ತುಮಕೂರಿನ ವಿವಿಧೆಡೆ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ೧೧೮ನೇ ಜನ್ಮ ದಿನೋತ್ಸವವನ್ನು ಭಕ್ತಾದಿಗಳು ಅದ್ದೂರಿ ಯಿಂದ ಆಚರಿಸಿದರು. ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಗಳವರ ಜಯಂತ್ಯೋತ್ಸವ ಸಮಿತಿ ವತಿಯಿಂದ ತುಮಕೂರಿನ ಐದು ಸ್ದಳಗಳಲ್ಲಿ ಜಯತ್ಯೋತ್ಸವವನ್ನು ಆಚರಿಸಲಾಯಿತು ನಗರದ ಸೋಮೇಶ್ವರ ಪುರಂನ ಅರಳೀ ಮರದ ವೃತ್ತದಲ್ಲಿ ಕೃಷ್ಣಸ್ವಾಮಿ ನಾಯ್ಡು ನೇತೃತ್ವದಲ್ಲಿ ಬಾಳಾರಾಧ್ಯ ಕೇಬಲ್ ರಾಜು ಶ್ರೀ ನಿವಾಸ ಗೌಡ ಗಂಗಾಧರ್ ರಾಜಶೇಖರ್ ಚಂಗಾವಿ ರವಿ ಸೇರಿದಂತೆ ಹಲವಾರು ಯುವಕರು ಶ್ರೀ ಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆನಂತರ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಿದರು.