ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರವತಿಯಿಂದ ಡಿಸೆಂಬರ್ 06ರ ಬುಧವಾರ ಸಂಜೆ 6.30 ಗಂಟೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಸಾಂಬಶಿವ ಪ್ರಹಸನ ಎಂಬ ನಾಕಟದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಕಾರದಲ್ಲಿ ಸಾಂಬಶಿವ ಪ್ರಹಸನ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು,ನಾಟಕದ ರಂಗವಿನ್ಯಾಸ ಮತ್ತು ನಿರ್ದೇಶಕ ಕಾಂತರಾಜು ಕೌತಮಾರನಹಳ್ಳಿ, ಶಿವಕುಮಾರ್ ತಿಮ್ಮಲಾಪುರ ಅವರುಗಳ ನಿರ್ವಹಿಸಲಿದ್ದಾರೆ

