ಜ್ಞಾನ ವಿಕಾಸ ಕೇಂದ್ರದಿAದ ಬೀದಿನಾಟಕ ಕಾರ್ಯಕ್ರಮ
ತುಮಕೂರು :ತಾಲೂಕಿನ ಹೆಬ್ಬೂರು ವಲಯದಲ್ಲಿ ಹೊಸ ಜೆವಿಕೆ ಕೇಂದ್ರದ ಉದ್ಘಾಟನೆ ಹಾಗೂ ಜೀವ ಜಲ ಉಳಿಸಿ ಹಾಗೂ ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಬಗ್ಗೆ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ತುಮಕೂರು ಢಮರುಗ ಕಲಾ ತಂಡದ ದೇವರಾಜ್ ರವರ ಟೀಮ್ ಮೂಲಕ ನೀರಿನ ಸಂರಕ್ಷಣೆ, ಶೌಚಾಲಯ ಸ್ವಚ್ಛತೆ, ಕೃಷಿ ಚಟುವಟಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಬಿಸಿ ಟ್ರಸ್ಟ್) ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಯೋಜನೆ ಕಾರ್ಯಕ್ರಮಗಳ ಕುರಿತು ನಾಟಕ ಮಾಡಿದರು. ಈ ಸಂದರ್ಭದಲ್ಲಿ ತಾಲ್ಲೋಕಿನ ಯೋಜನಾಧಿಕಾರಿ ಶ್ರೀಮತಿಸುನೀತಾ ಪ್ರಭು ರವರು ಜ್ಞಾನ ವಿಕಾಸ ಕಾರ್ಯಕ್ರಮದ ಮಾತೃಶ್ರೀ ರವರ ಆಶಯ, ವೈಯಕ್ತಿಕ ಮತ್ತು ಗ್ರಾಮದ ಸ್ವಚ್ಛತೆ ಬಗ್ಗೆ ಮಾತನಾಡಿದರು.ಹಾಗೆ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ರಾಜಣ್ಣ ರವರು ಕಾನೂನು ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸಿಂಧು,ನಾಗಮಣಿ ಮೇಲ್ವಿಚಾರಕರಾದವಿಶ್ವನಾಥ್, ಸೇವಾಪ್ರತಿನಿಧಿ ಮೊಸೀನಾ ಉಪಸ್ಥಿತರಿದ್ದರು
ಜ್ಞಾನ ವಿಕಾಸ ಕೇಂದ್ರದಿAದ ಬೀದಿನಾಟಕ

Leave a comment
Leave a comment