ಸಂವಿಧಾನ ಎಂದರೆ ಜನರು ಹೋರಾಟ ಮಾಡಿ ಗಳಿಸಿಕೊಂಡ ಹಕ್ಕುಗಳ ರಾಜಕೀಯ ದಾಖಲೆ
-ಎ.ನರಸಿಂಹಮೂರ್ತಿ
ಸAವಿಧಾನ ಪೀಠಿಕೆಯನ್ನು ಓದುವ ಮೂಲಕ ಚಾಲನೆ ನೀಡಿದರು ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ ಸಂವಿಧಾನ ಎಂದರೆ ಜನರು ಹೋರಾಟ ಮಾಡಿ ಗಳಿಸಿಕೊಂಡ ಹಕ್ಕುಗಳಿಗೆ ಕಾನೂನಿನ ಸ್ವರೂಪ ನೀಡುವ ಒಂದು ರಾಜಕೀಯ ದಾಖಲೆ ಹಕ್ಕುಗಳನ್ನು ಯಾವಾಗಲೂ ಪಡೆದುಕೊಳ್ಳಲಾಗಿದೆಯೇ ಹೊರತು ಎಂದಿಗೂ ನೀಡಿಲ್ಲ. ಬ್ರಿಟಿಷರಿಂದ ಸ್ವಾತಂತ್ರö್ಯವನ್ನು ಪಡೆದುಕೊಂಡಿದ್ದೇವೆ ವಿನಃ ಅವರು ನೀಡಿರುವುದಲ್ಲ ಎಂದು ಪ್ರಸಿದ್ದ ಮಾನವ ಹಕ್ಕುಗಳ ಹೋರಾಟಗಾರ ಕೆ.ಬಾಲಗೋಪಾಲ್ರವರ ಹೇಳಿಕೆ ಇಂದಿಗೂ ಪ್ರಸ್ತುತವಾಗಿದೆ. ಮನಷ್ಯರನ್ನು ಮನುಷ್ಯರಂತೆ ಕಾಣಬೇಕು ಪ್ರತಿಯೊಬ್ಬರಿಗೂ ಉತ್ತಮ ಆಹಾರ,ಉಡುಪು, ಸೂರು, ಉದ್ಯೋಗ ಸಿಗುವಂತೆ ಮಾಡಬೇಕು ಇವು ಮನುಷ್ಯವನ ನಿಜವಾದ ಮೂಲಭೂತ ಹಕ್ಕುಗಳಾಗಿವೆ. ಇದು ಸರ್ಕಾರಗಳ ಆಹಾರ ಮತ್ತು ಉದ್ಯೋಗ ಖಾತ್ರಿ ಕಾಯಿದೆಗಳಿಗೆ ಆಧಾರವಾಗಿದೆ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಸಂವಿಧಾನ ಘೋಷಿಸಿ ಘನತೆಯ ಬದುಕಿಗೆ ಬಡಜನರಿಗೆ ಖಾತ್ರಿ ಮಾಡಿದೆ. ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೊರೆಯುವಂತೆ ಮಾಡುವುದು ಸಂವಿಧಾನ ಪೀಠಿಕೆಯ ನ್ಯಾಯವಾಗಿದ್ದು ಎಲ್ಲಾ ಭಾರತೀಯರು ಸಹಜವಾಗಿ ಪರಸ್ಪರ ಒಟ್ಟಿಗೆ ಬದುಕುವುದು ಸಾಮಾಜಿಕ ಜೀವನಕ್ಕೆ ಒಗ್ಗಟ್ಟನ್ನು ತಂದುಕೊಡುವುದೇ ಬಂಧುತ್ವವಾಗಿದೆ, ಜಾತಿ ವರ್ಗ, ಲಿಂಗ, ಲೈಂಗಿಕತೆ, ಭಾಷೆ ಎಂಬ ಭೇದವಿಲ್ಲದೆ ಸಮಾಜ ಮತ್ತು ಪ್ರಭುತ್ವ ಎಲ್ಲರನ್ನು ಒಂದಾಗಿ ನೋಡುವುದೆ ಸಮಾನತೆಯಾಗಿದೆ.ಇದೆ ನಮ್ಮ ಸಂವಿಧಾನದ ಗುರಿ, ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದೇ ನಮ್ಮ ಮುಂದಿರುವ ಸವಾಲಾಗಿದೆ ಎಂದರು.
ಸಂವಿಧಾನ ಎಂದರೆ ಜನರು ಹೋರಾಟ ಮಾಡಿ ಗಳಿಸಿಕೊಂಡ ಹಕ್ಕುಗಳ ರಾಜಕೀಯ ದಾಖಲೆ

Leave a comment
Leave a comment