ತುಮಕೂರು ತಾಲೂಕು ಕೋರಾ ಹೋಬಳಿ,ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ,ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ಅನಧಿಕೃತವಾಗಿ ದೇವಸ್ಥಾನ ಕಟ್ಟಡ ಕಟ್ಟದಂತೆ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಇಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ನೇತೃತ್ವದಲ್ಲಿ ತುಮಕೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್,ತುಮಕೂರು ತಾಲೂಕು ಕೋರಾ ಹೋಬಳಿ,ಕೆಸ್ತೂರು ಗ್ರಾಮದ ದಲಿತ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ||ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ಜಾಗದಲ್ಲಿ ತಾತ್ಕಾಲಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಕಲ್ಪಿಸಲಾಗಿತ್ತು.ಆದರೆ ಇದನ್ನೇ ನೆಪ ಮಾಡಿಕೊಂಡ ಕೆಲವರು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ದೇವಾಲಯ ನಿರ್ಮಿಸಬೇಕೆಂಬ ಹುನ್ನಾರ ನಡೆಸುತ್ತಿದ್ದು,ಇವರಿಗೆ ಪೂರಕವೆಂಬoತೆ ಕೆಸ್ತೂರು ಗ್ರಾ.ಪಂ.ಪಿಡಿಓ ವರ್ತಿಸುತ್ತಿದ್ದಾರೆ,ಇದು ಖಂಡನೀಯ.ಸದರಿ ಜಾಗದಲ್ಲಿ ಅಂಬೇಡ್ಕರ್ ಭವನವಲ್ಲದೆ ಬೇರೆ ಯಾವುದೇ ನಿರ್ಮಾಣ ಕಾರ್ಯ ನಡೆದರೂ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಈಗಾಗಲೇ ದೇವರು,ಧರ್ಮದ ಹೆಸರಿನಲ್ಲಿ ದಲಿತರನ್ನು ಮೂಢನಂಬಿಕೆಗೆ ತಳ್ಳಿ,ಹಂತ ಹಂತವಾಗಿ ಅವರಿಗೆ ನೀಡುತ್ತಿದ್ದ ಎಲ್ಲಾ ಸವಲತ್ತುಗಳನ್ನು ಕಸಿಯಲಾಗುತ್ತಿದೆ.ಗ್ರಾಮದಲ್ಲಿ ಹಲವು ದೇವಾಲಯಗಳಿದ್ದರೂ ಸದರಿ ಜಾಗದಲ್ಲಿ ಗಣೇಶನ ದೇವಾಲಯ ನಿರ್ಮಿಸಿ, ಅಂಬೇಡ್ಕರ್ ಭವನ ನಿರ್ಮಿಸದಂತೆ ತಡೆಯುವ ಹುನ್ನಾರ ಇದಾಗಿದೆ.ಇದಕ್ಕೆ ಎಂದಿಗೂ ತಾ.ಪಂ. ಇಓ ಮತ್ತಿತರರ ಅಧಿಕಾರಿಗಳು ಅವಕಾಶ ನೀಡಬಾರದು.ಸದರಿ ಜಾಗದಲ್ಲಿ ಈ ಸ್ವತ್ತು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟು ಭೂಮಿ ಎಂದು ಬೋರ್ಡ್ ಹಾಕುವುದರ ಜೊತೆಗೆ, ಸರಕಾರದ ಅನುದಾನಗಳನ್ನು ಬಳಸಿ ಶೀಘ್ರವಾಗಿ ಭವನ ನಿರ್ಮಾಣಕ್ಕೆ ಮುಂದಾಗುವoತೆ ತಾ.ಪಂ. ಇಓ ಹರ್ಷಕುಮಾರ್ ಅವರಲ್ಲಿ ಮನವಿ ಮನವಿ ಮಾಡಿದರು.
ಅನಧಿಕೃತವಾಗಿ ದೇವಸ್ಥಾನ ಕಟ್ಟಡ ಕಟ್ಟದಂತೆ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯ
Leave a comment
Leave a comment