ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಅಂಚಿನಲ್ಲಿನ ಯೆತ್ತಪ್ಪ ಸ್ವಾಮಿ ನೂರಾರು ದೇವರ ದನಗಳಿಗೆ ಉಚಿತವಾಗಿ ಒಂದು ಟ್ರಾಕ್ಟರ್ ಲೋಡ್ ರಾಗಿ ಹುಲ್ಲಿನ ಮೇವನ್ನು ಮೈಸೂರಿನ ಶ್ರೀ ಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್ ಹಾಗೂ ತುಮಕೂರಿನ ಶ್ರೀಮತಿ ಬಿ.ವಿ.ರಾಜೇಶ್ವರಿ ಮತ್ತು ಡಾ. ಬಿ.ಚಿಕ್ಕಪ್ಪಯ್ಯ ಐಎಫ್ಎಸ್ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಇಂದು ವಿತರಿಸಲಾಯಿತು.
ಮಡಕಸಿರಾ ತಾಲ್ಲೂಕಿನ ರೊಳ್ಳ ಮಂಡಳನ ಗಂತಕಲ್ ಗೊಲ್ಲರ ಹಟ್ಟಿಯಲ್ಲಿನ ಶ್ರೀ ಯತ್ತಪ್ಪ ಸ್ವಾಮಿಯ ಕೇಂದ್ರವಿದ್ದು, ಇಲ್ಲಿ 120 ಕ್ಕೂ ಹೆಚ್ಚು ಸ್ವಾಮಿಯ ದೇವರ ಎತ್ತುಗಳು, ಹಸುಗಳು ಹಾಗೂ ಪುಟ್ಟ ಪುಟ್ಟ ಕರುಗಳೊಂದಿಗೆ ಬೀಡುಬಿಟ್ಟಿವೆ. ಈ ಭಾಗದಲ್ಲಿ ಮಳೆಯ ಅಭಾವದಿಂದ ತೀವ್ರ ಬರಗಾಲ ಆವರಿಸಿರುವ ಕಾರಣ ಮೇವು ಕೊರತೆಯಾಗಿದೆ.
ಇಂದಿನ ಧಾರುಣ ಬೇಸಿಗೆಯಲ್ಲಿ ಬೆಂಕಿಯಿoದ ಗುಡ್ಡಗಳಲ್ಲಿನ ಹುಲ್ಲು ಸುಟ್ಟು ಹೋಗಿರುವ ಕಾರಣ ಗುಡ್ಡದಲ್ಲಿನ ಹುಲ್ಲು ಗಾವಲುಗಳಲ್ಲಿ ಹಲ್ಲು ನಶಿಸಿದೆ ಮತ್ತು ನೀರಿನ ಸೌಲತ್ತುಗಳು ಮಾಯವಾಗಿದೆ. ಪ್ರತಿ ದಿನ ಆ 120 ರಾಸುಗಳು ಹತ್ತಿರದ ಗುಡ್ಡಗಳಿಗೆ ತೆರಳಿ ಹುಲ್ಲುಗಾವಲುಗಳಲ್ಲಿ ಮೇವು ತಿಂದು ಹಳ್ಳ- ಕೊಳ್ಳಗಳಲ್ಲಿ ನೀರು ಕುಡಿದು ವಾಪಸ್ಸು ಸಾಯಂಕಾಲ ದನದ ರೊಪ್ಪದಲ್ಲಿ (ಆವಿನ ಗೂಡುಗಳಲ್ಲಿ) ಬಂದು ಸೇರುತ್ತಿದ್ದವು.
ಈ ಹಸುಗಳ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಪಾವಗಡದ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಅವರ ಸಂಸ್ಥೆಯಿoದ ಒಂದು ಟ್ರ್ಯಾಕ್ಟರ್ ಲೋಡ್ ಹುಲ್ಲನ್ನು ಒದಗಿಸುತ್ತಿದ್ದಾರೆ.
ಆ ಮೇವು ಯತ್ತಪ್ಪ ದೇವರ ದನಗಳಿಗೆ ಸಾಕಾಗುವುದಿಲ್ಲ ಎಂದು ಯತ್ತಪ್ಪ ಸ್ವಾಮಿ ದೇವರ ಪೂಜಾರಿಗಳಾದ ಮಾರಣ್ಣ ಅವರು ಸಮಿತಿಯ ಅಧ್ಯಕ್ಷರಾದ ಡಾ. ಬಿ.ಚಿಕ್ಕಪ್ಪಯ್ಯ ಅವರನ್ನು ದೂರವಾಣಿ ಮೂಲಕ ಮೇವು ಸರಬರಾಜು ಮಾಡಲು ವಿನಂತಿಸಿಕೊoಡಿದ್ದಾರೆ.
ನಂತರ ಎರಡು ಸಂಸ್ಥೆಗಳ ಸದಸ್ಯರು ಒಂದು ಟ್ರ್ಯಾಕ್ಟರ್ ಲೋಡ್ ರಾಗಿ ಹುಲ್ಲನ್ನು ಕೊಂಡು, ಟ್ರ್ಯಾಕ್ಟರ್ ಮೂಲಕ ಗ್ರಂತಕಲ್ ಗೊಲ್ಲರಹಟ್ಟಿ ಯೆತ್ತಪ್ಪ ಸ್ವಾಮಿ ದೇವರ ರಾಸುಗಳಿಗೆ ಸರಬರಾಜು ಮಾಡಲಾಗಿದೆ ಎಂದು ಡಾ. ಬಿ ಚಿಕ್ಕಪ್ಪಯ್ಯ ಐಎಫ್ಎಸ್ ಅವರು ತಿಳಿಸಿದ್ದಾರೆ.
ಟ್ರಸ್ಟ್, ಸಮಿತಿಯಿಂದ ದೇವರ ದನಗಳಿಗೆ ಉಚಿತವಾಗಿ ಮೇವು ವಿತರಣೆ

Leave a comment
Leave a comment