ಒಳ ಮೀಸಲಾತಿ ಸಮೀಕ್ಷೆ ಸ್ಲಂಗಳಲ್ಲಿ ಜನಜಾಗೃತಿ ಕರಪತ್ರ/ಪೋಸ್ಟರ್ ಬಿಡುಗಡೆ
ಕಳೆದ 30 ವರ್ಷಗಳ ಒಳಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯದ ಸಮಯ ನಿಗಧಿಯಾಗಿ ಕರ್ನಾಟಕ ಸರ್ಕಾರ ಮೇ 5 ರಿಂದ ರಾಜ್ಯಾದ್ಯಂತ ಮನೆ ಮನೆ ಸಮೀಕ್ಷೆಗೆ ಮುಂದಾಗಿದ್ದು ಈ ಸಮಯದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಡಾ.ಹೆಚ್ ಎನ್ ನಾಗಮೋಹನ್ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಆಯಾ ಜಿಲ್ಲಾಧಿಕಾರಿಗಳ ಸಮೀಕ್ಷೆಗೆ ಮುಂದಾಗಿದ್ದು ತುಮಕೂರು ನಗರದಲ್ಲಿ ಬರುವ 36 ಪರಿಶಿಷ್ಟ ಜಾತಿ ಕಾಲೋನಿಗಳು ತಮ್ಮ ಮೂಲ ಜಾತಿಗಳನ್ನು ಕಡ್ಡಾಯವಾಗಿ ನಮೂದಿಸಬೇಕು, ಬಹುತೇಕವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳು ಹಾಗೂ ಹೊಲಯ ಸಂಬಂಧಿತ ಜಾತಿಗಳು ಮತ್ತು ಅಲೆಮಾರಿ ಎಸ್.ಸಿ ಜಾತಿಗಳು ತಮ್ಮ ಮೂಲ ಜಾತಿಗಳನ್ನು ಸಮೀಕ್ಷೆ ಸಂದರ್ಭದಲ್ಲಿ ದಾಖಲಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದರು.
ಇಂದು ತುಮಕೂರು ಸ್ಲಂ ಭವನದಲ್ಲಿ ಒಳ ಮೀಸಲಾತಿ ಸಮೀಕ್ಷೆಯ ಜನಜಾಗೃತಿ ಕರಪತ್ರ/ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಮೊದಲ ಹಂತದಲ್ಲಿ ಮೇ 5 ರಿಂದ 17 ರವರೆಗೆ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ. 2ನೇ ಹಂತದಲ್ಲಿ ಮೇ 19 ರಿಂದ 21ರ ವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಭಿರಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ 3ನೇ ಹಂತದಲ್ಲಿ ಮೇ 19 ರಿಂದ 23 ರವರೆಗೆ ಸ್ವಯಂ ಘೋಷಣೆಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿರುತ್ತದೆ ಹಾಗಾಗಿ ಆಯೋಗದ ಶಿಫಾರಸ್ಸಿನಂತೆ ಗಣತಿದಾರರು ಮನೆ ಮನೆ ಸಮೀಕ್ಷೆಗೆ ಬರುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ತಮ್ಮ ಮಾಹಿತಿಯನ್ನು ನೀಡಬೇಕು. ಈ ಮಾಹಿತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ, ಎಂದು ತಮ್ಮ ಜಾತಿ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದರೆ. ಸಮೀಕ್ಷಾ ಸಂದರ್ಭದಲ್ಲಿ ತಮ್ಮ ಉಪ ಜಾತಿಗಳನ್ನು ಕಡ್ಡಾಯವಾಗಿ ದಾಖಲಿಸಬೇಕು. ಪರಿಶಿಷ್ಟ ಜಾತಿ ಸಮುದಾಯದವರ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಪಡೆದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಗಳು ಭೂಮಿ ಒಡೆತನ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಬೇಕು. ಇದಕ್ಕಾಗಿ ನಾವು ಮೂಲ ಜಾತಿಯನ್ನು 101 ಜಾತಿಯ ಪರಿಶಿಷ್ಟ ಜಾತಿಯ ಜನರು ದಾಖಲಿಸಿ ತಮ್ಮ ಜನಸಂಖ್ಯೆಗನುಗುಣವಾಗಿ ಪ್ರಾತಿನಿದ್ಯವನ್ನು ಪಡೆಯಬಹುದಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಜಾತಿಯ ಹೆಸರನ್ನು ಹೇಳಿಕೊಳ್ಳಲು ಸಾಧ್ಯವಿಲ್ಲದ ವಾತಾವರಣವಿದ್ದಲ್ಲಿ ಹಂತ-2 ಮತ್ತು 3ರಲ್ಲಿ ತಮ್ಮ ಮೂಲ ಜಾತಿಗಳನ್ನು ಘೋಷಿಸಿಕೊಳ್ಳಲು ಅವಕಾಶವಿದೆ. ಧಾರ್ಮಿಕ ಕಾರಣಗಳಿಗಾಗಿ ಜಾತಿಯನ್ನು ಮರೆಮಾಚುವುದು ಸೂಕ್ತವಲ್ಲ ಹಾಗಾಗಿ ಮೂಲ ಜಾತಿಗಳನ್ನು ದಾಖಲಿಸುವ ಉದ್ದೇಶಿದಿಂದ ಕೊಳಚೆ ಪ್ರದೇಶಗಳ ಎ.ಕೆ/ ಎಡಿ ಕಾಲೋನಿಗಳಲ್ಲಿ ಹಾಗೂ ಅಲೆಮಾರಿ ಪ್ರದೇಶಗಳಲ್ಲಿ ಜನಜಾಗೃತಿ ಕೈಗೊಳ್ಳಲಾಗಿದೆ. ಒಳ ಮೀಸಲಾತಿ ಜಾರಿ ಸಂಬಂಧವಾಗಿ ದತ್ತಾಂಶಗಳ ಕ್ರೂಡೀಕರಣಕ್ಕಾಗಿ ಮನೆ ಮನೆ ಸಮೀಕ್ಷೆ ನಡೆಸಲು ಆಯೋಗ ನಿರ್ಧರಿಸಿರುವುದು ಸ್ವಾಗತಾರ್ಹ ಆದರೆ ಸಮೀಕ್ಷೆ ಮಾಡುವ ವೇಳೆ ಜಾತಿಯನ್ನು ಸ್ಪಷ್ಟವಾಗಿ ದಾಖಲಿಸಬೇಕು. ಸುಳ್ಳನ್ನು ಒಳಗೆ ನುಸುಳದಂತೆ ಕ್ರಮವಹಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಶಂಕ್ರಯ್ಯ, ಜಾಬೀರ್ಖಾನ್, ಶಾರದಮ್ಮ, ಅರುಣ್, ತಿರುಮಲಯ್ಯ, ಅನುಪಮಾ, ಮಂಗಳಮ್ಮ, ಗಂಗಾ, ನಿರ್ಮಲ, ಭಾಗ್ಯ, ಕೃಷ್ಣಮೂರ್ತಿ, ಧನಂಜಯ್ ಮುಂತಾದವರು ಹಾಜರಿದ್ದರು.
ಒಳ ಮೀಸಲಾತಿ ಸಮೀಕ್ಷೆ ಸ್ಲಂಗಳಲ್ಲಿ ಜನಜಾಗೃತಿ ಕರಪತ್ರ/ಪೋಸ್ಟರ್ ಬಿಡುಗಡೆ

Leave a comment
Leave a comment