ಮೈಲಿಗಲ್ಲನ್ನು ಸ್ಥಾಪಿಸಿರುವುದನ್ನು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ರ್ಯಾಂಕ್ ಪಡೆದ ೫೦ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪಿ ಹೆಚ್ ಡಿ ಪದವಿ ಪಡೆದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಕೋವಿಡ್ನಿಂದ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಇಂದೂ ಸಹ ಈ ಕ್ಷೇತ್ರ ತೆವಳುತ್ತಾ ಸಾಗುತ್ತಿದೆ. ಪರಿಶ್ರಮ, ಬದ್ಧತೆ, ಮತ್ತು ಶಿಸ್ತಿನಿಂದ ಇಂದು ನೀವು ಪದವಿ ಪಡೆದಿದ್ದೀರಿ, ಮುಂದೆ ಇದು ಸಮಾಜದದಲ್ಲಿ ಮೇಲೆ ಪ್ರತಿಫಲಗೊಳ್ಳಲಿದೆ ಎಂದರು.

ಯುವ ವೃತ್ತಿಪರರು ದೇಶಕ್ಕೆ ತಮ್ಮ ಶಿಕ್ಷಣದಿಂದ ಕೊಡುಗೆ ನೀಡುತ್ತಿದ್ದಾರೆ. ಶಿಕ್ಷಣವು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುತ್ತದೆ. ಶಿಕ್ಷಣ ಮಾನವನ ಹಕ್ಕು ಕೂಡ. ಸಾಮರಸ್ಯದಿಂದ ಕೂಡಿದ ಶಿಕ್ಷಣವು ಸಂಪನ್ಮೂಲಗಳನ್ನು ವಿಸ್ತರಿಸುವ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ೨೫ ವರ್ಷದೊಳಗಿನ ಯುವಜನತೆ ಶೇ. ೫೦ರಷ್ಟು ಇದ್ದು, ಯುವಭಾರತ ಎನಿಸಿದೆ. ಹೆಚ್ಚು ವಿದ್ಯಾವಂತ ಯುವಕರು ಭಾರತದಂತಹ ದೇಶಕ್ಕೆ ಅವಶ್ಯಕವಿದ್ದು, ಯುವಕರ ಕಲ್ಪನೆಗಳೇ ಸಮಾಜದ ಅಭಿವೃದ್ಧಿಗೆ ಬುನಾದಿ ಎಂದರು.

ಯುವಜನತೆಗೆ ಹಲವಾರು ಅವಕಾಶಗಳು ಲಭ್ಯವಿದ್ದು, ಪ್ರತಿಭಾವಂತರ ಅವಶ್ಯಕತೆಯೂ ಇದೆ. ಶಿಕ್ಷಣ ಸಂಸ್ಥೆ ಮತ್ತು ಪೋಷಕರಿಂದ ಕಲಿತ ಮೌಲ್ಯಗಳು ಸಮಾಜಕ್ಕೆ ಸೇವೆ ನೀಡುವಲ್ಲಿ ನೆರವಾಗುತ್ತವೆ. ವೈವಿಧ್ಯಮಯ ಜಾತಿ, ಧರ್ಮ, ವೇಷಭೂಷಣಗಳು ಆಚಾರ ಮತ್ತು ಪದ್ಧತಿಗಳನ್ನು ಹೊಂದಿರುವ ನಮ್ಮ ಸಮಾಜದಲ್ಲಿ ಹೊಸ ಹೊಸ ವಿಚಾರಗಳನ್ನು ಸೃಜಿಸಿ, ಸಮಸ್ಯೆಗಳನ್ನು ಪರಿಹರಿಸಲು ಯುವಜನತೆ ಪ್ರಯತ್ನಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.