ಇಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಗಾಣಗಾಪೂರದಲ್ಲಿ ಧರಣಿ ನೀರತ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ
ಅಫಜಲಪೂರ : ಮಾಜಿ ಸಚಿವ ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ ಅಭಿವೃದ್ಧಿಗಾಗಿ ಗಾಣಗಾಪುರ ಕ್ಷೇತ್ರದಲ್ಲಿ ನಡೆಯುವತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಮಂಗಳವಾರ ಮದ್ಯಾಹ್ನ 12:00 ಗಂಟೆಗೆ ಭೇಟಿ ನೀಡಿ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ಈಗಾಗಲೇ ಸಾಮಾಜಿಕ ಜಾಲತಾಣದ ಮುಖಾಂತರ ಬೆಂಬಲ ಸೂಚಿಸಿದ ಅವರು ಇದೀಗ ಧರಣಿ ನೀರತ ಸ್ಥಳಕ್ಕೆ ಖುದು ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಈಗಾಗಲೇ ಧರಣಿ ಸತ್ಯಾಗ್ರಹಕ್ಕೆ, ಶಾಸಕ ಎಂ ವಾಯ ಪಾಟೀಲ್, ಶಾಸಕ ಬಸವರಾಜ ಮತ್ತಿಮೂಡ, ನಿತೀನ್ ಗುತ್ತೇದಾರ, ಮಾಜಿ ಸಂಸದ ಉಮೇಶ ಜಾದವ, ಅವ್ವಣ್ಣ ಮ್ಯಾಕೇರಿ, ರಾಜಗೋಪಾಲ್ ರೆಡ್ಡಿ, ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಹಾಗೂ ಸಂಘಟನೆಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದು ಜೊತೆಗೆ ಇಂದು 6 ನೇಯ ದಿನದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಆದ ಮಾಲೀಕಯ್ಯಾ ಗುತ್ತೇದಾರ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತ ಶಿವಕುಮಾರ ನಾಟಿಕಾರ ಅವರಿಗೆ ಬೆಂಬಲ ಸೂಚಿಸಿ ಗಾಣಗಾಪುರ ದೇವಸ್ಥಾನ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಮೂಲಭೂತ ಸೌಕರ್ಯ ಹಾಗೂ ಕಾಶಿ ಮಾದರಿಯ ಅಭಿವೃದ್ಧಿಗಾಗಿ ನಡೆಯುವತ್ತಿರುವ ಹೋರಾಟಕ್ಕೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದ ರಾಜಕೀಯ ಗಣ್ಯರು ಕೂಡ ಬೆಂಬಲ ಸೂಚಿಸಿದ್ದು ಹಾಗೂ ರಾಜ್ಯದ ಬಹುತೇಕ ಗಣ್ಯರಿಂದ ಹಾಗೂ ತಾಲ್ಲೂಕಿನ, ಜಿಲ್ಲೆಯ ಜನತೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಮಾನ್ಯ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ , ಜಿಲ್ಲೆಯ ಸಂಸದರಾದ ರಾಧಕೃಷ್ಣ ದೊಡ್ಮನಿ, ಜಿಲ್ಲಾಧಿಕಾರಿಗಳು ಇಲ್ಲಿಯವರೆಗೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯದೇ ಇರುವದು ಕುತೂಹಲಕ್ಕೆ ಕಾರಣವಾಗಿದೆ.