ಹಲವಾರು ಧೀಮಂತ ನಾಯಕರ ಹೋರಾಟದ ಫಲವಾಗಿ ಪರಿಶಿಷ್ಟ ಪಂಗಡಕ್ಕೆ ಸಿಕ್ಕಿರುವ ಮೀಸಲಾತಿಯನ್ನು ನಕಲಿ ಜಾತಿ ಸರ್ಟಿಪಿಕೇಟ್ಗಳ ಮೂಲಕ ಕಸಿಯುವ ಪ್ರಯತ್ನ ನಡೆಯುತ್ತಿದ್ದು,ಇದರ ವಿರುದ್ದ ನಾಯಕ ಸಮುದಾಯದ ಎಲ್ಲಾ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು, ಕಾನೂನು ರೂಪಿಸುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಮಾತನಾಡುತಿದ್ದ ಅವರು,ಕೇಂದ್ರದಲ್ಲಿ ಚಂದ್ರಶೇಖರ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ನಮ್ಮ ಸಮಾಜದ ಮಂತ್ರಿಗಳಾಗಿದ್ದ ಸಿ.ವೀರಣ್ಣ,ಉಗ್ರಪ್ಪ, ಹೆಚ್.ಡಿ.ದೇವೇಗೌಡರು ಸೇರಿದಂತೆ ಹಲವರು ಒತ್ತಡ ಹಾಕಿ ವಿವಿಧ ಹೆಸರುಗಳಿಂದ ಕೆರೆಯತ್ತಿದ್ದ ನಾಯಕ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರುವಂತೆ ಮಾಡಿದರು.ಆದರೆ ಇಂದು ನಕಲಿ ಜಾತಿ ಪ್ರಮಾಣ ಪತ್ರಗಳ ಮೂಲಕ ನಮ್ಮ ಉದ್ಯೋಗ,ಶಿಕ್ಷಣದ ಸವಲತ್ತುಗಳನ್ನು ಕಸಿಯುವ ಪ್ರಯತ್ನ ನಡೆದಿದೆ.ಇದರ ವಿರುದ್ದ ಜು.೦೩ರ ಅಧಿವೇಶನದ ವೇಳೆ ನಾವೆಲ್ಲರೂ ಒಗ್ಗೂಡಬೇಕಾಗಿದೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಇದನ್ನು ತಡೆಯುವ ಪ್ರಯತ್ನ ಮಾಡಬೇಕಿದೆ ಎಂದರು.
ಅಹಿAದ ಸಮುದಾಯಗಳು ಒಗ್ಗೂಡಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯಗಳಿಸಲು ಸಾಧ್ಯ.ಅಹಿಂದ ವರ್ಗಕ್ಕೆ ಸೇರಿದ ಕೆಲವರು ವಯುಕ್ತಿಕ ವರ್ಚಸ್ಸನಿಂದ ಗೆಲ್ಲಬಹುದು.ಆದರೆ ಸಮುದಾಯದ ಗೆಲ್ಲಬೇಕಾದರೆ ನಾವೆಲ್ಲರೂ ಒಗ್ಗೂಡ ಬೇಕಾಗಿದೆ.ಕಷ್ಟದಲ್ಲಿ ಬೆಳೆದವರಿಗೆ ಸಾಧಿಸುವ ಚಲವಿರುತ್ತದೆ.ಅದಕ್ಕೆ ಉದಾಹರಣೆ ಜಗಳೂರು ಶಾಸಕ ದೇವೇಂದ್ರಪ್ಪ. ಶಾಲೆಯ ಜವಾನನಾಗಿದ್ದವರು ತಮ್ಮ ಒಳ್ಳೆಯ ಕೆಲಸಗಳ ಮೂಲಕ ಇಂದು ಶಾಸಕರಾಗಿದ್ದಾರೆ.ಅಧಿಕಾರ ಎಂಬುದು ವಿಷವಿದ್ದಂತೆ.ಅಧಿಕಾರ ಸದ್ಬಳಕೆ ಮಾಡಿದಾಗ ಮಾತ್ರ ಜನರ ಪ್ರೀತಿ,ಯಶಸ್ಸು ದೊರೆಯುತ್ತದೆ.ಜನರಿಗೆ ಒಳಿತಾಗಿ ಬಳಸಬೇಕೇ ಹೊರತು, ದುರ್ಬಳಕೆ ಮಾಡಿಕೊಳ್ಳಬಾರದು.ಎಲ್ಲಾ ಸಮುದಾಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡೋಣ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಇಂದು ನಾವೆಲ್ಲರೂ ರಾಜಕೀಯವಾಗಿ ಅಧಿಕಾರ ಪಡೆದಿದ್ದರೆ ಅದಕ್ಕೆ ಅಂಬೇಡ್ಕರ್ ಅವರು ನೀಡಿದ ಮೀಸಲಾತಿಯ ಕೊಡುಗೆ ಕಾರಣ.ಹಾಗಾಗಿ ನಾವ್ಯಾರು ಅವರನ್ನು ಮರೆಯುವಂತಿಲ್ಲ. ಇಂದು ಮಾತನಾಡಿರುವ ಎಲ್ಲಾ ಶಾಸಕರು, ಸಚಿವರು ಸಹ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.ಮುAದೆಯೂ ನೆನಪು ಮಾಡಿಕೊಳ್ಳಬೇಕಿದೆ.ಇಂದು ಸಿದ್ದರಾಮ ಯ್ಯ ಸರಕಾರದ ನಮ್ಮ ಸಮುದಾಯದ ಮೂವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ.ಬಡವರ ಪರ ಇರುವ ಅವರನ್ನು ನಮ್ಮ ನಾಯಕರು ಎಂದು ಒಪ್ಪಿಕೊಂಡಿದ್ದೇವೆ.ಅವರ ನಂತರದಲ್ಲಿ ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ದೊರೆಯಬೇಕು ಎಂಬುದು ನಮ್ಮ ಆಶಯ ಎಂದು ಕೆ.ಎನ್.ರಾಜಣ್ಣ ನುಡಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ,ಸಮುದಾಯದ ಆಶಯದಂತೆ ಈ ಹಿಂದಿನ ಸರಕಾರ ಆದೇಶ ಮಾಡಿದ್ದ ಮೀಸಲಾತಿ ಹೆಚ್ಚಳವನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲಿದ್ದೇವೆ.ಅಲ್ಲದೆ ಈ ಹಿಂದಿನ ಸರಕಾರದಲ್ಲಿ ಜಾರಿಯಲ್ಲಿದ್ದ ವಿದ್ಯಾರ್ಥಿವೇತನ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳ ಬಿಜೆಪಿ ಸರಕಾರದಲ್ಲಿ ಸ್ಥಗಿತಗೊಂಡಿದ್ದು, ಅವುಗಳ ಪುನರ್ ಜಾರಿಗೆ ಒತ್ತಾಯಿಸಲಾಗುವುದು.ಅಂಬೇಡ್ಕರ್ ಹೇಳಿದಂತೆ ತಳ ಸಮುದಾಯಗಳು ಬೇಡುವ ಕೈಗಳಾಗದ ಕೊಡುವ ಕೈಗಳಾಗಬೇಕು ಎಂಬ ನಿಟ್ಟಿನಲ್ಲಿ ಉದ್ಯಮ ಕ್ಷೇತ್ರದಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯ ಸರಕಾರದ ಸವಲತ್ತುಗಳನ್ನು ಉಪಯೋಗ ಪಡೆಯಲು ಸಲಹೆ ನೀಡಿದರು.
ಮೀಸಲಾತಿ ಹೆಚ್ಚಳಕ್ಕಾಗಿ ನಮ್ಮ ಸಮಾಜದ ಸ್ವಾಮೀಜಿಗಳು ಸತ್ಯಾಗ್ರಹ ಕೈಗೊಂಡಾಗ ಕೆಲವರು ರಕ್ತದಲ್ಲಿ ಬರೆದುಕೊಡುವ ನಾಟಕ ಮಾಡಿದರು.ಅವರ ನಾಟಕ ಏನೆಂಬುದು ಜನತೆಗೆ ಗೊತ್ತಾಗಿ, ಸರಿಯಾದ ಪಾಠ ಕಲಿಸಿದ್ದಾರೆ.ಸಮುದಾಯದ ಹೆಸರಿನಲ್ಲಿ ತಮ್ಮ ಬೆಳೆ ಬೆಯಿಸಿಕೊಳ್ಳಲು ಹೊರಟರೆ, ಜನ ಬೆಂಬಲಿಸುವುದಿಲ್ಲ ಎಂಬುದು ಸ್ಪಷವಾಗಿದೆ.ಎಲ್ಲಾ ಸಚಿವರು ಸೇರಿದ ಸಮಾಜದ ಒಳಿತಿಗಾಗಿ ದುಡಿಯಲಿದ್ದೇವೆ ಎಂದು ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಹರಿಹರದ ರಾಜನಹಳ್ಳಿ ಶ್ರೀವಾಲ್ಮೀಕಿ ಪೀಠದ ಶ್ರೀಶ್ರೀಪ್ರಸನ್ನಾನಂದ ಸ್ವಾಮೀಜಿ,ಶಿರಾದ ಶಿಡ್ಲಕೋಣ ಶಾಖಾ ಮಠದ ಶ್ರೀಶ್ರೀಸಂಜಯಕುಮಾರಸ್ವಾಮೀಜಿ ಅವರುಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ ವಹಿಸಿದ್ದರು.ಶಾಸಕರಾದ ಕೆರಮ್ಮ ಜಿ.ನಾಯಕ,ದೇವೇಂದ್ರಪ್ಪ, ಡಾ.ಶ್ರೀನಿವಾಸ್ ಹಾಗೂ ಶ್ರೀಮತಿ ಶಾಂತಲಾ ರಾಜಣ್ಣ ಅವರು ಸಮಾರಂಭ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಸಮುದಾಯದ ಮುಖಂಡರಾದ ಪುರುಷೋತ್ತಮ್,ವಿ.ಎನ್.ಮೂರ್ತಿ, ಲಕ್ಷಿö್ಮನಾರಾಯಣ್,ಸಿಂಗದಹಳ್ಳಿ ರಾಜಕುಮಾರ್,ಪಿ.ಬಿ.ಬಸವರಾಜು,ಭಕ್ತರಾಮೇಗೌಡ,ಸಾ.ಲಿಂಗಯ್ಯ, ಓಬಳರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೀಸಲಾತಿಯನ್ನು ನಕಲಿ ಜಾತಿ ಸರ್ಟಿಪಿಕೇಟ್ಗಳ ಮೂಲಕ ಕಸಿಯುವ ಪ್ರಯತ್ನ

Leave a comment
Leave a comment