ತುಮಕೂರು: ಗ್ರಾಮ ಗ್ರಾಮಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸಲು ದಲಿತ ಸಂಘಟನೆಗಳು ಮುಂದಾಗಬೇಕಿದೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ತಿಳಿಸಿದರು.
ತುಮಕೂರು ತಾಲ್ಲೂಕು ಅದಲಾಪುರ ಗ್ರಾಮದಲ್ಲಿ ನಡೆದ ೧೩೨ನೇ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಜ್ಞಾನಿಯಾದರೂ ಭಾರತದಲ್ಲಿ ಅವರ ಪ್ರತಿಭೆ ತಕ್ಕ ಮನ್ನಣೆ ಸಿಕ್ಕಿಲ್ಲ, ಭಾರತದಲ್ಲಿಯೇ ಹುಟ್ಟಿದ ಬೌದ್ಧ ಧರ್ಮ ಭಾರತ ಹೊರತುಪಡಿಸಿ ಬೇರೆಡೆ ಪ್ರಸಿದ್ಧವಾಗಿರುವಂತೆ ಅಂಬೇಡ್ಕರ್ ವಿಚಾರಧಾರೆಗಳು ಸರ್ವ ವ್ಯಾಪಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಗೋವಿಂದರಾಜು, ಶ್ರೀನಿವಾಸ್, ರಂಗಸ್ವಾಮಯ್ಯ, ರಮೇಶ್, ಎ.ಎಸ್.ಶಂಕರ್, ರಾಜೇಶ್, ನಟರಾಜು, ಬಾಬು, ರಂಗಸ್ವಾಮಯ್ಯ,ಹೆಚ್. ಶಿವಕುಮಾರ್, ಸುಧಾಕರ್, ಪ್ರಜ್ವಲ್, ಲಕ್ಷö್ಮಮ್ಮ, ಕಾಂತರಾಜು, ದರ್ಶನ್, ನರಸಿಂಹಮೂರ್ತಿ, ದಿನೇಶ್, ಹನುಮಂತರಾಯ, ನರಸಿಂಹಮೂರ್ತಿ, ಚಿಕ್ಕರಂಗಮ್ಮ, ಮಧು ಸೇರಿದಂತೆ ಇತರರಿದ್ದರು.