ತುಮಕೂರು:ಉನ್ನತ ಶಿಕ್ಷಣ ಸಚಿವರ ಸಭೆ ವಿಫಲವಾಗಿದ್ದು,ಅತಿಥಿ ಉಪನ್ಯಾಸಕರ ಧರಣಿ ಮುಂದುವರೆದಿದೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ಅತಿಥಿ ಉಪನ್ಯಾಸಕರು ಯಾವುದೆ ಊಹೆಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಜಿಲ್ಲಾಧ್ಯಕ್ಷರಾದ ಡಾ.ಧರ್ಮವಿರ.ಕೆ.ಎಚ್.ಕರೆಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದರು ಇಂದು ಅತಿಥಿ ಉಪನ್ಯಾಸಕರ ಧರಣಿ ಮುಂದುವರೆಸಿ ಮಾತನಾಡಿದರು.
ಇಂದು ಕಾಂಗ್ರೇಸ್ನ ಪ್ರಚಾರಸಮಿತಿಯ ಅಧ್ಯಕ್ಷ ರಾಯಸಂದ್ರ ರವಿ ಮತ್ತು ದಲಿತ ಮುಖಂಡ ಕೊಟ್ಟಶಂಕರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣ ಆಕಾಂಕ್ಷಿ ಲೋಕೇಶ್ ತಾಳಿಕೊಟ್ಟಿ ಅತಿಥಿ ಉಪನ್ಯಾಸಕರ ಧರಣಿ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಕಾಂಗ್ರೇಸ್ನ ಪ್ರಚಾರಸಮಿತಿಯ ಅಧ್ಯಕ್ಷ ರಾಯಸಂದ್ರ ರವಿ ಮಾತನಾಡಿ ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿರುವ ಬರವಸೆಗಳನ್ನು ಹಂತ-ಹAತವಾಗಿ ಬಗೆಹರಿಸಲ್ಲಿದೆ.ತಂತ್ರಿಕ,ಕಾನೂನು,ಹಣಕಾಸು ಇಲಾಖೆಯ ಸಹಲೆಗಳನ್ನು ಪಡೆದುಕೊಂಡು ನಿಮ್ಮ ಸಮಸ್ಯೆಯನ್ನು ಬಗೆಹರಿಸಲ್ಲಿದೆ,ಅತಿಥಿ ಉಪನ್ಯಾಸಕರು ಧೃತಿಗೆಡದೆ ಹೊರಾಟಮುಂದುವರೆಸಿ.ಜಿಲ್ಲಾಧಿಕಾರಿಗಳ ಕಣ್ಣಾಳತೆಯ ದೂರದಲ್ಲಿ ೯.ದಿನಾಗಳಿಂದ ಪ್ರತಭಟನೆ ಮಾಡುತ್ತಿದ್ದರು ಜಿಲ್ಲಾಧಿಕಾರಿಗಳು ಸೌಜನ್ಯಕ್ಕು ಬಂದು ಅತಿಥಿ ಉಪನ್ಯಾಸಕರ ಮನವಿಯನ್ನು ಸ್ವಿಕರಿಸದೆ ಇರುವುದು ದುರದೃಷ್ಟಕರ.ಶ್ರೀಘವಾಗಿ ಬಂದು ಮನವಿಯನ್ನು ಸ್ವಿಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ದಲಿತ ಮುಖಂಡ ಕೊಟ್ಟಶಂಕರ ಮಾತನಾಡಿ ಸಿದ್ದರಾಮಯ್ಯನವರು ಬಡವರ ಪರ ಇರುವ ಮುಖ್ಯಮಂತ್ರಿ ನುಡಿದಂತ್ತೆ ನಡೆಯುತ್ತಿರೆ,ಅವರು ನೀಡಿರುವ ಬರವಸೆಯನ್ನು ಈಡೆರಿಸಲ್ಲಿದ್ದಾರೆ,ಅತಿಥಿ ಉಪನ್ಯಾಸಕರ ಹೊರಾಟ ನ್ಯಾಯಯುತವಾಗಿದೆ,ನಿಮ್ಮ ಹೊರಾಟಮುಂದುವರೆಸಿ,ಜಿಲ್ಲಾ ದಲಿತ ಸಂಘರ್ಷ ಸಮಿತಿ ನಿಮ್ಮ ಹೊರಾಟದ ಬೆಂಬಲಕ್ಕೆ ಇದೆ ಎಂದರು.
ಶಿಕ್ಷಕರ ಕ್ಷೇತ್ರದ ಚುನಾವಣಾ ಆಕಾಂಕ್ಷಿ ಲೋಕೇಶ್ ತಾಳಿಕೊಟ್ಟಿ ಪ್ರತಿಭಟನ ಸ್ಥಳಕ್ಕೆ ಭೇಟಿನೀಡಿ ಪ್ರತಿಬಟನಕಾರನ್ನು ಉದ್ದೇಶಿಸಿ ಮಾತನಾಡುತ್ತ ಶಿಕ್ಷಣಕ್ಷೇತ್ರದಲ್ಲಿ ಅನುಭವ ಇಲ್ಲದವರು ಅಧಿಕಾರದಲ್ಲಿ ಇದ್ದರೆ ಉಪನ್ಯಾಸಕರು ಬೀದಿಗೆ ಬಿಳುತ್ತಾರೆ ಅದರೆ ರೀತಿ ಇಂದು ರಾಜ್ಯದಲ್ಲಿ ಹಾಗುತ್ತಿದೆ,ನಿಮ್ಮ ನ್ಯಾಯಯುತ ಬೇಡಿಕೆ ಈಡೆರುವವರೆಗು ನಿಮ್ಮ ಹೊರಾಟದಿಂದ ಹಿಂದೆ ಸರಿಯಬೇಡಿ,ನಿಮ್ಮ ಹೊರಾಟದ ಜೋತೆ ಸದಾ ನಾವು ಇರುತ್ತೆವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರ ಮನು, ಶಿವಲಿಂಗಯ್ಯ, ಕುಮಾರ್, ಶಂಕರಪ್ಪ,ಎಚ್.ಎನ್. ಹಾರೋಗೆರೆ, ಶಿವಣ್ಣತಿಮ್ಮಲಪುರ್, ನಾಗೇಂದ್ರಕುಮಾರ್, ಉಮಾದೇವಿ, ಶಶಿಧರ್, ಹೇಮಾವತಿ, ಸುನಿಲ್, ಡಾ.ಶಿವಯ್ಯ, ಮಾಹೇಶ್,ಹನುಮಂತರಾಜು ಮುಂತದವರು ಭಾಗವಹಿಸಿದ್ದರು.
ಉನ್ನತ ಶಿಕ್ಷಣ ಸಚಿವರ ಸಭೆ ವಿಫಲ

Leave a comment
Leave a comment