ನಾನು ಗ್ರಾ.ಪಂ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ.ಅದಕ್ಕೆಂದೆ ಪ್ರತ್ಯೇಕ ಸ್ವತಂತ್ರ ವ್ಯವಸ್ಥೆ ಇದೆ.ಕೋ ಅರ್ಡಿನೇಟ್ ಮಾಡುವುದಷ್ಟೆ ನಮ್ಮ ಕೆಲಸ. ಜನರಿಗೆ ಕುಡಿಯುವ ನೀರು,ರಸ್ತೆ,ಚರಂಡಿ, ಘನತಾಜ್ಯ ವಿಲೇವಾರಿ, ಬಡ ಜನರಿಗೆ ನಿವೇಶನ,ಸೂರು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬುದೆ ನಮ್ಮ ಅದ್ಯತೆ. ಈ ನಿಟ್ಟಿನಲ್ಲಿ ಕ್ರಮವಹಿಸಿ,ಸಾಧ್ಯವಾದಷ್ಟು ಸಮಸ್ಯೆ ರಹಿತ ಪಂಚಾಯಿತಿ ರೂಪಿಸಿ, ಸಮಸ್ಯಗೆ ಹೆದರಿ, ವರ್ಗಾವಣೆ ಮೊರೆ ಹೋಗಬೇಡಿ ಎಂದು ಶಾಸಕ ಸುರೇಶಗೌಡ ಸಲಹೆ ನೀಡಿದರು.



