ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ರವರ 134ನೇ ಜನ್ಮದಿನಾಚರಣೆಯನ್ನು ಅಂಬೇಡ್ಕರ್ ಅವರ ಆಶಯದಂತೆ ಆಚರಿಸಲಾಯಿತು.
ಡಾ|| ಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಇಂದು ತಳ ಸಮುದಾಯದ ಪ್ರತಿಯೊಬ್ಬರು ಸುಶಿಕ್ಷಿತರಾಗಿ ಬದುಕುತ್ತಿದ್ದೇವೆಂದರೆ ಅದಕ್ಕೆ ಮೂಲ ಕಾರಣ ಬಾಬಾ ಸಾಹೇಬರು, ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದು ಕೋಟ್ಯಂತರ ಜನರಿಗೆ ಅನುಕೂಲಕರವಾಗುತ್ತಿದೆ ಎಂದರೇ ತಪ್ಪಾಗಲಾರದು ಅದಕ್ಕಾಗಿಯೇ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ಮದರ್ ಆಫ್ ನೇಷನ್ ಎಂದು ಕರೆಯಲಾಗುತ್ತಿದೆ, ಅವರಿಗೆ ಜನರು ನೀಡಿರುವ ಬಿರುದುಗಳನ್ನು ಹೇಳುತ್ತಿದ್ದರೆ ಮೈ ರೋಮಾಂಚನವಾಗುದoತು ಸತ್ಯ ಎಂದರು.