ಮೂರನೇದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಅನಿರ್ಧಾಷ್ಟಾವಧಿ ಧರಣಿ
ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ಧಾಷ್ಟಾವಧಿ ಧರಣಿ ಮೂರನೇ ದಿನಾವು ಮುಂದುವೆರೆದಿದ್ದು. ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಇಂದು ನೂರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರದ ವಿಳಂಭಧೋರಣೆಯನ್ನು ಖಂಡಿಸಿದ್ದಾರೆ. ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಇಡೇರಿಸಬೇಕೆಂದು ಘೋಷಣೆಗಳನ್ನು ಕೋಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಅವಧಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ ಅರೆಕಾಲಿಕ,ಅತಿಥಿ,ಬಾಡಿಗೆ ಮುಂತದ ಅವೈಜ್ಙಾನಿಕ ಹೆಸರಿಗಳಿಂದ ನಮ್ಮನ್ನು ಶೋಷಿತರನ್ನಾಗಿ ಮಾಡಿ, ಎರಡು ದಶಗಕಳಿಂದಲೂ ನಮ್ಮನ್ನು ಶೋಷಣೆಮಾಡುತ್ತ ಬಂದಿರುವ ರಾಜ್ಯಸರ್ಕಾರಗಳು ಇನ್ನಾದರು ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಇಡೇರಿಸಬೇಕೆಂದು ಆಗ್ರಹಿಸಿ, ಮುಂದಿನದಿನಗಳಲ್ಲಿ ಸರ್ಕಾರ ನಮ್ಮ ಬೇಡಿಕೆಗಳ ಕಡೆ ಗಮನಹರಿಸದಿದ್ದರೆ, ವಿದ್ಯಾರ್ಥಿಗಳು ಕಾಲೇಜು ತೊರೆದು ಅತಿಥಿ ಉಪನ್ಯಾಸಕರ ಪ್ರತಿಭನೆಗಳಲ್ಲಿ ಭಾಗಹಿಸುವ ಸದ್ಯತೆಗಳು ಇದ್ದು, ನಮ್ಮ ಬೇಡಿಕೆಗಳನ್ನು ಶ್ರೀಘ್ರವಾಗಿ ಇಡೇರಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಶಶಿಧರ್ ಮಾತನಾಡಿ ಪ್ರತಿಭಾರಿ ಅತಿಥಿ ಉಪನ್ಯಾಸಕರ ಪ್ರತಿಭಟನೆಯನ್ನು ಸರ್ಕಾರಗಳು ಹೊಡೆದುಹಾಳುವ ನೀತಿಯಮೂಲಕ ನಮ್ಮ ಪ್ರತಿಭಟನೆಯನ್ನು ಹತ್ತಿಕುತ್ತಿದ್ದಾರೆ.ನಾವುಗಳು ಈ ಭಾರಿ ನಮ್ಮ ವಿವಿಧ ಬೇಡಿಗೆಗಳನ್ನು ಇಡೇರಿಸುವವರೆಗೆ ನಮ್ಮ ಹೋರಾಟ ಬೀಡುವುದಿಲ್ಲ.ಎಲ್ಲಾ ವಿದ್ಯಾರ್ಹತೆ,ಅನುಭವ ಇದ್ದರು ನಮ್ಮಗಳಿಗೆ ಕಾಯಾಮಾತಿ ಮಾಡದೆ ಸರ್ಕಾಗಳು ಮಿನಾಮೇಷ ಎಣೆಸುತ್ತ ನಮ್ಮನ್ನು ಕಡೆಗಣೆಸುತ್ತಿರುವುದು ಖಂಡನಿಯ ಎಂದರು.
ಅತಿಥಿ ಉಪನ್ಯಾಸಕರ ಡಾ.ಮಲ್ಲಕಾರ್ಜುನ್ ಮಾತನಾಡುತ್ತ ಜಿಲ್ಲೆಯಲ್ಲಿನ ಅತಿಥಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭನೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಸಬೇಕು.ಭಿನ್ನಾಪ್ರಯಾಗಳನ್ನು ಬದಿಗೊತ್ತಿ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೇಳೆಯುವಂತೆ ಮಾಡಬೇಕು ಮತ್ತು ಲಿಖಿತ ಬರವಸೆ ನೀಡುವವರೆಗು ನಮ್ಮ ಅನಿರ್ಧಾಷ್ಟಾವಧಿ ಧರಣಿ ಮುಂದುವರೆಯುತ್ತದೆ ಎಂದರು.
ಮೂರನೇದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಅನಿರ್ಧಾಷ್ಟಾವಧಿ ಧರಣಿ

Leave a comment
Leave a comment