ತುಮಕೂರು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ತುಮಕೂರು ಜಿಲ್ಲಾ ಶಾಖೆವತಿಯಿಂದ ಶಾಂತಿ ಮತ್ತು ಕರುಣೆಯನ್ನು ಜಗತ್ತಿಗೆ ಬೋಧಿಸಿದ ಭಗವಾನ್ ಬುದ್ದನ 2568ನೇ ಜನ್ಮ ಜಯಂತಿಯನ್ನು ಅಮಾನಿಕೆರೆಯ ಅರಳಿ ವೃಕ್ಷದ ಬಳಿ ಸರಳವಾಗಿ ಆಚರಿಸಲಾಯಿತು.ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಬುದ್ದದೇವನ 2568ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಬುದ್ದನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.ಈ ವೇಳೆ ಮಾತನಾಡಿದ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್,ಮನುಷ್ಯ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ,ಕೋಶ,ಹೆಂಡತಿ, ಮಕ್ಕಳು ಎಲ್ಲವನ್ನು ತೊರೆದು ದೇವರನ್ನು ಹುಡುಕಾಟದಲ್ಲಿ ತೊಡಗಿದ ಬುದ್ದನಿಗೆ,ಹಲವಾರು ವರ್ಷಗಳ ತಿರುಗಾಟದ ನಂತರ,ಮನುಷ್ಯನ ಸಮಸ್ಯೆಗಳಿಗೆ ಮನುಷ್ಯನೇ ಕಾರಣ ಎಂಬುದನ್ನು ಅರಿತು,ಆಸೆಯೇ ದುಖಃಕ್ಕೆ ಮೂಲ ಎಂಬುದನ್ನು ಅರಿತು,ತಾನು ಕಂಡು ಕೊಂಡ ಸತ್ಯವನ್ನು ಇತರರಿಗೆ ಭೋಧಿಸುತ್ತಾ ಅಪಾರ ಶಿಷ್ಯ ಬಳಗವನ್ನು ಹೊಂದಿದ ವ್ಯಕ್ತಿ.ಆತನ ಪಂಚಶೀಲ ತತ್ವಗಳಿಗೆ ಇಡೀ ಜಗತ್ತಿನಾದ್ಯಂತ ಒಳ್ಳೆಯ ಮೌಲ್ಯವಿದೆ.ಆನಂದ,ನಾಗಾರ್ಜುನನoತಹ ಪ್ರಬುದ್ದ ಶಿಷ್ಯರ ಬಳಗದ ಮೂಲಕ ಜಗತ್ತಿಗೆ ಬುದ್ದ ಧಮಃವನ್ನು ಪ್ರಸರಿಸಿದರು. ಬೌಧ್ಧ ಧಮಃದ ತತ್ವಗಳಿಗೆ ಮಾರು ಹೋದ ಮೌರ್ಯ ಚಕ್ರವರ್ತಿ ಆಶೋಕ, ಕಳಿಂಗ ಯುದ್ದದಲ್ಲಿ ಆದ ಸಾವು,ನೋವಿನಿಂದ ನೊಂದು ಬೌಧಃ ಸ್ವೀಕರಿಸಿ,ತಮ್ಮ ಮಕ್ಕಳನ್ನು ಸಹ ಬೌದ್ದಧಮಃದ ಅನುಯಾಯಿಗಳಾಗಿ ಮಾಡಿದರು. ಕುರುಣೆ, ಪ್ರೀತಿ,ಅಹಿಂಸೆ ಬೌಧ್ಧ ಧಮಃದ ಮೂಲ ಮಂತ್ರಗಳು ಎಂದರು.ಬುದ್ದನ ಅನುಯಾಯಿಯಾಗಿ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಅಪಾರ ಬೆಂಬಲಿಗರೊoದಿಗೆ ಬಡವ,ಬಲ್ಲಿದ,ಮೇಲು,ಕೀಳು ಎಂಬ ಭೇಧಭಾವವಿಲ್ಲದಬೌದ್ಧ ಧಮಃವನ್ನು ಸ್ವೀಕಾರ ಮಾಡಿ,ಅದರಂತೆ ನಡೆದರು. ಯುವಜನರು ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕೆಂದು ಎನ್.ಕೆ.ನಿಧಿಕುಮಾರ್ ತಿಳಿಸಿದರು.