ಬೆಂಗಳೂರಿನ ಭಾಷ್ ಫೌಂಡೇಶನ್ ಹಾಗೂ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ವೀರಕೇಸರಿ ಯುವ ಸಂಘ ಇವರ ಸಹಯೋಗದೊಂದಿಗೆ ಶನಿವಾರ ಸಿದ್ದಾರ್ಥ ಇಂಜಿನಿಯರಿoಗ್ ಕಾಲೇಜಿನಲ್ಲಿ ಉಚಿತ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾಹೇ ವಿವಿ ಯ ಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ, ದೇಶದಲ್ಲಿ ಸಾಧನೆ ಮಾಡಿರುವಂತಹ ಅಬ್ದುಲ್ ಕಲಾಂ , ಪ್ರಧಾನಮಂತ್ರಿಗಳು ಹೀಗೆ ಅನೇಕ ಸಾಧಕರು ತಮ್ಮ ಬಡತನ ಕಷ್ಟದಿಂದಲೇ ಮೇಲೆ ಬಂದವರು ಹಾಗಾಗಿ ಬಡತನ ಎನ್ನುವಂತಹದ್ದು ನಮ್ಮ ಸಾಧನೆಗೆ ಎಂದಿಗೂ ಕೂಡ ಅಡ್ಡಿಯಾಗುವುದಿಲ್ಲ ಪ್ರತಿಯೊಬ್ಬರು ಶ್ರಮಪಟ್ಟು ಕೆಲಸ ನಿರ್ವಹಿಸಿದರೆ ಖಂಡಿತವಾಗಿಯೂ ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಉದ್ಯೋಗವನ್ನು ಪಡೆಯಬಹುದು.ಇಂದು ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳಿವೆ ಅವುಗಳೆಲ್ಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಿದ್ದಾರ್ಥ ಇಂಜಿನಿಯರಿoಗ್ ಕಾಲೇಜಿನಲ್ಲಿ ಉಚಿತ ಉದ್ಯೋಗ ಮೇಳ

Leave a comment
Leave a comment