ಅಫಜಲಪೂರ : ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಂಡೂರು ಗ್ರಾಮದ ಕೋಲಿ ಸಮಾಜದ ಯುವತಿ ಭಾಗ್ಯಶ್ರೀ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ, ಹಾಗೂ ರಾಜ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಅಫಜಲಪೂರದಲ್ಲಿ ಮಾಧ್ಯಮ ದವರನ್ನುದ್ದೇಶಿಸಿ ಮಾತನಾಡಿದ ಅವರು ಬಸವಕಲ್ಯಾಣ ತಾಲೂಕಿನ ಗುಂಡೂರು ಗ್ರಾಮದ ಟೋಕ್ರೆ ಕೋಲಿ ಸಮಾಜದ ಸಹೋದರಿ ಭಾಗ್ಯಶ್ರೀ (18) ಯನ್ನು ಕೆಲವು ದುಷ್ಕರ್ಮಿಗಳು ಅಪಹರಿಸಿ ಅಲ್ಲಿನ ಸಮೀಪದ ಇಂಜಿನಿಯರಿಂಗ್ ಕಾಲೇಜಿನ ಹತ್ತಿರ ಗುಣತಿರ್ಥ ವಾಡಿಯಲ್ಲಿ ಅತ್ಯಾಚಾರ ವೇಸಗಿ ಭೀಕರವಾಗಿ ಕೊಲೆ ಮಾಡಿದ್ದಾರೆ, ಈ ಘಟನೆ ಇಡಿ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ ಎಂದರು. ರಾಜ್ಯದಲ್ಲಿ ಪದೇ ಪದೇ ನಮ್ಮ ಸಮಾಜದ ಮೇಲೆ ಹಾಗೂ ಇತರ ಸಮುದಾಯದ ಮಹಿಳೆಯರ ಮೇಲೆ ಕೊಲೆ ಸುಲಿಗೆ, ಅತ್ಯಾಚಾರ ಗಳು ನಿರಂತರ ವಾಗಿ
ನಡೆಯುತ್ತಿದ್ದು ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಸರ್ಕಾರಗಳು ಪದೇ ಪದೇ ಇಂತಹ ಘಟನೆಗಳು ನಡೆದರು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸದೆ ನಿರ್ಲಕ್ಷ ತೋರುತ್ತಿರುವದು ಸರಿಯಲ್ಲ, ರಾಜ್ಯದಲ್ಲಿ ಈ ಹಿಂದೆ ಅಂಜಲಿ ಮತ್ತು ನೇಹಾ ಮೇಲೆ ನಡೆದ ಅಮಾನವಿಯ ಘಟನೆಗಳಾದ ಮೇಲೆ ಸರ್ಕಾರ ಎಚ್ಚೆತ್ತು ಕೊಳ್ಳಬೇಕಿತ್ತು ಆದ್ರೆ ಸರ್ಕಾರ ಮಾತ್ರ ನಿದೆಯಲ್ಲಿದ್ದು ಜನರೇ ಎಚ್ಚರಿಸುವಂತೆ ಆಗಿದೆ,ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತಿದ್ದರು ಸರ್ಕಾರ ಮಾತ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಡಿದಾಡುತ್ತಿದೆ, ಆರೋಪಿಗಳು ಯಾರೇ ಆಗಿರಲಿ ಓಲೈಕೆ ಮಾಡದೇ ಶಿಸ್ತು ಕ್ರಮ ಜರುಗಿಸಬೇಕು,ಕೂಡಲೇ ಸರಕಾರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ದೌರ್ಜನ್ಯವೆಸಗಿದ ಕಾಮುಕರನ್ನು ಬಂಧಿಸಿ ಮತ್ತೆ ಇಂತಹ ಘಟನೆಗಳು ಮಾರುಕಳಿಸದ ಹಾಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು, ಅಷ್ಟೇ ಅಲ್ಲದೆ ಸಂತ್ರಸ್ತ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದರು,
