ಗೋಲಗುಮ್ಮಟಕ್ಕಿಂತ ಶರಣ ಗುಮ್ಮಟ ದೊಡ್ಡದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಜಿ. ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ನುಡಿ ಮಂಟಪ, ತಿಪಟೂರಿನ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಮತ್ತು ಕದಳಿ ಮಹಿಳಾ ವೇದಿಕೆ ಅವರ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ಡಾ. ಫ. ಗು. ಹಳ್ಳಕಟ್ಟಿ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನ ಮತ್ತು ದತ್ತಿ ಉಪನ್ಯಾಸ ದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
೧೨ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಸಂಗ್ರಹಿಸಲು ಡಾ. ಫ. ಗು. ಹಳ್ಳಕಟ್ಟಿ ಅವರು ಪಟ್ಟ ಶ್ರಮ, ಶ್ರದ್ಧೆಯಿಂದ ನಾವೆಲ್ಲ ವಚನಗಳನ್ನ ಓದಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಉದ್ಘಾಟನೆ ಮಾಡಿದ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ.ಎಂ.ಪರಮೇಶ್ವರಯ್ಯ ಅವರು ಮಾತನಾಡಿ ನಾಡಿಗೆ ಶರಣರ ಕೊಡುಗೆ ಅಪಾರವಾದದ್ದು, ಅವರ ಸಾಹಿತ್ಯವನ್ನು ಎಲ್ಲ ಅರಿಯಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಬಿ. ಕುಮಾರಸ್ವಾಮಿ ಅವರು ಮಾತನಾಡಿ ವಚನಗಳನ್ನು ಓದುವುದರ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶರಣ ವಚನಗಳನ್ನು ಕಲಿಯುವದರಿಂದ ವ್ಯಕ್ತಿಗಳು ಪರಿಪೂರ್ಣತೆಯನ್ನು ಮತ್ತು ಪಾಂಡಿತ್ಯವನ್ನು ಗಳಿಸಬಹುದು. ವಚನಗಳನ್ನು ವಿದ್ಯಾರ್ಥಿಗಳು ಕಲಿಯುವ ಕಡೆ ಹೆಚ್ಚು ಆಸಕ್ತಿ ವಹಿಸಬೇಕು. ಮುಂದಿನ ಜಗತ್ತಿಗೆ ಶರಣರ ಸಾಹಿತ್ಯವನ್ನು ಕೊಂಡೊಯ್ಯಬೇಕು ಎಂದು ವಿದ್ಯಾರ್ಥಿಗಳಿಗೆ ಡಾ. ಎಚ್.ಬಿ. ಕುಮಾರಸ್ವಾಮಿ ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ. ಬಿ. ಆರ್. ರೇಣುಕಾ ಪ್ರಸಾದ್ ಮಾತನಾಡಿ ಜಗತ್ತಿನ ಬೆಳಕು ವಚನ ಸಾಹಿತ್ಯದಿಂದ ಅಗಿದೆ ಎಂದರು.
ಗೋಲಗುಮ್ಮಟಕ್ಕಿಂತ ಶರಣ ಗುಮ್ಮಟ ದೊಡ್ಡದು

Leave a comment
Leave a comment