ಕಲಬುರಗಿ : ಜಮೀನು ಫೋಡಿ ಮಾಡಿಸಿಕೊಡಳು ಬರೋಬ್ಬರಿ 3.5 ಲಕ್ಷ ರೂಪಾಯಿ ಬೇಡಿಕೆ ಇಟ್ಟು 1.5 ಲಕ್ಷ ರೂಪಾಯಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಕಲಬುರಗಿ ಜಿಲ್ಲಾ ಭೂ ಧಾಖಲೆಗಳ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಲಬುರಗಿಯ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಡಿ ಎಸ್ ಪಿ ಗೀತಾ ಬೇನಾಳ್, ಡಿ ವಾಯ ಎಸ್ಪಿ ಮಂಜುನಾಥ್, ಇನ್ಸ್ಪೆಕ್ಟರ್ ರಾಜಶೇಖರ ತಂಡ ಬೆಳ್ಳಂಬೆಳೆಗೆ ಜಿಲ್ಲಾ ಭೂ ಧಾಖಲೆಗಳ ಉಪ ನಿರ್ದೇಶಕರ ಕಚೇರಿ ಮೇಲೆ ದಾಳಿ ಮಾಡಿತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದೆ ಲೋಕಾಯುಕ್ತ ತಂಡ ಬ್ರಹ್ಮ ಪೂರ ವ್ಯಾಪ್ತಿಯ ಸರ್ವೇ ನಂ.89/4 ಅಳತೆ 12.7 ಎಕರೆ ಜಮೀನಿನಲ್ಲಿ 25 ಗುಂಟೆ ಪೋಡಿ ಮಾಡಿಕೊಡಲು ಭೂ ಧಾಖಲೆಗಳ ಉಪ ನಿರ್ದೇಶಕ ಪ್ರವೀಣ ಜಾದವ ಹಾಗೂ ಸರ್ವೇಯರ ಶರಣಗೌಡ ಇಬ್ಬರು ಅಧಿಕಾರಿಗಳು ಬರೋಬ್ಬರಿ 3.5 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದು ಅದರಲ್ಲಿ 1.5 ಲಕ್ಷ ರೂಪಾಯಿ ಸ್ವೀಕರಿಸುವಾಗ ಬಲೆಗೆ ಕೆಡವಿದ್ದಾರೆ. ಕಲಬುರಗಿ ಲೋಕಾಯುಕ್ತ ತಂಡ ಇತ್ತೀಚಿಗೆ ಭ್ರಷ್ಟ ಅಧಿಕಾರಿಗಳಿಗೆ ಚಾಟಿ ಬಿಸಲು ತನ್ನ ದಾಳಿಗಳನ್ನು ಚುರುಕು ಗೊಳೋಸಿದೆ,ಈ ಇಬ್ಬರು ಅಧಿಕಾರಿಗಳನ್ನ ಬಂದನ ಇತರ ಅಧಿಕಾರಿಗಳಲ್ಲಿ ನಡುಕ ಶುರುವಾಗಿದ್ದು ಸತ್ಯವಾಗಿದೆ.