ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಾಗೂ ಕರ್ನಾಟಕ ಗಾಂಧಿ ಭವ£ ಬೆಂಗಳೂರು
ಇವರ ಸಹಯೋಗದೊಂದಿಗೆ ರಾಮಸ್ವಾಮಿ ಅಯ್ಯಂಗಾರ್ ಒಂದು ನೆನಪು ಕಾರ್ಯಕ್ರಮ
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಾಂಧಿ ಅನುಯಾಯಿ ಸ್ವಾತಂತ್ರ್ಯ ಹೋರಾಟಗಾರ ಸಾಹಿತಿ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು.
ಗೋರೂರು ರಾಮಸ್ವಾಮಿ ರವರು ೧೯೦೪ ರಲ್ಲಿ ಹಾಸನ ಜಿಲ್ಲೆ ಗೋರೂರಿನಲ್ಲಿ ಜನಿಸಿದರು. ಅವರ ತಂದೆ ಶ್ರೀನಿವಾಸ ಅಯ್ಯಂಗಾರ್ ಮತ್ತು ತಾಯಿ ಲಕ್ಷ್ಮಮ್ಮ ರವರ ಪುತ್ರರಾದ ಇವರು ತನ್ನ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಆನಂತರ ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧಿ ಅವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ನಂತರ ಗಾಂಧೀಜಿಯ ಆಶ್ರಮ ಸೇರಿ ಗುಜರಾತಿ ವಿದ್ಯಾಪೀಠದ ವಿದ್ಯಾರ್ಥಿಯಾದರು. ಮದರಾಸಿನ ಲೋಕ ಮಿತ್ರ ಮತ್ತು ಭಾರತಿ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದರು
೧೯೩೩ರಲ್ಲಿ ಗೋರೂರು ತಮ್ಮ ಗ್ರಾಮಕ್ಕೆ ಮರಳಿ “ಮೈಸೂರು ಗ್ರಾಮ ಸೇವಾ ಸಂಘವನ್ನು ಸ್ಥಾಪಿಸಿದರು” ಖಾದಿ ಪ್ರಚಾರ. ಹರಿಜನೋದ್ಧಾರ. ವಯಸ್ಕರ ಶಿಕ್ಷಣ. ಗ್ರಾಮ ಕೈಗಾರಿಕೆಗಳು. ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
೧೯೪೨ರ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳುವಳಿಯಲ್ಲಿ ಭಾಗವಹಿಸಿದ್ದರು. ಅದು ಸ್ಥಾಪಿತವಾದ ಮೇಲೆ ಸುಮಾರು ೧೨ ವರ್ಷಗಳ ಕಾಲ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಅವರು ಕರ್ನಾಟಕದ ಏಕೀಕರಣಕ್ಕಾಗಿ ದುಡಿದರು.
ಇಂತಹ ಅನೇಕ ದೇಶೋದ್ಧಾರಕ ಕಾರ್ಯಗಳನ್ನು ಮಾಡಿದ ಗೋರೂರು ರಾಮಸ್ವಾಮಿ ಅಯ್ಯಂಗಾರ್
ರವರ ಒಂದು ನೆನಪಿನ ಕಾರ್ಯಕ್ರಮವನ್ನು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದರು.
ಗೋರೂರು ರಾಮಸ್ವಾಮಿಯವರು ಅನೇಕ ಕಾದಂಬರಿಗಳು. ಕಥೆಗಳು. ಅನುವಾದಗಳ ರಚನೆಕಾರರಾಗಿ ಬಹಳಷ್ಟು ಗೌರವವುಳ್ಳ ಪ್ರಶಸ್ತಿಗೆ ಬಾಧ್ಯರಾಗಿದ್ದರು.
ಒಟ್ಟಿನಲ್ಲಿ ಕಥೆ. ಕಾಧಂಬರಿ. ಕವನ. ಸಾಹಿತ್ಯ. ನಾಟಕ. ಸಂಸ್ಕೃತಿಗಳು. ನಶಿಸಿ ಹೋಗುತ್ತಿರುವ ಕಾಲದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ವೇ ಸರಿ.
ಗೋರೂರು ರಾಮಸ್ವಾಮಿಯವರು ತಮ್ಮ ೮೭ನೇ ವಯಸ್ಸಿನಲ್ಲಿ ಸೆಪ್ಟಂಬರ್ ೨೮ರಂದು ೧೯೯೧ ರಂದು ನಿಧನರಾದರು ಇಂದು ಅವರ ಜನ್ಮ ಜನ್ಮದಿನ ವಾದ ಕಾರಣ ಅರ್ಥಪೂರ್ಣ ಸ್ಮರಣೆಯ ಮೂಲಕ ನುಡಿ ನಮನ ಈ ಕಾರ್ಯಕ್ರಮವನ್ನು ಅವರ ಜನ್ಮದಿನವಾಗಿ ನೆನಪು ಮಾಡಿಕೊಳ್ಳಲಾಯಿತು.
ಇವರ ನೆನಪಿನ ಅಂಗವಾಗಿ ಕಾರ್ಯಕ್ರಮವನ್ನು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಶ್ರೀಮತಿ ವಸಂತಿ ಗೋರೂರು. ಅವರ ಪುತ್ರಿ ಕೆನಡಾ ದಿಂದ ಬಂದು ಉದ್ಘಾಟನೆ ನೆರವೇರಿಸಿದರು.
ಇದರ ಅಧ್ಯಕ್ಷತೆಯನ್ನು ಕೆ ಎಸ್ ಸಿದ್ದಲಿಂಗಪ್ಪ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರು ವಹಿಸಿದ್ದರು.
ಪ್ರಾಸ್ತಾವಿಕ ನುಡಿಯನ್ನು ಶ್ರೀಮತಿ ಬಾಹಾ ರ ಕುಮಾರಿಯವರು ನಿಕಟಪೂರ್ವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು. ಈ ಗೋರೂರು ಸಂಸ್ಕರಣೆ ಎಂಬ ಕಾರ್ಯಕ್ರಮದಲ್ಲಿ ಡಾಕ್ಟರ್ ಎಂ ಗೋವಿಂದರಾಯ ಸಹಪ್ರಾಧ್ಯಾಪಕರು ಕುಣಿಗಲ್ ಡಿ ಸುಂದರೇಶ್ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರು ಅರಕಲಗೂಡು, ಶಾಸನ ಜಿಲ್ಲೆ. ಶ್ರೀಮತಿ ಇಂದಿರಾ ಕೃಷ್ಣಪ್ಪ ಗೌರವ ಕಾರ್ಯದರ್ಶಿಗಳು ಗಾಂಧಿ ಭವನ ಬೆಂಗಳೂರು. ಡಾ. ಕಮಲಾ ನರಸಿಂಹ ಲೇಖಕಿ ತುಮಕೂರು. ಡಾಕ್ಟರ್ ಶ್ರೀನಿವಾಸನ್ ನಿವೃತ್ತ ಪ್ರಾಧ್ಯಾಪಕರು ಆರ್ ವಿ. ಕಾಲೇಜು ಗೋರೂರು ರವರ ವಿಶೇಷವಾದ ಈ ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ಸಾಹಿತಿಗಳು ಉಪಸ್ಥಿತರಿದ್ದರು
ರಾಮಸ್ವಾಮಿ ಅಯ್ಯಂಗಾರ್ ಒಂದು ನೆನಪು ಕಾರ್ಯಕ್ರಮ

Leave a comment
Leave a comment