ಪರಿಸರ ಸಂರಕ್ಷಣಾ ಸಪ್ತಾಹ ಅಂಗವಾಗಿ ಜಿ.ಟಿ.ಟಿ.ಸಿ ಹಿರೇಹಳ್ಳಿ ಕಾಲೇಜಿನಿಂದ ಅರಿವು ಜಾಥ
ಪರಿಸರ ಮಾಸದ ಅಂಗವಾಗಿ ಜಿ.ಟಿ.ಟಿ.ಸಿ ಹಿರೇಹಳ್ಳಿ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಪರಿಸರದ ಬಗ್ಗೆ ಹಾಗೂ ಪ್ಲಾಸ್ಟಿಕ್ನಿಂದ ಪ್ರಕೃತಿಗೆ ಆಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಸುಮಾರು ೨ ಕಿಲೋಮೀಟರುನಷ್ಟು ಕಾಲ್ನಡಿಗೆ ಜಾಥ, ಭಿತ್ತಿ ಪತ್ರಗಳ ಪ್ರದರ್ಶನ ಹಾಗೂ ಘೋಷಣೆಗಳನ್ನು ಕೂಗುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಶ್ವಿನ್ ಕುಮಾರ್ ಸೋಮಣ್ಣನವರ್, ಟೊಯೋಟಾ ಕಿರ್ಲೊಸ್ಕರ್ ಮೋರ್ಸ್ನ ಸುರೇಶ, ಊಔಆ ಗಿರಿಧರ್, ವಿದ್ಯಾರ್ಥಿಗಳು ಹಾಗೂ ಹಿರೇಹಳ್ಳಿ ಗ್ರಾಮ ಪಂಚಾಯತ್ನ ಮೋಹನ್, ತಿಮ್ಮೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಲತಾ ಅವರು ಭಾಗವಹಿಸಿದ್ದರು.