ದುಡಿಯುವ ಮಹಿಳೆಯರ ಘನತೆಯ ಅಸ್ಮಿತೆಗಾಗಿ ಹೋರಾಟ ಅನಿವಾರ್ಯ- ನ್ಯಾಯಾದೀಶರಾದ ನೂರುನ್ನೀಸ ಅಭಿಮತ
ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸ್ಲಂ ಜನಾಂದೋಲನ ಕರ್ನಾಟಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಂಟಿಯಾಗಿ ಇಂದು ನಗರದ ರವೀಂದ್ರ ಕಲಾ ನಿಕೇತನದಲ್ಲಿ ಪ್ರಸಕ್ತ ಸಂದರ್ಭದಲ್ಲಿ ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಸಂವಿಧಾನ ಕುರಿತು ವಿಭಾಗ ಮಟ್ಟದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಗಾರವನ್ನು ಉದ್ಘಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ದರ್ಶಿಗಳು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶ್ರೀಮತಿ ನೂರುನ್ನೀಸ ಮಹಿಳಾ ದಿನವನ್ನು ಸಾಮಾನ್ಯವಾಗಿ ಆಚರಿಸಲಾಗುತ್ತದೆ, ಆದರೆ ಇಂದು ವಿಶೇಷವಾಗಿ ಸ್ಲಂ ಸಂಘಟನೆಯಿಂದ ದುಡಿಯುವ ಮಹಿಳೆಯರ ದಿನವನ್ನು ಆಚರಿಸುತ್ತಿರುವುದು ಮೌಲ್ಯಯುತವಾಗಿದೆ. 1997 ರಲ್ಲಿ ರಾಜಸ್ಥಾನದ ಗುಜ್ಜರ್ ಸಮುದಾಯದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಬನ್ವಾರಿದೇವಿ ನೇತೃತ್ವದಲ್ಲಿ ವಿಶಾಖ ಸಂಘಟನೆ ಮುಂದಾದಾಗ ಈ ಸಮುದಾಯದ ಮುಖಂಡರು ಗುಂಪು ಬಲತ್ಕಾರ ಮಾಡಿ ಅವಮಾನಿಸಿದರು ಈ ಬಲತ್ಕಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ತೀರ್ಪು ನೀಡಿ 2013 ರಲ್ಲಿ ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವ ಕಾನೂನನ್ನು ಸಂವಿಧಾನದ ಆಶಯದಂತೆ ರೂಪಿಸಲಾಯಿತ್ತು. ಈ ಕಾನೂನು ಖಾಸಗಿ ಮತ್ತು ಸರ್ಕಾರಿ ಸ್ಥಳಗಳಲ್ಲಿ 10 ಕ್ಕಿಂತ ಹೆಚ್ಚು ಜನರು ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿಯನ್ನು ರಚಿಸಲಾಗಿದೆ. ದುಡಿಯುವ ಮಹಿಳೆಯರ ಘನತೆಯ ಅಸ್ಮಿತೆಗಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದ ಅವರು ಉದ್ಯೋಗಸ್ತ ಮಹಿಳೆಯರಿಗೆ ಕೆಲವೊಂದು ಜಾಗೃತಿಯಿಂದ ಕೆಲಸದ ಸ್ಥಳಗಳಲ್ಲಿ ಕಿರುಕುಳ ನೀಡುವುದನ್ನು ತಡೆಯಲಾಗುತ್ತಿದೆ ಆದರೆ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಅರಿವಿನ ಕೊರತೆಯಿಂದ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಪುರಾಣಗಳಲ್ಲಿ ಸ್ತ್ರೀಯರನ್ನು ದೇವತೆಗಳ ಸ್ಥಾನದಲ್ಲಿಟ್ಟು ಗೌರವಿಸಲಾಗಿದೆ. ಆದರೆ ವ್ಯವಸ್ಥೆ ಮಹಿಳಾ ಘನತೆಯನ್ನು ನೀಡುವಲ್ಲಿ ವಿಫಲವಾಗಿದೆ. ಇದಕ್ಕೆ ಪುರುಷರಸ್ಟೇ ಕಾರಣರಲ್ಲ. ನಮ್ಮ ಇಡೀ ವ್ಯವಸ್ಥೆ ಕಾರಣವಾಗಿದೆ. ಹಾಗಾಗಿ ಸಾಮಾನ್ಯ ಮಹಿಳೆಯರ ಸ್ಥಿತಿಗತಿ ಹೀನಾಯವಾಗಿದ್ದು. ಉದ್ಯೋಗಸ್ಥ ಮಹಿಳೆಯರು ಕುಟುಂಬ ನಿರ್ವಹಣೆ ಮಾಡಿದರೆ ದುಡಿಯುವ ಮಹಿಳೆಯರು ಸಮಾಜ ಮತ್ತು ದೇಶವನ್ನು ನಿರ್ವಹಿಸುತ್ತಿದ್ದಾರೆ. ಹೆಣ್ಣಿನ ಪಾತ್ರಕ್ಕೆ ನಾವು ಅಂಟಿಕೊಂಟಿದ್ದೇವೆ. ನಮ್ಮ ಪಾತ್ರಗಳು ಬದಲಾವಣೆಯಾದರೆ ನಮ್ಮ ಸಮಾಜ ಪರಿವರ್ತನೆಗೊಳ್ಳಲು ಸಾಧ್ಯವಾಗುತ್ತದೆ.
ತುಮಕೂರು ಜಿಲ್ಲೆಯಲ್ಲಿ ಎರಡು ಕೌಟುಂಬಿಕ ನ್ಯಾಯಾಲಯಗಳಿದ್ದು 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಬೇಕು, ತಂದೆ ತಾಯಿಗಳೇ ಮಕ್ಕಳಿಗೆ ಮಾಧರಿಯಾಗಬೇಕು. ಈ ಮೂಲಕ ಹೆಣ್ಣಿನ ವ್ಯಕ್ತಿತ್ವ ಸಮಾಜಕ್ಕೆ ಪ್ರೇರಣೆಯಾಗಿ ಮಹಿಳಾ ಅಸ್ಮಿತೆ ಮತ್ತು ಘನತೆಗೆ ಕಾರಣವಾಗುತ್ತದೆ. ಮಹಿಳೆಯರ ಮಾನಸಿಕವಾದ ಆರೋಗ್ಯದ ಕಡೆಯು ಹೆಚ್ಚು ಸಮಯ ನೀಡಬೇಕು. ಮಹಿಳೆಯರಿಗೆ ಪ್ರಾಕೃತಿಕವಾದ ಶಕ್ತಿಯಿದ್ದು ಈ ಮೂಲಕ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ. 18 ವರ್ಷದವೆಗೂ ಮಕ್ಕಳಿಗೆ ಮೊಬೈಲ್ ನೀಡದೆ ನಾವು ಇದಕ್ಕೆ ಬದ್ದರಾದರೆ ಭವಿಷ್ಯದಲ್ಲಿ ಸಂವಿಧಾನ ಖಾತ್ರಿ ಮಾಡಿರುವ ಮೂಲಭೂತ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಇಲ್ಲಿ ಸೇರಿರುವ ಮಹಿಳೆಯರ ಹೋರಾಟ ನಮಗೆ ಪ್ರೇರಣಾ ಶಕ್ತಿಯಾಗಿದೆ ಎಂದರು.
ದುಡಿಯುವ ಮಹಿಳೆಯರ ನಾಯಕತ್ವ ಬೇಕು – ಎ.ನರಸಿಂಹಮೂರ್ತಿ
1977 ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮಹಿಳೆಯರ ಹಕ್ಕುಗಳು ಜಾಗತೀಕ ಶಾಂತಿಯನ್ನು ಘೋಷಿಸಿ ಸುಸ್ಥಿರ ಅಭಿವೃದ್ಧಿ, ಶಾಂತಿ, ಸುರಕ್ಷತೆ, ಸಾಕ್ಷರತೆ ಸಾಧಿಸಲು ಮಹಿಳೆಯರ ಸಹಬಾಗಿತ್ವವನ್ನು ಪುರುಷ ಸಮಾನಾಗಿ ಉತ್ತೇಜಿಸಲು ಹಾಗೂ ಲಿಂಗ ಸಮಾನತೆ ಪ್ರಾಮುಖ್ಯತೆಯ ಅರಿವು ಪಡೆಯಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. 2024ರಲ್ಲಿ ಮಹಿಳಾ ದಿನದ ಥೀಮ್ ಆಗಿ ನ್ಯಾಯ, ಭರವಸೆ, ಶುದ್ಧತೆ ಮತ್ತು ಘನತೆಯನ್ನು ಸೂಚಿಸಲಾಗಿದೆ. 1909 ರಿಂದ 1913ರ ವರೆಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಕೂಲಿ ಚಳುವಳಿ ಮತ್ತು ಮತಧಾನದ ಹಕ್ಕಿನ ಹೋರಾಟಗಳು ಮಹಿಳಾ ದಿನಕ್ಕೆ ಪ್ರೇರೇಪಣೆಯಾಗಿವೆ. ಹಾಗಾಗಿ ದುಡಿಯುವ ಮಹಿಳೆಯರ ನಾಯಕತ್ವ ಸಮಾಜ ಪರಿವರ್ತನೆಗೆ ಬೇಕಿದೆ ಎಂದು ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂತರ್ಿ ತಮ್ಮ ಭಾಷಣದಲ್ಲಿ ಪ್ರತಿಪಾಧಿಸಿದರು. ಭಾರತದಲ್ಲಿ ಮಹಿಳಾ ಪ್ರಾಧಾನ್ಯತೆ ಸಿಂದೂ ನಾಗರೀಕತೆಯಲ್ಲಿ ಕಾಣುತ್ತದೆ ನಂತರದ ದಿನಗಳಲ್ಲಿ ಆದರೆ ಸ್ವತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಪುರುಷ ಪ್ರಧಾನತೆಯನ್ನು ಆವರಿಸಿಕೊಂಡು ಗಂಡಸ್ಸನ್ನು ಶ್ರೇಷ್ಠೀಕರಿಸಲಾಗಿದೆ. ದುಡಿಯುವ ಮಹಿಳೆಯರ ಶಿಕ್ಷಣ, ಆರೋಗ್ಯ, ಆಹಾರ, ಭೂಮಿ, ಮತ್ತು ವಸತಿ ಹಾಗೂ ಉದ್ಯೋಗದಂತಹ ಮೂಲಭೂತ ಪ್ರಶ್ನೆಗಳು ಮಹಿಳೆಯರ ಸಹಭಾಗಿತ್ವವನ್ನು ಹೆಚ್ಚಿಸಿ ನಾಯಕತ್ವವನ್ನು ಪ್ರೇರೇಪಿಸಬೇಕಿದೆ. ದೇಶಾದ್ಯಂತ ಶೇ.70ಕ್ಕೂ ಹೆಚ್ಚು ಮಹಿಳೆಯರು ವೇತನವಿಲ್ಲದೆ ದುಡಿಯುತ್ತಿದ್ದಾರೆ. ಮನೆಗೆಲಸ, ಅಡುಗೆ, ಮನೆ ಸ್ವಚ್ಚತೆ, ಬಟ್ಟೆ ತೊಳೆಯುವುದು, ಕುಟುಂಬ ನಿರ್ವಹಣೆಗಾಗಿ ಬೀದಿ ವ್ಯಾಪಾರ, ಹಮಾಲಿ, ಇನ್ನಿತರೆ ಕೆಲಸಗಳಿಗಾಗಿ ದಿನದಲ್ಲಿ 8 ಗಂಟೆಗಳನ್ನು ನೀಡುತ್ತಿದ್ದು ಕನಿಷ್ಠ ವೇತನ ನೀಡಿದರು ವಾರ್ಷಿಕವಾಗಿ 23 ಕೋಟಿಯಷ್ಟು ಮಾನವ ಶ್ರಮವನ್ನು ವ್ಯಯಿಸುತ್ತಿದ್ದಾರೆ. ತಮ್ಮ ಶ್ರಮಕ್ಕೆ ಕೂಲಿ ನಿರೀಕ್ಷೆಗೆ ನಗರ ಪ್ರದೇಶಗಳಲ್ಲಿ 75% ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದು ಈ ಮಹಿಳೆಯರನ್ನು ಸಂಘಟಿಸಿ ನಾಯಕತ್ವ ನೀಡಬೇಕಾಗಿದೆ ಎಂದರು.
ವೇಧಿಕೆಯಲ್ಲಿ ಮಹಿಳಾ ಸಾಂತ್ವಾನ ಕೇಂದ್ರದ ಪಾರ್ವತಮ್ಮ ರಾಜ್ಕುಮಾರ್, ಬೆಂಗಳೂರು ಸಾವಿತ್ರಿಬಾಪುಲೆ ಸಂಘಟನೆಯ ಕಾವೇರಿ, ದುಡಿಯುವ ಮಹಿಳೆಯರ ಸವಾಲುಗಳು ಮತ್ತು ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ ಮೇಲೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಲಂ ಸಮಿತಿಯ ಮುಖಂಡರಾದ ಅನುಪಮಾ ವಹಿಸಿದ್ದರು, ಸಾವಿತ್ರಿಬಾಪುಲೆ ಮಹಿಳಾ ಸಂಘಟನೆ ಚಿತ್ರದುರ್ಗ ಘಟಕದ ಸುಧಾ, ಬೆಂಗಳೂರು ಘಟಕದ ಮಂಜುಬಾಯಿ, ನಿವೇಶನ ರಹಿತರ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಸುಧಾ, ತುಮಕೂರು ಸ್ಲಂ ಸಮಿತಿಯ ಶಾರದಮ್ಮ, ಗುಲ್ನಾಜ್, ಮಾತಂಗಿ ಮಹಿಳಾ ಸಂಘಟನೆಯ ಶಾರದಮ್ಮ . ಶಂಕ್ರಯ್ಯ. ಕಣ್ಣನ್. ಚಕ್ರಪಾಣಿ. ಗೋವಿಂದರಾಜ್. ಅಶ್ವಥ್. ಜಾಬೀರ್ ಖಾನ್. ಪುಟ್ಟರಾಜು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ತಿರುಮಲಯ್ಯ, ಸ್ವಾಗತ ಮತ್ತು ಪ್ರಸ್ತಾವಿಕ ನುಡಿಗಳನ್ನು ಅರುಣ್ ನೆರವೇರಿಸಿದರು, ಹೋರಾಟದ ಗೀತೆಗಳನ್ನು ಕೃಷ್ಣಮೂರ್ತಿ.ರಾಘವೇಂದ್ರ, ಸತೀಶ್,ರಾಮಕೃಷ್ಣಯ್ಯ ಹಾಡಿದರು, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.