ತುಮಕೂರು:ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಹಾತ್ಮಗಾಂಧಿ ಅವರ ೧೫೪ನೇ ಜನ್ಮ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರ ೧೧೯ನೇ ಜನ್ಮ ಜಯಂತಿ ಕಾರ್ಯಕ್ರಮಗಳನ್ನು ಜಿಲ್ಲಾಧ್ಯಕ್ಷ ಆರ್.ಸಿ.. ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಇಬ್ಬರು ಮಹಿನೀಯರ ಫೋಟೋಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ತತ್ವ ಸಿದ್ದಾಂತ ಮತ್ತು ಆದರ್ಶಗಳನ್ನು ಕುರಿತು ಮುಖಂಡರುಗಳು ಮಾತನಾಡಿ, ಜೆಡಿಎಸ್ ಪಕ್ಷ ಸಹ ಮಹಾತ್ಮಗಾಂಧಿ ಅವರು ನಡೆದು ಬಂದ ದಾರಿಯಲ್ಲಿ ಸಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ,ಮಹಾತ್ಮಗಾAಧಿ ಎಂದರೆ ಇಡೀ ಪ್ರಪಂಚಕ್ಕೆ ಪರಿಚಯ ಇರುವುದು ಅಹಿಂಸೆ ಮತ್ತು ಶಾಂತಿಯ ಸಂಕೇತವಾಗಿ ಮಾತ್ರ.ಈ ದೇಶದ ಬಡಜನರಿಗೆ ಮೈತುಂಬ ಬಟ್ಟೆ ದೊರೆಯುವಂತಹ ಸ್ಥಿತಿ ನಿರ್ಮಾಣವಾಗುವವರೆಗೂ ನಾನು ಮೈತುಂಬ ಬಟ್ಟೆ ಧರಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು, ಬದುಕಿನುದ್ದಕ್ಕೂ ಎರಡು ತುಂಡು ಬಟ್ಟೆಗಳಲ್ಲಿಯೇ ಜೀವನ ಸಾಗಿಸಿ,ತನ್ನ ಬದುಕನ್ನೇ ದೇಶದ ಜನರಿಗೆ ಸಂದೇಶವಾಗಿ ಬಿಟ್ಟು ಹೋದ ಮಹಾತ್ಮಗಾಂಧಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾದ ಭಾರತ ದೇಶದ ಎರಡನೇ ಪ್ರಧಾನಿಯಾಗಿ,ತಾವು ಅಧಿಕಾರ ನಡೆಸಿದ ಕೆಲವೇ ತಿಂಗಳಲ್ಲಿ ಶತೃ ರಾಷ್ಟçಗಳೊಡನೆ ಎರಡು ಯುದ್ದಗಳನ್ನು ಮಾಡಿ, ಈ ದೇಶಕ್ಕೆ ಸೈನಿಕ ಎಷ್ಟು ಮುಖ್ಯವೋ, ಅನ್ನ ಬೆಳೆಯುವ ರೈತನು ಅಷ್ಟೇ ಮುಖ್ಯ ಎಂಬುದನ್ನು ತೋರಿಸಿಕೊಟ್ಟ ಮಹಾತ್ಮ ಲಾಲ್ಬಹದ್ದೂರ್ ಶಾಸ್ತಿç.ಈ ಇಬ್ಬರು ನಾಯಕರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಕೆಲಸ ಮಾಡೋಣ ಎಂದು ಆರ್.ಸಿ.ಆಂಜನಪ್ಪ ನುಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ.೨೦೧೮ರ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ, ಮತದಾರರ ಒಲವು ಕಡಿಮೆಯಾಗಿಲ್ಲ. ಆದರೆ ನಿರ್ಣಾಯಕ ಹಂತದಲ್ಲಿ ಮತಗಳು ಹಂಚಿಕೆಯಾಗಿ ಪಕ್ಷ ಸೋಲು ಕಂಡಿದೆ.ಮುAದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿ ಮೇಲೇಳಲಿದೆ.ಜಿಲ್ಲೆಯಲ್ಲಿ ಯಾರು ಸಹ ನಮ್ಮ ಬಿಟ್ಟು ಹೋಗುವುದಿಲ್ಲ. ಅಲ್ಪಸಂಖ್ಯಾತರು ಸಹ ನಮ್ಮೊಂದಿಗೆ ಇರಲಿದ್ದಾರೆ ಎಂಬ ವಿಶ್ವಾಸವನ್ನು ಅಂಜನಪ್ಪ ವ್ಯಕ್ತಪಡಿಸಿದರು.
ತುಮಕೂರು:ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

Leave a comment
Leave a comment