ತುಮಕೂರು: ನಗರದ ಸ್ಟಾರ್ ಕನ್ವೆನ್ಷನ್ ಹಾಲ್ ನಲ್ಲಿ ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ವತೀಯಿಂದ ಇಫ್ತಾರ್ ಕೂಟ ಹಾಗೂ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ರವರು ಮಾತನಾಡಿ ಎ.ಐ.ಕೆ.ಎಂ.ಸಿ.ಸಿ ಸಂಸ್ಥೆ ಸುಮಾರು ವರ್ಷಗಳಿಂದ ಈ ಸಂಸ್ಥೆ ದರಿದ್ರ ನಾರಾಯಣ ಸೇವೆ ಮಾಡಿಕೊಂಡು ಬರುತ್ತಿದ್ದು. ಈ ಕೆ.ಎಂ.ಸಿ.ಸಿ ಸಂಸ್ಥೆಯ ಪ್ರಮುಖ ಉದ್ದೇಶ ಸೇವಾಹಿ ಬರಮಹೋ. ಧರ್ಮಹ ಸೇವೆ ಬಡವರಿಗೆ ಮತ್ತು ದೀನ ದಲಿತರಿಗೆ ಸಹಾಯ ಹಸ್ತ ಸಲ್ಲಿಸುವುದು.
ಬಡವರು ಮತ್ತು ದಲಿತರು ಕೆಳಗೆ ಬೀಳುವಂತಹ ಅವರನ್ನು ಮೇಲೆತ್ತಿ ಸಹಾಯ ಹಸ್ತ. ಚಾಚುವುದು ಸಂಸ್ಥೆಯ ಉದ್ದೇಶ.
ಕೆಎಂಸಿಸಿ ಸಂಸ್ಥೆ ಹಲವು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಅದರಲ್ಲೂ ಆರೋಗ್ಯ ಮನುಷ್ಯನಿಗೆ ಪ್ರಾಮುಖ್ಯ ಅಂತಹ ಆರೋಗ್ಯ ನಾವೆಲ್ಲಾ ಆರೋಗ್ಯವಿದ್ದಾಗ ಆರೋಗ್ಯದ ಮಹತ್ವ ಗೊತ್ತಾಗುವುದಿಲ್ಲ ಆರೋಗ್ಯ ಕೈ ಕೊಟ್ಟಾಗ ಅದರ ಮಹತ್ವ ಏನು ಎಂಬುದು ತಿಳಿಯುವುದು ಅಂತವರ ಆರೋಗ್ಯಕ್ಕೆ ಭಗವಂತನಂತೆ ನಿಂತುಕೊಂಡು ಕೆಲಸ ಮಾಡುತ್ತಿದ್ದು. ನಾನಾ ರೀತಿಯ ಕ್ಯಾನ್ಸರ್ ಮತ್ತು ಬ್ಲಡ್ ಸಮಸ್ಯೆ ಆಹಾರ ಒದಗಿಸುವುದು ಇನ್ನಿತರೆ ಸಮಸ್ಯೆಗಳಿಗೆ ಕೆ.ಎಂ.ಸಿ.ಸಿ ಸಂಸ್ಥೆ ಕೊಡುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ.

ಎ.ಐ.ಕೆ.ಎಂ.ಸಿ.ಸಿ ಸಂಸ್ಥೆಯ ಬಾಹುಗಳು ತುಮಕೂರು ನಲ್ಲೂ ಸಹ ಕಾರ್ಯವೈಕರಿಗಳನ್ನು ಪ್ರಾರಂಭ ಮಾಡಿದೆ ಎರಡನೇ ವರ್ಷದ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ದಂದು 300 ಕು ಹೆಚ್ಚು ಜನಗಳಿಗೆ ರಂಜಾನ್ ಕಿಟ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ಇದು ಅಲ್ಲನಿಗೆ ಪ್ರಿಯವಾದಂತಹ ಕೆಲಸ ನಮಾಜಿಗಿಂತ ಇದು ಬಹು ಶ್ರೇಷ್ಠ. ಕೆಎಂಸಿಸಿ ತುಮಕೂರು ಸಂಸ್ಥೆಯು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಜನರಿಗೆ ಆರೋಗ್ಯ ಮತ್ತು ಅನೇಕ ಸಮಸ್ಯೆಗಳಿಗೆ ಮುಂದಾಗಲೆಂದು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷರಾದ ಎಂ ಕೆ ನೌಶಾದ್, ಮೌಲಾನ ಶರ್ಫೋದ್ದೀನ್ ಹುದವಿ, ಮುಖಂಡರಾದ ಅಬ್ದುಲ್ಲ ಮಾವಳ್ಳಿ, ಟಿ.ಸಿ ಮುನೀರ್ ಕೆ.ಎಂ.ಸಿ.ಸಿ ತುಮಕೂರು ಜಿಲ್ಲಾ ಅಧ್ಯಕ್ಷರಾದ ಹನೀಫ್ ಕುಂಜಾರ್, ಪದಾಧಿಕಾರಿಗಳಾದ ಹಾನಿ ಹುಸೇನ್, ಮುಜೀಬ್ ಸೈಕೋ, ನೌಶಾದ್, ಅಜಗಾರ್ ಶಾ, ಸಮಾಜಸೇವಕರಾದ ತಾಜುದ್ದೀನ್ ಶರೀಫ್ ಸೇರಿದಂತೆ ಹಲವರು ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.