ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ತುಮಕೂರು ನಗರಕ್ಕೆ ಆಗಮಿಸಿರುವ ಬಿ.ಎಸ್.ಎಫ್ ನ 6 ಕಂಪನಿಯ ಶಸ್ತ್ರಸಜ್ಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ನಗರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳೀಯರಲ್ಲಿ ಧೈರ್ಯ ತುಂಬುವ ಸಲುವಾಗಿ ನಗರದ ಪ್ರಮುಖ ಪ್ರದೇಶಗಳಾದ ಮರಳೂರು ದಿಣ್ಣೆ, ಶಾಂತಿನಗರ, ಗುಡ್ ಶೆಟ್ ಕಾಲೋನಿ, ಬನಶಂಕರಿ,

ಕುರಿಪಾಳ್ಯ, ಚಾಂದಿನಿ ಚೌಕ, ಪಿ ಎಚ್ ಕಾಲೋನಿ, ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಗಳು ಬಿಜಿ ಪಾಳ್ಯ, ಸಂತೆಪೇಟ್, ಮಂಡಿಪೇಟೆ, ಜಿ.ಸಿ.ಕಾಲೋನಿ, ಚಿಕ್ಕಪೇಟೆ, ಗುಂಚಿ ಸರ್ಕಲ್ ಮುಖಾಂತರ ರೂಟ್ ಮಾರ್ಚ್ ನಡೆಸಿ ಪೊಲೀಸ್ ಸಮುದಾಯ ಭವನದ ಹತ್ತಿರ ಮುಕ್ತಾಯಗೊಳಿಸಿದರು.

