ಹೆಚ್ಚಿಸುತ್ತದೆ.
ಭಾರತ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಬಾಯರ್ನ ಕ್ರಾಪ್ ಸೈನ್ಸ್ ಡಿವಿಷನ್ನ ಕಂಟ್ರಿ ಡಿವಿಷನ್ ಹೆಡ್ ಸೈಮನ್- ಥಾಮ್ಸೈನ್ ವಿಬುಶ್ ಅವರು ಸಣ್ಣ ಹಿಡುವಳಿದಾರರು ಅಥವಾ ಸಣ್ಣ ರೈತರ ಮೌಲ್ಯಗಳನ್ನು ಅನ್ಲಾಕ್ ಮಾಡುವ ನಿಟ್ಟಿನಲ್ಲಿ ಸಲಹೆಗಳು ಗುಣಮಟ್ಟದ ಇನ್ಪಟ್ಗಳು, ಕ್ರೆಡಿಟ್, ತಂತ್ರಜ್ಞಾನಗಳು ಅಥವಾ ಮಾರುಕಟ್ಟೆಗಳಿಗೆ ಪ್ರವೇಶವನ್ನು ಕಲ್ಪಿಸುವ ಪ್ರಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಈ ಒಪ್ಪಂದದ ಪಾತ್ರವೂ ಪ್ರಮುಖವಾಗಿದೆ. ಡಿಜಿಲೀಕರಣವು ಈ ಪ್ರಕ್ರಿಯೆಯಲ್ಲಿ ಪ್ರಮುಖವಾಗಿದೆ ಎಂಬುದನ್ನು ನಾವು ನಂಬುತ್ತೇವೆ. ಈ ಹಿನ್ನೆಲೆಯಲ್ಲಿ ಸಣ್ಣ ರೈತರಿಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡಲು ಮತ್ತು ಅವರಿಗೆ ಉತ್ತಮವಾದ ವೇದಿಕೆಯನ್ನು ರಚಿಸುವ ನಿಟ್ಟಿನಲ್ಲಿ ನಾವು ಸಮರ್ಥರಾಗಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸಂಬAಧಿತ ಡಿಜಿಟಲ್ ಸಾಧನಗಳ ಬಳಕೆಯನ್ನು ಎದುರು ನೋಡುತ್ತಿದ್ದೇವೆ ಎಂದರು.
ಭಾರತದಲ್ಲಿ ಕಾರ್ಗಿಲ್ನ ಅಧ್ಯಕ್ಷರಾದ ಸೈಮನ್ ಜಾರ್ಜ್ರವರು ಮಾತನಾಡುತ್ತಾ ಕಾರ್ಗಿಲ್ನಲ್ಲಿ ನಾವು ನವೀನ ಮಾದರಿಯ ಡಿಜಿಟಲ್ ಸಲ್ಯೂಷನ್ಗಳನ್ನು ರಚನೆ ಮಾಡುವಲ್ಲಿ ನಿರಂತರಾಗಿದ್ದೇವೆ. ಭಾರತದ್ಯಾದಂತ ಇರುವ ರೈತರಿಗೆ ಉತ್ಪಾದಕತೆ ಮತ್ತು ಲಾಭದಾಯಕ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಾಯರ್ನೊಂದಿಗೆ ಸಹಭಾಗಿತ್ವ ಹೊಂದುತ್ತಿರುವುದಕ್ಕೆ ನಮಗೆ ಸಂತೋಷವೆನಿಸುತ್ತಿದೆ. ಈ ಪಾಲುದಾರಿಕೆಯು ಸುಸ್ಥಿರ ಮತ್ತು ಸಮೃದ್ಧ ಕೃಷಿಯತ್ತ ನಮ್ಮ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುತ್ತದೆ. ನಮ್ಮ ಈ ಸಂಯೋಜಿತ ಸಾಮರ್ಥ್ಯ ಪರಿಣಿತಿ ಮತ್ತು ಜಾಗತಿಕ ಸಂಪರ್ಕಜಾಲಗಳನ್ನು ನಿಯಂತ್ರಿಸುವ ಮೂಲದ ವಿಶ್ವದಾದ್ಯಂತ ರೈತರಿಗೆ ಬೆಂಬಲ ನೀಡುವುದು ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಚೇತರಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಜಿಟಲ್ ಸಾಥಿಯ ಸಂಸ್ಥಾಪಕರಾದ ರಾಮನ್ ಸಕ್ಸೇನಾರವರು ಮಾತನಾಡುತ್ತಾ ನಾವು ಈ ವರ್ಷದ ಆರಂಭದಲ್ಲಿ ನಮ್ಮ ಪ್ಲಾಟ್ಫಾರ್ಮ್ನಲ್ಲಿ ಕೃಷಿ ಸಲಹಾ ಚಂದಾದಾರಿಕೆ ಮತ್ತು ಕೃಷಿ ನಿರ್ವಹಣಾ ಸೇವೆಗಳ (ಮಣ್ಣು ಪರೀಕ್ಷೆ)ನ್ನು ಪರಿಚಯಿಸಿದ್ದೇವೆ. ರೈತರಿಗೆ ಅವರ ಕೃಷಿ ಅಗತ್ಯಗಳಿಗೆ ಸಮಗ್ರ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಈ ಪಾಲುದಾರಿಕೆ ಮೂಲಕ ಕೃಷಿ ಇನ್ಪುಟ್ ಮಾರುಕಟ್ಟೆ ಮೂಲಕ ರೈತರಿಗೆ ವ್ಯಾಪಕವಾದ ಶ್ರೇಣಿಯ ಗುಣಮಟ್ಟದ ಇನ್ಪುಟ್ಗಳು ಮತ್ತು ಉಪಕರಣಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಈ ಸೇವೆಗಳ ಮೂಲಕ ರೈತರು ತಮ್ಮ ಬೆಳೆಗಳ ಇಳುವರಿಯನ್ನು ಸುಧಾರಣೆ ಮಾಡಿಕೊಳ್ಳಬಹುದು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಗಿಲ್ ಸಹ ಭಾಗಿತ್ವವು ಮುಂದಿನ ಐದು ವರ್ಷಗಳಲ್ಲಿ ಭಾರತದಾದ್ಯಂತ ೩ ಮಿಲಿಯನ್ಗೂ ಅಧಿಕ ರೈತರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ್ದು, ಆರಂಭಿಕ ಹಂತದಲ್ಲಿ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಸಹಭಾಗಿತ್ವದ ಯೋಜನೆಗಳು ಜಾರಿಗೆ ಬರಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಇತರೆ ಭಾಗಗಳಿಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂಯೋಜಿತ ವಿಧಾನವು ರೈತರು ತಮ್ಮ ಉತ್ಪನ್ನಗಳ ಮಾರಾಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮಥ್ಯಗಳನ್ನು ಹೆಚ್ಚಿಸಲು ಕೃಷಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಹಾಗೂ ಕೃಷಿ ಪರಿಸರ ವ್ಯವಸ್ಥೆಯೊಳಗೆ ಸಮರ್ಥವಾದ ಹಾಗೂ ತಡೆರಹಿತವಾದ ಸಂಪರ್ಕಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಹಾದಿಯಲ್ಲಿ ಈಗಾಗಲೇ ೫೦ ಸಾವಿರ ಸಣ್ಣ ರೈತರು ನೋಂದಾಣಿ ಮಾಡಿಕೊಂಡಿದ್ದಾರೆ. ೨೦೨೭ ರ ವೇಳೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ಎಂಟು ರಾಜ್ಯಗಳ ೩ ಮಿಲಿಯನ್ಗೂ ಅಧಿಕ ಸಣ್ಣ ರೈತರನ್ನು ನೋಂದಾಣಿ ಮಾಡಿಸುವ ಮೂಲಕ ಸೇವೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ೨೦೩೦ ರ ವೇಳೆಗೆ ೧೦ ಮಿಲಿಯನ್ಗೂ ಅಧಿಕ ರೈತರಿಗೆ ಸುಸ್ಥಿರವಾದ ಕೃಷಿ ಪದ್ದತಿಗಳ ಬಗ್ಗೆ ತರಬೇತಿ ಮತ್ತು ಅವರ ಮಾರುಕಟ್ಟೆ ಪ್ರವೇಶ ಪ್ರಕ್ರಿಯೆಯನ್ನು ಸುಧಾರಣೆ ಮಾಡುವ ಕಾರ್ಗಿಲ್ನ ಜಾಗತಿಕ ಉದ್ದೇಶದ ಹಿನ್ನೆಲೆಯಲ್ಲಿ ಡಿಜಿಟಲ್ ಹಾದಿಯನ್ನು ಪರಿಚಯಿಸಲಾಗಿದ್ದು, ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮುನ್ನುಡಿ ಇಡಲಾಗಿದೆ.
ಡಿಜಿಟಲ್ ಸಲ್ಯೂಷನ್ ಮೂಲಕ ರೈತ ನೆರವಿಗೆ
Leave a comment
Leave a comment