ಷ ವಿಮೆ, ನಗರ ಉದ್ಯೋಗ ಖಾತ್ರಿ, ಜಾತಿ ಜನಗಣತಿ, ಮಹಿಳಾ ಮೀಸಲಾತಿ ಜಾರಿ, ಕಾರ್ಮಿಕರ ಕಾಯಿದೆಗಳ ರದ್ದು ಸೇರಿದ್ದಂತೆ ಎಸ್.ಸಿ/ಎಸ್.ಟಿ ಹಾಗೂ ಜಾತಿಗಳ ಜನಸಂಖ್ಯೆಗನುಗುಣವಾಗಿ ಬಜೆಟ್ನಲ್ಲಿ ಮೀಸಲಾತಿ ಮತ್ತು ಅಸಂಘಟಿತ ವಲಯಗಳಿಗೆ ಸಾಮಾಜಿಕ ಭದ್ರತೆ ನೀಡುವ ಪಾಲುದಾರಿಕೆಯ ನ್ಯಾಯ ಸಂವಿಧಾನ ರಕ್ಷಣೆಯ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದ್ದು ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ -ನನ್ನ ಮತ ನನ್ನ ಭವಿಷ್ಯಕ್ಕಾಗಿ ಎಂದು ಮತ ಚಲಾಯಿಸಬೇಕಿದೆ ಎಂದರು.

ಇಫ್ತಿಯಾರ್ ಕೂಟ ನೇತೃತ್ವ ವಹಿಸಿದ ಜಾಬೀರ್ ಖಾನ್ ಮಾತನಾಡಿ ತುಮಕೂರು ನಗರದಲ್ಲಿ ಸ್ಲಂ ಸಂಘಟನೆ ಎಲ್ಲಾ ಜಾತಿ ಮತ್ತು ಧರ್ಮದ ಜನರಿಗೆ ಸಂಘಟಿತ ವೇಧಿಕೆ ಕಲ್ಪಿಸಿಕೊಟ್ಟಿದೆ, ಇಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಮನುಷ್ಯತ್ವ ಮತ್ತು ಪ್ರೀತಿ, ಸೌಹಾರ್ಧತೆಯನ್ನು ಪ್ರತಿಪಾದಿಸುತ್ತದೆ, ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ಕುರಾನ್, ಬೈಬಲ್ಗಳೆಲ್ಲವು ಸಾರುವುದು ಸೌಹಾರ್ಧತೆಯ ಆಶಯಗಳನ್ನು ಮಾತ್ರ ಆದರೆ ಕೆಲವರು ನಮ್ಮ ನಮ್ಮಲ್ಲೆ ಜಗಳ ತಂದಿಡುವ ಪ್ರಯತ್ನದಲ್ಲಿರುತ್ತಾರೆ, ಅಂತಹ ಕೀಳು ಮನಸ್ಥಿತಿಯನ್ನು ಬಿಡಬೇಕು, ಶತಮಾನಗಳಿಂದ ನಮ್ಮ ಪೂರ್ವಜರು ನಮ್ಮಗೆ ಕಲಿಸಿಕೊಟ್ಟಿರುವುದು ಅಣ್ಣ ತಮ್ಮಂದಿರಂತೆ ಬದುಕಬೆಕೆನ್ನುವುದು ಮಾತ್ರ ಹಾಗೇ ಬಾಳೋಣಾ ಎಂದು ರಂಜಾನ್ ಕೂಟವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿ ನಾವೆಲ್ಲ ಸಮಾನರಾಗಿ ಬದುಕೊಣ ಎಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್ .ಶಾರದಮ್ಮ,ಗಂಗ, ಕೃಷ್ಣಮೂರ್ತಿ ಧನಂಜಯ್, ಮಾರಿ, ಲಕ್ಷ್ಮೀಪತಿ, ಪೂರ್ಣಿಮಾ, ಅನುಪಮಾ,ಗಣೇಶ್,ಗೋವಿಂದರಾಜ್, ಅಶ್ವತ್, ಎಳ್ಳರಬಂಡೆಯ ರೆಹಮತ್ಸಾಬ್, ಸುಹೆಬುಲ್ಲ, ಮುಂತಾದವರು ಪಾಲ್ಗೊಂಡಿದ್ದರು.