ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.87ರಷ್ಟು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ತುಮಕೂರು ನಗರದ ಪತ್ರಿಕಾ ವಿತರಕ ನಾಗರಾಜ ಅವರ ಮಗಳು ಜಾಹ್ನವಿ ಅವರನ್ನು ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ನಿರ್ದೇಶಕರು ಹಾಗೂ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಜಾಹ್ನವಿ ಅವರು ನಗರದ ಸಿದ್ಧಗಂಗಾ ಸಿಲ್ವರ್ ಜುಬ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 545 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ಜಾಹ್ನವಿ ಅವರ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ಅಧ್ಯಕ್ಷ ಚೆಲುವರಾಜ ರಘು, ಕಾರ್ಯದರ್ಶಿ ವಾಸು, ನಿರ್ದೇಶಕ ಮಂಡಳಿ ಸದಸ್ಯರಾದ ಆನಂದ್ ಜೈನ್, ಎಚ್.ಪಿ. ಯೋಗೇಶ್, ಕೃಷ್ಣಪ್ಪ, ಆರ್.ಪಿ. ನಾಗರಾಜ್, ಲೋಕೇಶ್ ಭದ್ರಾಚರ, ಲೋಕೇಶ್ ಎಟಿಎಂ, ಭೂತೇಶ್ ಬಿ.ಆರ್., ಹೇಮಂತ್ ಎಚ್.ಪಿ., ಸೊಗಡು ಪತ್ರಿಕೆಯ ಪುಟ್ಟರಾಜು, ಏಕೇಶ್ ಪತ್ರಿಕೆಯ ಕುಮಾರ್, ಪತ್ರಿಕಾ ವಿತರಕರಾದ ನಾಗರಾಜ್ ಹಾಗೂ ಮೋಹನ್, ಮತ್ತಿತರರು ಹಾಜರಿದ್ದರು.
ಪತ್ರಿಕಾ ವಿತರಕನ ಮಗಳು ಜಾಹ್ನವಿಯ ಸಾಧನೆ ಸಂಘದಿoದ ಅಭಿನಂದನೆ

Leave a comment
Leave a comment