ತುಮಕೂರು ನಗರದ ಹೃದಯ ಭಾಗದಲ್ಲಿರುವ ಬಾಳನ ಕಟ್ಟೆ ಮಂಡಿಪೇಟೆಯ ಪ್ರಸಿದ್ದವಾದ ಶ್ರೀ ಮಾರಿಯಮ್ಮ ನಗರ ಕಾಲೋನಿಯಲ್ಲಿ ಶ್ರೀ ಮಾರಿಯಮ್ಮ ದೇವಿಯ ೬೦ನೇ ವರ್ಷದ ಜಾತ್ರಾ ಮಹೋತ್ಸವವನ್ನು ಜೂನ್ ೨೭ ಮತ್ತು ೨೯ ರವರೆಗೆ ಹಮ್ಮಿಕೊಳ್ಳಲಾಗಿದೆ, ಶ್ರೀ ಮಾರಿಯಮ್ಮ ಯುವಕರ ಸಂಘದ ನೇತೃತ್ವದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿದೆ. ಜೂನ್ ೨೭ ರ ಮಂಗಳವಾರ ಬೆಳಗ್ಗೆ ೭ ಗಂಟೆಗೆ ವಿಶೇಷ ಪೂಜೆ ಕಣ್ಣುಧಾರಣೆ, ಮಧ್ಯಾಹ್ನ ೧೨ ಗಂಟೆಗೆ ತುಮಕೂರು ಅಮಾನಿಕೆರೆಯಿಂದ ಕರಗ ಮೆರವಣಿಗೆ ಮತ್ತು ಅನ್ನಸಂತರ್ಪಣಾ ಕಾರ್ಯಕ್ರಮ ದಿನಾಂಕ:೨೮-೬-೨೦೨೩ ಬುಧವಾರ ಮಧ್ಯಾಹ್ನ ೧.೩೦ ಕ್ಕೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊAದಿಗೆ ನಗರದ ಪ್ರಮುಖ ಬೀದಿಗಳಾದ ಮಂಡಿಪೇಟೆ, ಬಿಜಿ ಪಾಳ್ಯ ಸರ್ಕಲ್, ಬಿ.ಜಿ ಎಸ್ ಸರ್ಕಲ್, ಎಂ.ಜಿ ರಸ್ತೆ. ಕೋಟೆ ಆಂಜನೇಯ್ಯ ಮಾರ್ಗವಾಗಿ ಚರ್ಚ್ ಸರ್ಕಲ್ನಲ್ಲಿ ಮುಕ್ತಾಯಗೊಳ್ಳಲಿದೆ. ದಿನಾಂಕ: ೨೯-೬-೨೦೨೩ ಗುರುವಾರದಂದು ಮಾರಿಯಮ್ಮ ನಗರದಲ್ಲಿ ಮೆರವಣಿಗೆ ಮತ್ತು ಆರತಿ ಸೇವೆ ಮೂಲಕ ಪೂಜೆ ಮಡಲಕ್ಕಿ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ.