ತುಮಕೂರು : ತುಮಕೂರು ಜಿಲ್ಲೆಯ ಜನ -ಜಾನವಾರಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುವುದಕ್ಕೋಸ್ಕರ ವೆ ಈ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಕೈಗೆತ್ತಿಕೊಂಡಿದೆ .ಈ ಕಾಮಗಾರಿ ನಿಲ್ಲಿಸಬೇಕು ,ನಮ್ಮ ನೀರು ನಮ್ಮ ಹಕ್ಕು ಘೋಷಣೆ ಯೊಂದಿಗೆ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಸಚಿವ ಸೊಗಡುಮ ಶಿವಣ್ಣ ಹೇಳಿದರು.
ಅವರು ಇಂದು ಸಮೃದ್ದಿ ಗ್ರಾಂಡ್ ಹೋಟಲ್ ನಲ್ಲಿ ಜನಪ್ರತಿನಿಧಿಗಳು ಹಾಗೂ ರೈತಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕರೆದಿದ್ದ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರವು ಮಾಗಡಿ ಕೆರೆಗಳಿಗೆ ನೀರು ಹರಿಸಲು ಶ್ರೀರಂಗ ಏತ ನೀರಾವರಿ ಯೋಜನೆಯಡಿ ಹೇಮಾವತಿ ನೀರನ್ನು ಲಿಂಕ್ ಕೆನಾಲ್ ಮೂಲಕ ತೆಗೆದುಕೊಂಡು ಹೋಗಲು ಉದ್ದೇಶಿಸಿದ್ದು ಕಾಮಗಾರಿ ನಡೆಸಲಾಗುತ್ತಿದೆ ಈ ಕಾಮಗಾರಿ ಶೀಘ್ರವೆ ನಿಲ್ಲಿಸಬೇಕು ಎಂದು ಶಿವಣ್ಣ ಎಚ್ಚರಿಕೆ ನೀಡಿದರು.
ಕೊರಟಗೆರೆ ಪಟ್ಟಣ ಮತ್ತು ಮಾರ್ಗ ಮಧ್ಯದಲ್ಲಿ ಬರುವ ತುಮಕೂರು ತಾಲ್ಲೂಕು ಕೆಸ್ತೂರು ಕೊರಟಗೆರೆ ತಾಲೂಕಿನಲ್ಲಿ ತೋವಿನಕೆರೆ ಸೇರಿದಂತೆ 18 ಹಳ್ಳಿಗಳಿಗೆ ಶುದ್ಧ ವಾದ ಕುಡಿಯುವ ನೀರನ್ನು ಸರಬರಾಜು ಮಾಡಲು 2005-06 ರಲ್ಲಿ ಅಂದಾಜು 23 ಕೋಟಿ ಯೋಜನೆಗೆ ಅನುಮೋದನೆ ನೀಡಲಾಯಿತು. ಯೋಜನೆಗೆ ಬೇಕಾಗುವ ಹೇಮಾವತಿ ನೀರನ್ನು ಉಪಯೋಗ ಮಾಡಲು ಅನುಮತಿಯನ್ನು ಅಂದೇ ನೀಡಲಾಯಿತು. ಸಾರ್ವಜನಿಕರ ಹಲವು ಹೋರಾಟಗಳು, ಪತ್ರಿಕಾ ವರದಿಗಳು, ಚಿಂತಕರ ಮಾಹಿತಿ ಹಕ್ಕಿನ ಮೂಲಕ ಒತ್ತಾಯದ ನಂತರ ನಂತರ 2015 ರಲ್ಲಿ ಕಾಮಗಾರಿಯು ಟೆಂಡರ್ ಕರೆಯಲಾಯಿತು.
2017 ನೈಸರ್ಗಿಕ ಹಳ್ಳದ ಮೂಲಕ ಮಣುವಿನಕುರಿಕೆ ಕೆರೆಗೆ ಹೇಮಾವತಿ ಪೈಪ್ ಮೂಲಕ ನೀರು ಬಿಡುವ. ಕಾರ್ಯಕ್ರಮವನ್ನು ಅಂದಿನ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು. ಮೂರು ದಿನಗಳ ಕಾಲ ಪ್ರತಿ ದಿನ 2-3 ಗಂಟೆ ಬಿಟ್ಟು ನಂತರ ಸ್ಥಗಿತವಾಯಿತು. ಮತ್ತೆ ಇಲ್ಲಿಯವರೆಗೂ ನೀರು ಬಿಟ್ಟಿಲ್ಲ. ಕಾಮಗಾರಿ ಪ್ರಾರಂಭಿಸಲು ಹತ್ತು ವರ್ಷ, ಕಾಮಗಾರಿ ಮುಗಿದು 9 ವರ್ಷವಾದರೂ ಇದುವರೆಗೂ 18 ಹಳ್ಳಿಯ ಯಾವ ಗ್ರಾಮದವರ ಮನೆಗಳಿಗೆ ಒಂದು ಹನಿ ಹೇಮಾವತಿ ನೀರು ಹೋಗಿಲ್ಲ. 18 ಹಳ್ಳಿಗಳ ಜನರ ಕುಡಿಯುವ ನೀರಿಗೆ ಹಂಚಿಕೆಯಾಗಿರು ಹೇಮಾವತಿ ನೀರು 19-20 ವರ್ಷವಾದರೂ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಅಥಾವ ಅಲ್ಪ ಪ್ರಮಾಣದಲ್ಲಿ ಯಾಗಲ್ಲಿ ಬಿಟ್ಟಿರುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ ತುಮಕೂರು ಜಿಲ್ಲೆಗೆ 24 ಟಿ ಎಂ ಸಿ ನೀರು ಹಂಚಿಕೆಯಾಗಿದೆ.ಈ ಹಂಚಿಕೆಯಲ್ಲಿ ಮಾಗಡಿ ತಾಲ್ಲೂಕಿಗೂ ನೀರು ತೆಗೆದುಕೊಂಡು ಹೋಗಲು ಸರ್ಕಾರ ಮುಂದಾಗಿದೆ .ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಿ ತೆಗೆದುಕೊಂಡು ಹೋಗಲಿ ನಮ್ಮ ಅಭ್ಯಂತರವಿಲ್ಲ.ಪೈಪ್ ಲೈನ್ ಮೂಲಕ ಮಾಗಡಿಗೆ ನೀರು ಬಿಡೆವೆ,ಕಾಮಗಾರಿಯನ್ನು ಸರ್ಕಾರ ನಿಲ್ಲಿಸಬೇಕು ಇಲ್ಲವೆಂದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು.
ಜಿಲ್ಲಾ ಪಂಚಾಯಿತಿನ ಕೆಡಿಪಿ ಸಭೆಯಲ್ಲಿ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿ ನಿಲ್ಲಿಸಬೇಕು ಎಂದು ತಿರ್ಮಾನ ಮಾಡಲಾಗಿತ್ತು ಅದರು ಕಾಮಗಾರಿ ಕೈಗೊಂಡಿರುವುದು ಯಾವ ಪುರುಷಾರ್ಥ ಕ್ಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು ಎಂದರು.ಈ ಲಿಂಕ್ ಕೆನಾಲ್ ಯೋಜನೆಯಿಂದ ತುಮಕೂರು ಜಿಲ್ಲೆಯ ಇಪ್ಪತ್ತೆರಡು ಹಳ್ಳಿಗಳಿಗೆ ನಷ್ಟ ಉಂಟಾಗುತ್ತದೆ ಎಂದು ಕೃಷ್ಣಪ್ಪ ಹೇಳಿದರು.
ಮಾಜಿ ಶಾಸಕ ಎಚ್ ನಿಂಗಪ್ಪ ಮಾತನಾಡಿ ರಾಮನಗರಕ್ಕೆ ಬೇಕಾದರೆ ಶಿಂಷಾ ಸೇರಿ ಇತ್ತರೆ ನದಿಗಳಿಂದ ನೀರು ತೆಗೆದುಕೊಂಡುಹೋಗಲಿ ,ಜಿಲ್ಲೆಗೆ ಹಂಚಿಕೆಯಾಗಿರುವ ನದಿ ನೀರನ್ನು ಮಾಗಡಿಗೆ ಬಿಡೆವು, ಹೇಮಾವತಿಯಲ್ಲಿ ನೀರೆ ಇಲ್ಲದಿರುವಾಗ ಈ ಯೋಜನೆ ಕೈಗೆತ್ತಿಕೊಂಡಿರುವುದು ವಿಪರ್ಯಾಸ ಎಂದಿದ್ದಾರೆ.
ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯ ಪೈಪ್ ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಲು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ.

Leave a comment
Leave a comment